ದಾವಣಗೆರೆ: ಸಚಿವ ಸ್ಥಾನ ಕೇಳಲು ಹೋಗಿಲ್ಲ; ಕೊಟ್ಟರೆ ಖಂಡಿತ ಬಿಡುವುದಿಲ್ಲ- ಶಾಸಕ ಡಿ.ಜಿ.ಶಾಂತನಗೌಡ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತೆ. ನಮಗೂ ಆಸೆ ಇದೆ.ಆದರೆ,‌ ದುರಾಸೆ ಇಲ್ಲ. ನಾನು ಸಚಿವ ಸ್ಥಾನವನ್ನು ಕೇಳಲು ಹೋಗಿಲ್ಲ. ಒಂದು ವೇಳೆ ಪಕ್ಷವೇ ಗುರುತಿಸಿ ಕೊಟ್ಟರೆ ಖಂಡಿತ ಬಿಡುವುದಿಲ್ಲ. ಸಚಿವ ಸ್ಥಾನ ನಿರ್ವಹಿಸಲು ನಾನು ದೈಹಿಕ ಮತ್ತು ಮಾನಸಿಕವಾಗಿ ನೂರಷ್ಟು ಸಿದ್ಧ‌ ಇದ್ದೇನೆ ಎಂದು ಹೊನ್ನಾಳಿ ಕ್ಷೇತ್ರದ ಹಿರಿಯ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಮುಂಗಾರು ಕೊರತೆ; ರಾಗಿ, ನವಣೆ, ಸಜ್ಜೆ , ದ್ವಿದಳ ಧಾನ್ಯ ಬಿತ್ತನೆಗೆ ದಾವಣಗೆರೆ ತರಳಬಾಳು ಕೆವಿಕೆ ಸೂಚನೆ

ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ನಾವು ಕೇಳಿದ ತಕ್ಷಣ ನೀಡುವುದಿಲ್ಲ. ನಮ್ಮದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಿದ್ದು, ಇಲ್ಲಿ ಯಾವುದೇ ಒತ್ತಡಗಳಿಗೆ ಮನ್ನಣೆ ಸಿಗುವುದಿಲ್ಲ. ರಾಜ್ಯದ 32 ಜಿಲ್ಲೆಗಳ‌ ಪ್ರಾದೇಶಿಕ, ಎಲ್ಲಾ ಜಾತಿ, ಸಾಮಾಜಿಕ ನ್ಯಾಯ ಪರಿಗಣಿಸಿ ಪಕ್ಷ ಸ್ಥಾನ ನೀಡಲಿದೆ ಎಂದರು.

ದಾವಣಗೆರೆ: ಜಿಲ್ಲಾ‌ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಜಿಲ್ಲೆಗಳನ್ನು ನೋಡಿಕೊಳ್ಳಲೆಂದು‌ ಇರುವ 12 ಸಚಿವರಲ್ಲೇ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ. ಯಾರಿಗೂ ಕೇಳದೆಯೇ ಉಸ್ತುವಾರಿಗಳನ್ನು ಮಾಡಿಲ್ಲ. ಇನ್ನು ರಾಜಕೀಯದಲ್ಲಿ ಸಚಿವ ಸ್ಥಾನಕ್ಕೆ ಯಾವುದೇ ನಿರ್ದಿಷ್ಟಮಾನದಂಡ ಇಲ್ಲ. ಹೆಬ್ಬೆಟ್ಟು ಒತ್ತುವವರೂ ಇಲ್ಲಿ ಮಂತ್ರಿ ಯಾಗಬಹುದು ಎಂದು‌ ತಿಳಿಸಿದರು.

ಸಚಿವ ಸಂಪುಟ ಪ್ರನಃ ರಚಿಸುವಂತೆ ನಾವು 30 ಶಾಸಕರು ದೆಹಲಿಗೆ ಹೋಗಿದ್ದು ನಿಜ. ಆದರೆ, ಅಲ್ಲಿ ನಾವು ಪಕ್ಷದಲ್ಲಿನ ಗೊಂದಲ ಬಗೆಹರಿಸುವಂತೆ ಕೇಳಿದ್ದೇವೆಯೇ ಹೊರತು, ಮಂತ್ರಿ ಸ್ಥಾನವನ್ನು ಕೊಡುವಂತೆ ವರಿಷ್ಠರಿಗೆ ನಾವ್ಯಾರೂ ಕೇಳಿಲ್ಲ. ದಾವಣಗೆರೆ ಜಿಲ್ಲೆಯ ನಾನೂ ಸೇರಿದಂತೆ ನಾಲ್ವರು ಶಾಸಕರು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿದ್ದು, ಶುಭ ಕೋರುವುದಕ್ಕೆ ಮಾತ್ರ. ಶೀಘ್ರವೇ ನಿಗಮ ಮಂಡಳಿಗಳಲ್ಲೂ ಬದಲಾವಣೆ ಮಾಡಲಿದ್ದಾರೆ. ನಾನು ಕೇಳದಿದ್ದರೂ ನನಗೆ ಸ್ಥಾನ ನೀಡುವ ವಿಶ್ವಾಸವಿದೆ ಎಂದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *