Connect with us

Dvgsuddi Kannada | online news portal | Kannada news online

ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಗಮನಹರಿಸಿ

ದಾವಣಗೆರೆ

ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಗಮನಹರಿಸಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುವ ವೇಳೆ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡುತ್ತಿದ್ದರೋ, ಇಲ್ಲವೋ ಎಂಬುದನ್ನು ಗ್ರಾಮಸ್ಥರು ಪರಿಶೀಲಿಸಬೇಕು. ಒಂದು ವೇಳೆ ಕಾಮಗಾರಿಯಲ್ಲಿ ಕಳಪೆ ಕೆಲಸವಾಗುತ್ತಿದೆ ಎಂದು ಕಂಡುಬಂದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ಶಾಮನೂರು ಶಿವ ಶಂಕರಪ್ಪ ಹೇಳಿದರು.

ಬಸಾಪುರ ಗ್ರಾಮದಿಂದ ಚಿಕ್ಕನಹಳ್ಳಿ, ಲಿಂಗದಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಕಾಮಗಾರಿ ಉತ್ತಮ ಗುಣಮಟ್ಟ ದಿಂದ ಕೂಡಿರಬೇಕು. ಈ ಕಾರ್ಯದಲ್ಲಿ ಗ್ರಾಮಸ್ಥರು ನಿಗಾವಹಿಸಬೇಕು ಎಂದು ಕರೆ ನೀಡಿದರು.

ದಾವಣಗೆರೆ ನಗರ ವ್ಯಾಪ್ತಿಯ ಬಸಾಪುರ ಗ್ರಾಮದಿಂದ ಲಿಂಗದಹಳ್ಳಿ ಗ್ರಾಮಕ್ಕೆ ತೆರಳುವ ಈ ರಸ್ತೆ ದಾವಣಗೆರೆ ದಕ್ಷಿಣ, ಉತ್ತರ ಮತ್ತು ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡಲಿದ್ದು, ಮೂವರು ಕ್ಷೆತ್ರದ ಶಾಸಕರು ಸೇರಿ ಶಿಫಾರಸ್ಸು ಮಾಡಿದ್ದರಿಂದ ಹಿಂದಿನ ಸರ್ಕಾರ ಕಾಮಗಾರಿಗೆ ಒಪ್ಪಿಗೆ ನೀಡಿತ್ತು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬಸಾಪುರ ಗ್ರಾಮದ ಮುಖಂಡರಾದ ಬಾ.ಮ.ಬಸವರಾಜಯ್ಯ, ಗೌಡ್ರು ರಾಜಶೇಖರ್, ಎಸ್. ಸುರೇಂದ್ರಪ್ಪ, ಕೆ.ಎಲ್.ಹರೀಶ್, ಸಿ.ಮಹೇಶ್ವರಪ್ಪ, ಸಿ.ಬಸವರಾಜಪ್ಪ, ಕೊಟ್ರಯ್ಯ.ಎಂ.ಎಸ್., ನಾಗೇಂದ್ರಚಾರ್, ಕೆ.ಬಿ..ಲಿಂಗರಾಜ್, ಬಿ.ಎಸ್.ಸಿದ್ದಪ್ಪ, ಜಿ.ಶಿವಕುಮಾರ್, ರೇವಣಸಿದ್ದಯ್ಯ, ಎಸ್.ನಿಜಲಿಂಗಪ್ಪ, ಎನ್.ಎಂ. ಕೊಟ್ರಯ್ಯ, ಮರುಳಸಿದ್ದಪ್ಪ , ಬಸವರಾಜಯ್ಯ, ಬಿ.ಎಸ್.ಉಮೇಶ್, ಅರಳ್ಳಿ ಉಮೇಶ್, ಎ.ಆರ್. ದೇವರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಟಿ.ಎಸ್.ಮಲ್ಲಿಕಾರ್ಜುನ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಿ.ಮಹಾದೇವಪ್ಪ, ಸಹಾಯಕ ಅಭಿಯಂತರರಾದ ಗಿರೀಶ್, ಗುತ್ತಿಗೆದಾರ ಬಲರಾಮರೆಡ್ಡಿ ಉಪಸ್ತಿತರಿದ್ದರು.

 

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ:9844460336, 7483892205

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top