Connect with us

Dvgsuddi Kannada | online news portal | Kannada news online

ಮಂಗಳವಾರ ರಾಶಿ ಭವಿಷ್ಯ

ಜ್ಯೋತಿಷ್ಯ

ಮಂಗಳವಾರ ರಾಶಿ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಡಿಸೆಂಬರ್-08,2020

ಸೂರ್ಯೋದಯ: 06:33, ಸೂರ್ಯಸ್ತ: 17:49

ಶಾರ್ವರಿ ನಾಮ ಸಂವತ್ಸರ
ಕಾರ್ತಿಕ ಮಾಸ, ದಕ್ಷಿಣಾಯಣ

ತಿಥಿ: ಅಷ್ಟಮೀ – 17:16 ವರೆಗೆ
ನಕ್ಷತ್ರ: ಹುಬ್ಬ – 13:47 ವರೆಗೆ
ಯೋಗ: ಪ್ರೀತಿ – 25:43+ ವರೆಗೆ
ಕರಣ: ಕೌಲವ – 17:16 ವರೆಗೆ ತೈತಲೆ – 28:20+ ವರೆಗೆ

ದುರ್ಮುಹೂರ್ತ: 08:48 – 09:34
ದುರ್ಮುಹೂರ್ತ : 22:55 – 23:46

ರಾಹು ಕಾಲ: 15:00 – 16:30
ಯಮಗಂಡ: 09: – 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 07:35 – 09:08 29:43+ – 31:14+
ಅಭಿಜಿತ್ ಮುಹುರ್ತ: 11:49 – 12:34

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
_______________________

ಮೇಷ ರಾಶಿ :(ಅಶ್ವಿನಿ ಭರಣಿ ಕೃತಿಕ 1)
ಮಕ್ಕಳ ಮತ್ತು ಮಾತಾಪಿತೃ ಆರೋಗ್ಯದ ಬಗ್ಗೆ ಗಮನವಿರಲಿ . ರಿಯಲ್ ಎಸ್ಟೇಟ್, ವ್ಯಾಪಾರ ಅನಿರೀಕ್ಷಿತ ತಿರುವು ಪಡೆದು ಅಭಿವೃದ್ಧಿಯ ಪಥಕ್ಕೆ ಬರಲಿದೆ. ಕೃಷಿ ಉತ್ಪನ್ನ ನಿರೀಕ್ಷಿತ ಆದಾಯದಲ್ಲಿ ಲಾಭ. ಕೋರ್ಟ್, ಕಚೇರಿ ಆಗಬೇಕಾದ ಕೆಲಸಗಳಲ್ಲಿ ಯಶಸ್ಸುಗಳಿಸುವಿರಿ. ಸಂಗಾತಿಯ ಸಲಹೆಗಳು ಪಾಲಿಸಿದರೆ ಲಾಭ. ದಿನಪೂರ್ತಿ ಆರಂಭದಲ್ಲಿ ತಾಳ್ಮೆಯಿಂದ ಇದ್ದು, ಮಧ್ಯದಲ್ಲಿ ಅತ್ಯಂತ ಕಠಿಣ ಸ್ವಭಾವ ಹೊಂದುವಿರಿ. ಉದ್ಯೋಗಿಗಳಿಗೆ ಉತ್ತಮವಾಗಿದೆ . ಸಂಗಾತಿಯ ಆಸೆ ಆಕಾಂಕ್ಷಿಗಳು ಈಡೇರುತ್ತವೆ. ಕಣ್ಣಿನ ತೊಂದರೆ ಕಾಡಲಿದೆ. ಶಸ್ತ್ರಚಿಕಿತ್ಸೆ ಸಂಬಂಧ ವೈದ್ಯರಿಗೆ ಭೇಟಿ. ಸಂಜೆ ಒಳಗೆ ಧನಪ್ರಾಪ್ತಿ. ಸಂಗಾತಿ ಜೊತೆ ಪ್ರವಾಸ. ಮನೆಯಲ್ಲಿ ಶುಭಮಂಗಲ ಕಾರ್ಯಾರಂಭ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

