ಜಗಳೂರು: ಕೆರೆ ತುಂಬಿಸುವ ಯೋಜನೆಯಿಂದ ಜಗಳೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗುತ್ತಿದೆ ಎಂದು ದಾವಣಗೆರೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹರಿಹರ ಸೇರಿದ್ರೆ ಇನ್ನಷ್ಟು ಅಭಿವೃದ್ಧಿ; ಸಚಿವ ಎಸ್.ಎಸ್. ಮಲ್ಲಿಕಾರ್ಜುನ
ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ “ಈರುಳ್ಳಿ ಬೆಳೆ ಕ್ಷೇತ್ರೋತ್ಸವದಲ್ಲಿ
ಮಾತನಾಡಿ, ಪ್ರಸ್ತುತ ತಾಲ್ಲೂಕಿನಾಧ್ಯಂತ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಬೆಳೆ ವಿಸ್ತೀರ್ಣ ವಿಸ್ತಾರವಾಗುತ್ತಿದೆ. ರೈತರು ಬರೀ ಅಡಿಕೆ ಬೆಳೆಯನ್ನಷ್ಟೇ ಬೆಳೆಯದೆ ತೆಂಗು, ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳತ್ತ ಗಮನಹರಿಸಬೇಕೆಂದರು.
ದಾವಣಗೆರೆ ಮಹಾನಗರ ಪಾಲಿಕೆ; ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಈರುಳ್ಳಿಯಲ್ಲಿ ಕೇಂದ್ರದವತಿಯಿಂದ ನೀಡಿದ ಎನ್ಎಚ್ಆರ್ಡಿಎಫ್-ರೆಡ್ -4 ತಳಿಯು ಹಿಂಗಾರಿನಲ್ಲಿ ಬೆಳೆಯುವ ತಳಿಯಾಗಿದ್ದು, ಎಲೆ ಮಚ್ಚೆ ರೋಗಕ್ಕೆ ನಿರೋಧಕತೆಯಿದೆ. ಬೆಳೆಯೂ ಉತ್ತಮವಾಗಿದ್ದು, ಗಡ್ಡೆಗಳು ಚನ್ನಾಗಿ ಬಂದಿವೆ. ಉತ್ತಮ ಬಣ್ಣದಿಂದ ಕೂಡಿದ್ದು, ಉತ್ತಮ ಇಳುವರಿಯನ್ನು ನಿರೀಕ್ಷಿದ್ದೇವೆ ಎಂದು ರೈತರಾದ
ಶ್ರೀ ಗುರುಲಿಂಗಪ್ಪನವರು ಅಭಿಪ್ರಾಯವನ್ನು ಹಂಚಿಕೊಂಡರು.
ಕೇಂದ್ರದ ಮಣ್ಣು ವಿಜ್ಞಾನಿ ಡಾ. ಪ್ರಶಾಂತ್ ಡಿ.ವಿ. ಮಾತನಾಡಿ ಬೇಸಿಗೆಯಲ್ಲಿ ಮಣ್ಣು ಪರೀಕ್ಷೆ ಮಾಡಿಸಲುಸೂಕ್ತಕಾಲವಿದ್ದು, ಕನಿಷ್ಠ ಎರಡು ವರ್ಷಕ್ಕೊಮ್ಮೆ ತಮ್ಮ ಹೊಲದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕೆಂದರು.
ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ,ಕೇಂದ್ರದವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ಸಾಕಷ್ಟು ಪರಿಕರಗಳನ್ನು ಒದಗಿಸಿದ್ದು ನಮ್ಮ ಆರ್ಥಿಕ ಜೀವನ ಸುಧಾರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮಲ್ಲಿ ರೈತರಾದ ಶಶಿಕುಮಾರ್, ಗುರುಲಿಂಗಪ್ಪ, ಸುಧಾರಕರ್ ಹಾಗೂ 80 ಕ್ಕೂ ಹೆಚ್ಚು ರೈತರು
ಹಾಜರಿದ್ದರು. Ko



