ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹರಿಹರ ನಗರಸಭೆ ಸೇರ್ಪಡೆಯಾದ್ರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ದಾವಣಗೆರೆ: ಫೆ.25ರಿಂದ ಮಾರ್ಚ್ 1ರವರೆಗೆ ಫಲಪುಪ್ಪ ಪ್ರದರ್ಶನ
ಹರಿಹರ ವಿವಿಧ ಸಂಘಟನೆ ಮುಖಂಡರ ಮನವಿಗೆ ಪ್ರತಿಕ್ರಿಯಿಸಿ, ಹುಬ್ಬಳ್ಳಿ -ಧಾರವಾಡದಂತೆ ಹರಿಹರ-ದಾವಣಗೆರೆ ಅವಳಿ ನಗರವಾಗಿ ಗುರುತಿಸಿಕೊಂಡಿವೆ. ಅದೇ ರೀತಿ ದಾವಣಗೆರೆ ಮಹಾನಗರ ಪಾಲಿಕೆಯೊಂದಿಗೆ ಹರಿಹರ ನಗರಸಭೆ ಸೇರ್ಪಡೆ ಮಾಡಿದ್ರೆ ಹರಹರವೂ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಹರಿಹರಕ್ಕೆ ತಾಲ್ಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲು ತಾಂತ್ರಿಕ ಸಮಸ್ಯೆ ಇದೆ. ಇದರ ಬದಲು ಜಯದೇವ ಹೃದಯಾಲಯ ಆಸ್ಪತ್ರೆ, ಸರ್ಕಾರಿ ಆಯುರ್ವೇದ, ನರ್ಸಿಂಗ್ ಕಾಲೇಜು ಸಂಬಂಧಿಸಿದ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದಾವಣಗೆರೆ: ಮೊಬೈಲ್ ಕ್ಯಾಂಟಿನ್ ಸಹಾಯಧನಕ್ಕೆ ಅರ್ಜಿ ಆಹ್ವಾನ
ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ರಾಜನಹಳ್ಳಿ ಬಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ನಿಂದ ಹರಿಹರದ ಜಾಕ್ವೆಲ್ಗೆ ನೀರು ಹರಿಸಬೇಕೆಂಬ ಮನವಿಗೆ ಈ ಬಗ್ಗೆ ಅಧಿಕಾರಿಗಳೊಂದಿಗೆ ರ್ಚಿಸುತ್ತೇನೆ ಎಂದರು.
ಮಖಂಡರಾದ ನಂದಿಗಾವಿ ಶ್ರೀನಿವಾಸ್, ಎಚ್.ಕೆ.ಕೊಟ್ರಪ್ಪ, ನಿಜಗುಣ,ಶೇಖರಗೌಡ ಪಾಟೀಲ್, ಮಕೆ.ಬಿ.ರಾಜಶೇಖರ್,
ಬಿ.ರೇವಣಸಿದ್ದಪ್ಪ, ಹಾಲೇಶ್ಗೌಡ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಆನಂದ್, ಎಸ್.ಎಚ್.ಪ್ಯಾಟಿ, ನಿವೃತ್ತ ಎಂಜಿನಿಯರ್ ಮಲ್ಲಿಕಾರ್ಜನ್ ವಿ.ಎಸ್., ಡಿ.ಜಿ.ಶಿವಾನಂದಪ್ಪ, ಕೃಷ್ಣಮೂರ್ತಿ,
ಶ್ರೀಧರ್ ಶೆಟ್ಟಿ, ಟಿ.ಜೆ.ಮುರುಗೇಶಪ್ಪ, ವೀರೇಶ್ ಯಾದವಾಡ ಸೇರಿದಂತೆ ಮತ್ತಿತರರು ಇದ್ದರು.