 

ವೃಷಭರಾಶಿ:(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಪ್ರೇಮಿಗಳ ಮದುವೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಪದೇ ಪದೇ ವಾಹನ ದುರಸ್ತಿ. ಹೊಸದಾಗಿ ಉದ್ಯಮ ಆರಂಭಿಸಿರುವವರಿಗೆ ಭವಿಷ್ಯಕ್ಕೆ ನಾಂದಿಯಾಗಲಿದೆ, ಸೂಕ್ತ ರಿಯಾಯಿತಿಗಳು ದೊರೆಯುತ್ತವೆ. ಮಹಿಳಾ ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ. ಭೂವ್ಯವಹಾರ ಅಭಿವೃದ್ಧಿ ಉತ್ತಮವಾಗಿರುತ್ತದೆ. ಹಿರಿಯರ ಆರೋಗ್ಯ ಸುಧಾರಣೆಯಿಂದ ಮನೆಯಲ್ಲಿ ನೆಮ್ಮದಿ. ಗಣಿ ಉದ್ಯಮ ನಡೆಸುವವರಿಗೆ ಅಡತಡೆಗಳು ನಿವಾರಣೆಯಾಗುತ್ತವೆ. ಮನೆ ನಿರ್ಮಾಣ ಸೂಕ್ತ ಸಮಯ. ಪ್ರೇಮಿಗಳ ಮದುವೆ ಪ್ರಸ್ತಾಪವಾಗಲಿದೆ. ಇದರಿಂದ ತುಂಬಾ ಖುಷಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ ರಾಶಿ : (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಮಹಿಳಾ ರಾಜಕಾರಣಿಗಳ ಬಹಳ ದಿನಗಳ ಬೇಡಿಕೆ ಈಡೇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ವೇತನದಲ್ಲಿ ಸಮಸ್ಯೆ. ಶಿಕ್ಷಕವೃಂದದವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಹಿರಿಯ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಲಿದೆ, ಸಹೋದ್ಯೋಗಿಗಳು ನಿಮಗೆ ಸಹಕರಿಸುವರು. ನಿಮ್ಮ ಅಂಗರಕ್ಷಕರ ಬಗ್ಗೆ ಗಮನವಿರಲಿ. ವಿಜ್ಞಾನಿಗಳಿಗೆ ಅವರ ಸಂಶೋಧನ ಹೆಚ್ಚಿನ ಕ್ರಿಯಾಶೀಲತೆ ಪಡೆಯುವುದು, ಸಂಶೋಧನಾ ಭತ್ಯೆಗಳು ದೊರೆಯುತ್ತವೆ. ಸಂಗಾತಿಯ ಜೊತೆಗೆ ಕಾವೇರಿದ ಮಾತಾಗಬಹುದು. ಆಸ್ತಿ ದಾಖಲಾತಿಯ ಬಗ್ಗೆ ಚಿಂತಿಸಿವಿರಿ. ಧಾನ್ಯ ಬೀಜಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಲಿದೆ. ಒಡಹುಟ್ಟಿದವರ ಜೊತೆ ಮನಸ್ತಾಪ. ಅನಾಥರಿಗೆ ಸಹಾಯಮಾಡಿ ಸಂತೋಷಪಡುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ ರಾಶಿ : (ಪುನರ್ವಸು 4 ಪುಷ್ಯ ಆಶ್ಲೇಷ)
ವರ್ಗಾವಣೆಗಾಗಿ ಮಾಡಿದ ಪ್ರಯತ್ನ ಯಶಸ್ಸು. ದೂರಪ್ರಯಾಣ ಮಾಡಬೇಡಿ. ಕುಟುಂಬದಲ್ಲಿ ನೆಮ್ಮದಿ. ಸಂಗಾತಿ ಜೊತೆಗಿನ ವಿರಸ ವಾತಾವರಣ ಕಾಣಬಹುದು. ತರಕಾರಿ ಮತ್ತು ಹೂವಿನ ಬೆಳೆಗಾರರಿಗೆ ಆದಾಯದಲ್ಲಿ ಏರಿಕೆ. ಪ್ರೇಮಿಗಳ ಮನಸ್ಸಿನ ತೃಪ್ತಿಗಾಗಿ ಮನೆಯಲ್ಲಿ ಮದುವೆ ಬಗ್ಗೆ ಚರ್ಚೆ ಮಾಡುವಿರಿ. ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ವಿಳಂಬ ಸಾಧ್ಯತೆ. ಪತ್ನಿಯ ಮುನಿಸು ತವರು ಮನೆಯಿಂದ ಬಂದೇ ಬರುವಳು. ಆಹಾರ ವ್ಯತ್ಯಾಸದಿಂದ ವಾಂತಿ ಭೇದಿ ಸಂಭವ. ಹೈನುಗಾರಿಕೆಯ ಉತ್ಪನ್ನಗಳನ್ನು ಮಾರುವವರಿಗೆ ಆದಾಯದಲ್ಲಿ ಏರಿಕೆ. ಸಾಲ ಮರುಪಾವತಿಗೆಪ್ರಯತ್ನಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ ರಾಶಿ :(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಶತ್ರುಗಳೊಂದಿಗೆ ವಾದ-ವಿವಾದ ಮಾಡದಿರುವುದು ಉತ್ತಮ. ಸ್ತ್ರೀಯರಿಗೆ ಸಾಲ ನೀಡಿ. ಭೂವ್ಯವಹಾರ ಮಾಡುವಾಗ ಬಹಳ ಎಚ್ಚರವಿರಲಿ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಲಾಭಕ್ಕೆ ಕೊರತೆ ಇಲ್ಲ. ಉಸಿರಾಟದ ತೊಂದರೆ ಇರುವವರು ಸ್ವಲ್ಪ ಎಚ್ಚರದಿಂದಿರಿ. ಉದ್ಯಮ ದಾರರಿಗೆ, ರಾಜಕಾರಣಿಗಳಿಗೆ, ಹಾಗೂ ಅವರ ಅನುಯಾಯಿಗಳಿಗೆ ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸಾಮಾಜಿಕ ಕಾರ್ಯಕರ್ತರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಾನ ಭದ್ರತೆ ತೊಂದರೆ ಇರುತ್ತದೆ. ಕೆಲಸದ ಹುಡುಕಾಟದಲ್ಲಿ ಸಮಯ ಕಳೆಯುವಿರಿ. ಮನೆ ಕಟ್ಟಡದ ಯೋಜನೆ ಮುಂದೂಡುವುದು ಉತ್ತಮ. ಮದುವೆ ಬಗ್ಗೆ ಚಿಂತಿಸುವಿರಿ. ಸಾಲ ಮರು ಪಾವತಿಯಲ್ಲಿ ವಿಳಂಬ ಸಾಧ್ಯತೆ. ಮೇಲಾಧಿಕಾರಿಗಳಿಗೆ ಹೆಚ್ಚಿನ ಒತ್ತಡ ಬೀಳಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ ರಾಶಿ: (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಸಹೋದ್ಯೋಗಿಗಳಿಂದ ಕೆಲಸದಲ್ಲಿ ತೊಂದರೆ ಕಾಡಲಿದೆ. ಪತ್ನಿಯ ಉತ್ತಮ ಸಹಕಾರ ಪಡೆದು ಕಾರ್ಯಸಾಧನೆ ಮಾಡುವಿರಿ. ಹಿರಿಯ ಅಧಿಕಾರಿಗಳ ಒಡನಾಟನಿಂದ ತಡೆಹಿಡಿದ ನಿಮ್ಮ ಕೆಲಸಗಳು ಮಾಡಿಕೊಳ್ಳುವಿರಿ. ನದಿ ಸಮುದ್ರ , ವಿದ್ಯುತ್ ಶಕ್ತಿ, ವಾಹನ ಚಾಲಕರು ಮುಂತಾದ ಕಡೆಗಳಲ್ಲಿ ಕೆಲಸ ಮಾಡುವವರು ಎಚ್ಚರದಿಂದಿರಿ. ಸ್ವಯಂ ಉದ್ಯೋಗ ಮಾಡುವವರಿಗೆ ವ್ಯವಹಾರ ಆದಾಯ ಹೆಚ್ಚುತ್ತದೆ. ನಿರುದ್ಯೋಗಿಗಳಿಗೆ ಅನುಕೂಲತೆ ಹೆಚ್ಚುತ್ತವೆ ಸದುಪಯೋಗಪಡಿಸಿಕೊಳ್ಳಿ. ಸಂಗಾತಿ ಜೊತೆಗಿನ ಒಡನಾಟ ಹಾಗೂ ಮಧುರ ಪ್ರೇಮ ನಿಮ್ಮಲ್ಲಿ ಉತ್ಸಾಹ ಮೂಡುತ್ತದೆ. ಹೆಂಡತಿಯ ಸಹಕಾರದಿಂದ ವ್ಯವಹಾರಗಳು ಸರಿಯಾಗಿ ಮುನ್ನಡೆಯುತ್ತದೆ. ಕಬ್ಬಿಣ ,ಸಿಮೆಂಟ್ ,ಮರಳು, ಜಲ್ಲಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ವೃದ್ಧಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ ರಾಶಿ :(ಚಿತ್ತಾ 3 4 ಸ್ವಾತಿ ವಿಶಾಖ 1 2 3).
“ಕಾಯಕವೇ ಕೈಲಾಸ” ಎಂದು ತಿಳಿದ ನೀವು ದೈನಂದಿನ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ಆಸ್ತಿ ವಿಷಯದಲ್ಲಿ ಸಹೋದರ ಹಾಗೂ ಸಹೋದರಿಯರ ಮಧ್ಯೆ ಸ್ವಲ್ಪ ಗೊಂದಲಗಳು ಏಳಬಹುದು. ನಿಮ್ಮ ವ್ಯವಹಾರದಲ್ಲಿ ನಿಮಗೆ ಅನುಕೂಲಕರ ವಾತಾವರಣ ಇದ್ದು, ಲಾಭ ತರುತ್ತವೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಕೃಷಿಗೆ ಸಂಬಂಧಿತ ಯಂತ್ರಗಳಿಂದ ಲಾಭ. ಜೀವವಿಮೆ ಸಂಬಂಧಿಸಿದ ಹಣ ಹೂಡಿಕೆ ಇಟ್ಟಿರುವವರಿಗೆ ಅದರಿಂದ ಆದಾಯ ಬರುತ್ತದೆ. ಆಧುನಿಕರಣ ಕೃಷಿ ಚಟುವಟಿಕೆಗಳು ಆರಂಭಗೊಂಡು, ರೈತಾಪಿಗಳಿಗೆ ಸಂತೋಷವಿರುತ್ತದೆ. ಆಯುರ್ವೇದ ಹಾಗೂ ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚುವುದು. ಸ್ಟೇಷನರಿ ,ಆಲಂಕಾರಿಕ ವಸ್ತುಗಳನ್ನು ಮಾರುವವರಿಗೆ ವ್ಯವಹಾರಗಳಲ್ಲಿ ಲಾಭ. ಬ್ಯೂಟಿ ಪಾರ್ಲರ್, ಸಲೂನ್ ಉದ್ಯಮದಾರರು ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಹೊಸವ್ಯಾಪಾರ ವಿಸ್ತರಣೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ ರಾಶಿ : (ವಿಶಾಖಾ 4 ಅನುರಾಧ ಜೇಷ್ಠ)
ಕೃಷಿ ಉಪಕರಣ ತಯಾರಿಕಾ ಅಥವಾ ಬೀಜೋತ್ಪಾದನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ವೇತನ ಏರಿಕೆಯಾಗುವುದು. ವಿದ್ಯುತ್ ಶಕ್ತಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಾಳ್ಮೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಿ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಸಿದ್ಧಪಡಿಸಿದ ಉಡುಪು ವಸ್ತುಗಳ ಮಾರಾಟದಲ್ಲಿ ಲಾಭ ಇರಲಿದೆ. ಗಣಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಸರಕಾರಿ ಉದ್ಯೋಗದ ಭಾಗ್ಯವು ಕೆಲವು ದಿನಗಳ ನಂತರ ಸಿಗುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಅಡತಡೆ ಇರುತ್ತದೆ. ವ್ಯಾಪಾರದಲ್ಲಿ ನಿಧಾನ ಏರಿಕೆಯ ಹಂತ ತಲುಪುತ್ತದೆ. ಹೊಸ ಉದ್ಯಮ ಪ್ರಾರಂಭಿಸುವರು, ಆ ಉದ್ಯಮದ ಬಗ್ಗೆ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ. ವಿಧವಾ ಅಥವಾ ವಿಚ್ಛೇದನ ಪಡೆದವರಿಗೆ ಮರುಮದುವೆ ಸಾಧ್ಯತೆ. ಗರ್ಭಿಣಿಯರು ಜಾಗ್ರತೆಯಿಂದ ಇರಲಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನಸ್ಸು ರಾಶಿ:(ಮೂಲ ಪೂರ್ವಾಷಾಢ ಉತ್ತರಾಷಾಢ 1)
ಯಂತ್ರೋಪಕರಣ ತಜ್ಞರಿಗೆ ಲಾಭ ಬರಲಿದೆ. ಕೃಷಿ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ ಮಾಡಿ ಆದಾಯಕ್ಕೆ ದಾರಿಯಾಗುತ್ತದೆ. ಯಂತ್ರಗಳನ್ನು ರಿಪೇರಿ ಮಾಡುವವರು,ಯಂತ್ರ ಸ್ಥಾಪಕರು, ಯಂತ್ರಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಲಾಭ ಬರಲಿದೆ. ಕೃಷಿಭೂಮಿ ಖರೀದಿಸುವ ಚಿಂತನೆ. ತಂದೆಯಿಂದ ವ್ಯವಹಾರಗಳಲ್ಲಿ ಸಹಕರಿಸುವರು. ತೆರಿಗೆ ತಜ್ಞರಿಗೆ ಹೆಚ್ಚಿನ ಕೆಲಸಗಳು ಒದಗಿಬರುತ್ತವೆ. ಆಭರಣ ತಯಾರಿಸುವವರಿಗೆ ಬೇಡಿಕೆ ಬರುತ್ತದೆ. ರಾಜಕಾರಣಿಗಳು ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವಿರಿ. ಯುವ ರಾಜಕಾರಣಿಗಳು ತುಂಬಾ ಕ್ರಿಯಾಶೀಲತೆಯಿಂದ ಮತಕ್ಷೇತ್ರದಲ್ಲಿ ಸಮಾಗಮ. ಗಂಡ-ಹೆಂಡತಿ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಹಾಗೂ ಸಂಸಾರದಲ್ಲಿ ಇದ್ದ ಕಿರಿಕಿರಿ ಶಾಂತವಾಗುತ್ತದೆ. ಸಂಗಾತಿಯ ಒಡನಾಟ ಹಾಗೂ ಮಿಲನ ಪ್ರಶಾಂತತೆ ನೆಲೆಸಲಿದೆ.
ಮದುವೆ ವಿಳಂಬ ಏಕೆ?
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ ರಾಶಿ :(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ರಾಜಕೀಯ ವ್ಯಕ್ತಿಗಳಿಗೆ ಉನ್ನತ ಪದವಿ ಲಭ್ಯ. ಮಹಿಳಾ ರಾಜಕಾರಣಿಗಳಿಗೆ ಸ್ಥಾನಮಾನಗಳು ಬೇಡಿಕೆ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಮನೆಯಲ್ಲಿ ಚರ್ಚೆ. ಪಾಲುದಾರಿಕೆ ಆಗಬಹುದು. ಸಂಯಮದಿಂದ ಇದ್ದಲ್ಲಿ ಸುಗಮವಾಗಿ ಬಗೆಹರಿಯುತ್ತದೆ. ನಿಮ್ಮ ಕಾಲುಗಳಿಗೆ ಪೆಟ್ಟು ಬೀಳುವ ಸಾಧ್ಯತೆ. ಮಂಡಿ ನೋವಿನ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ. ವ್ಯಾಪಾರ ವಹಿವಾಟದಲ್ಲಿ ಆದಾಯದಲ್ಲಿ ಏರಿಕೆ ಕಾಣಬಹುದು. ಗಣಿಯಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಿ, ಒಗ್ಗಟ್ಟಾಗಿ ಹೆಚ್ಚುವರಿ ಸಂಬಳ ಕೇಳಿದರೆ ಯಶಸ್ಸು ಸಿಗಲಿದೆ.ಸರ್ಕಾರಿ ಸಾಲ ಸಿಗಲಿದೆ. ಪತ್ನಿಯ ಬಳಗದಿಂದ ಸಹಾಯ ಪಡೆದು ಸಾಲ ತೀರಿಸಬಹುದು. ಭೂಮಿ, ನಿವೇಶನ, ಹೂಡಿಕೆ ಬಾಂಡ್ ಸಂಬಂಧಿಸಿದ ದಾಖಲೆಗಳನ್ನು ಜೋಪಾನಮಾಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ ರಾಶಿ: (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ದ್ವಿದಳ ಧಾನ್ಯ, ಬಟ್ಟೆ ವ್ಯಾಪಾರಸ್ಥರು, ಉಪಹಾರ ದರ್ಶಿನಿ, ಬ್ಯೂಟಿ ಪಾರ್ಲರ್, ಸಲೂನ್ ವ್ಯವಹಾರ ವೃದ್ಧಿಯಾಗುತ್ತದೆ. ಕಟ್ಟಿದ ಮನೆ ಖರೀದಿಸಲು ಹುಡುಕಾಟ ಮಾಡುವಿರಿ. ರಾಜಕೀಯಕ್ಕೆ ಸೇರಲು ಉತ್ಸುಕರಾಗಿರುವವರಿಗೆ ಉತ್ತಮ ಅವಕಾಶ ಸಿಗುವುದು. ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಸ್ತ್ರೀಯರಿಗೆ ಗೌರವಧನ ದೊರೆಯುತ್ತವೆ. ಬಹಳ ದಿನಗಳಿಂದ ನಿಂತಿದ್ದ ಮದುವೆ ಕಾರ್ಯ ಆತ್ಮೀಯರಿಂದ ಯಶಸ್ಸಿನ ಭಾಗ್ಯ. ಸರ್ಕಾರಿ ಕೆಲಸಗಳು ಪರಿಚಿತರ ಸಹಾಯದಿಂದ ಮಾಡಿಕೊಳ್ಳುವಿರಿ. ಉದ್ಯೋಗಿಗಳಿಗೆ ಧನಪ್ರಾಪ್ತಿ. ಉದ್ಯಮದಾರರಿಗೆ ಅಗತ್ಯಕ್ಕೆ ತಕ್ಕಷ್ಟು ಲಾಭ ಇದ್ದೇ ಇರುತ್ತದೆ. ಟಿವಿ ವಾಹಿನಿಯಲ್ಲಿ ಧಾರವಾಹಿ ಕಲಾವಿದರಿಗೆ, ವಾರ್ತಾ ವಾಚಕರಿಗೆ, ಟೆಕ್ನಿಷಿಯನ್ಗೆ ,ಹಾಸ್ಯ ದೃಶ್ಯಾವಳಿ ನಟ-ನಟಿಯರಿಗೆ ಬೇಡಿಕೆ ಹೆಚ್ಚುತ್ತದೆ. ಅವಿವಾಹಿತರಿಗೆ ಕಂಕಣ ಬಲ ಭಾಗ್ಯ. ಹೆಚ್ಚಿನ ವಯೋಮಿತಿ ಇದ್ದವರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ದಟ್ಟವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ ರಾಶಿ: (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ).
ಹಣಕಾಸಿನ ವಿಷಯದಲ್ಲಿ ಬಂಧುಗಳೊಡನೆ ಜಗಳವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಅತೀ ಅಗತ್ಯ. ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ವಿಫಲ. ಔಷಧಿ ವ್ಯಾಪಾರಿಗಳಿಗೆ ಹಣಕಾಸಿನಲ್ಲಿ ಪ್ರಗತಿ. ನಿಂತಿದ್ದ ವಿವಾಹದ ಪ್ರಸ್ತಾಪಗಳು ಪುನಃ ಆರಂಭ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಮಗಳ ಸಂಸಾರದಲ್ಲಿ ತುಂಬಾ ಕಿರಿಕಿರಿ. ಅಳಿಯನ ಮಂಡತನ, ಸೋಮಾರಿತನ, ಮದ್ಯಪಾನ, ಧೂಮಪಾನ, ಚಟಗಳಿಂದ ಭವಿಷ್ಯಕ್ಕೆ ಮಾರಕ. ಪ್ರೇಮಿಗಳ ಪ್ರೇಮ ತುಂಬಾ ಮಧುರ ವಾಗಿರುತ್ತದೆ. ಈ ವರ್ಷದಲ್ಲಿ ನಿಮ್ಮ ಮದುವೆ ಇರುತ್ತದೆ. ಶೀತ ಸಂಬಂಧಿ ಕಾಯಿಲೆಗಳು ಅಲಕ್ಷಿಸಬೇಡಿ. ಏಕಾಏಕಿ ಎದೆನೋವಿನ ಉಲ್ಬಣ. ಹೊಟ್ಟೆ ನೋವಿನ ಸಮಸ್ಯೆಯಾಗಲಿದೆ. ಶಿಕ್ಷಕ ವೃತ್ತಿಯಲ್ಲಿದ್ದ ಜಂಜಾಟಗಳು ಮನೋವೇದನೆಗೆ ಕಾರಣವಾಗುವುದು. ಶಿಕ್ಷಕವೃಂದ ಮಕ್ಕಳ ಕಂಕಣ ಭಾಗ್ಯ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ ಬರಲಿದೆ, ಮತ್ತೆ ಹೊಸ ರೂಪದ ವ್ಯವಹಾರ ವಿಸ್ತರಣೆಯಾಗುತ್ತದೆ. ಮಕ್ಕಳ ವಿರಸದಿಂದ ಮನಸ್ತಾಪ ವಾಗುವುದು. ಮಗಳ ಭವಿಷ್ಯದ ಬಗ್ಗೆ ಚಿಂತನೆ ಕಾಡಲಿದೆ. ದಂಪತಿಗಳಿಗೆ ಸಂತಾನ ಸಮಸ್ಯೆ. ಗರ್ಭಿಣಿಯರಿಗೆ ಪದೇಪದೇ ಗರ್ಭ ನಷ್ಟ ಸಂಭವ. ಸಾಲಗಾರರಿಂದ ಜಗಳ ಸಂಭವ. ಆಸ್ತಿ ಮಾರಾಟ ವಿಳಂಬ ಸಾಧ್ಯತೆ. ಅಕ್ಕ ಪಕ್ಕದವರಿಂದ ಮನಸ್ತಾಪ ಹೆಚ್ಚಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top