ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ನಿಧನ ನಂತರ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ. ಶಾಮನೂರು ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎಲ್ಲಡೆ ಭಾರಿ ಚರ್ಚೆ ವಿಷಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ದಿನಕ್ಕೊಂದು ಹೊಸ ಹೆಸರು ತೆಲಿ ಬರುತ್ತಿವೆ. ಇದೀಗ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್ ಏರ್ಪಡುವ ಸೂಚನೆ ಸಿಕ್ಕಿದ್ದು, ಜಿದ್ದಾಜಿದ್ದು ನಡೆಯುವ ಮುನ್ಸೂಚನೆ ಇದೆ.
ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಗಣೇಶ್ ಅಭ್ಯರ್ಥಿಯಾಗಲಿ; ಬಿಜೆಪಿ ಹಿರಿಯ ನಾಯಕ ರವೀಂದ್ರನಾಥ್
ಈ ಬಾರಿ ಶೇ.99ರಷ್ಟು ಅಹಿಂದ ವರ್ಗಕ್ಕೆ ದಾವಣಗೆರೆ ದಕ್ಷಿಣ ಟಿಕೆಟ್ ಕೊಡಬೇಕು. ಒಂದು ವೇಳೆ ಶೇ.1ರಷ್ಟು ಟಿಕೆಟ್ ಕೊಡದಿದ್ರೆ ಆಗ ಏನಾನುತ್ತೆ ಎನ್ನುವುದನ್ನು ನಿಮ್ಮನ್ನು (ಮಾಧ್ಯಮ) ಕರೆದು ಮಾತಾಡುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ಕಾಂಗ್ರೆಸ್ ನಾಯಕರೇ ಕೊಟ್ಟಿದ್ದಾರೆ.
ದಾವಣಗೆರೆ:ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾವ ಕಾರ್ಯತಂತ್ರ ರೂಪಿಸಬೇಕೇಂದು ಆಗ ಮಾತನಾಡುತ್ತೇವೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಅಹಿಂದ ವರ್ಗದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಎಂ. ಟಿ. ಸುಭಾಷ್ ಚಂದ್ರ, ವೀರಣ್ಣ, ಎನ್. ಎಂ. ಆಂಜನೇಯ ಗುರೂಜಿ, ಅಜಾಜ್ ಅಹ್ಮದ್, ಜೆ. ವೀರಭದ್ರಪ್ಪ ಮತ್ತಿತರ ನಾಯಕರು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ದಿಢೀರ್ ಕುಸಿತ; ಏಕಾಏಕಿ ಪ್ರತಿ ಕ್ವಿಂಟಲ್ ಗೆ 2 ಸಾವಿರ ಇಳಿಕೆ
ಅಲ್ಪಸಂಖ್ಯಾತರಲ್ಲಿ ಯಾರಿಗಾದರೂ ಸ್ಪರ್ಧಿಸಲು ಅವಕಾಶ ಕೊಡಲೇಬೇಕು. ಇಲ್ಲವೇ ಅಹಿಂದ ವರ್ಗಕ್ಕೆ ಕೊಟ್ಟರೂ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡರೆ ನಾವೆಲ್ಲರೂ ಸೇರಿ ಈ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಶಾಮನೂರು ಶಿವಶಂಕರಪ್ಪ ಇರುವ ವರೆಗೆ ನಾವು ಟಿಕೆಟ್ ಕೇಳಿಲ್ಲ. ಈಗ ಅವರ ನಿಧನ ನಂತರ ಗಟ್ಟಿ ಧ್ವನಿಯಲ್ಲಿ ಕೇಳುತ್ತೇವೆ ಎಂದರು.
1994 ರಿಂದ ದಾವಣಗೆರೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಶಾಮನೂರು ಶಿವಶಂಕರಪನವರೇ ಪ್ರತಿನಿಧಿಸುತ್ತಾ ಬಂದಿರುತ್ತಾರೆ. 2008ರಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ಎರಡು ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಶಿವಶಂಕರಪ್ಪರು ಹಾಗೂ ಎಸ್. ಎಸ್ ಮಲ್ಲಿಕಾರ್ಜುನ್ ಅವರೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣದಿಂದ ಸತತವಾಗಿ ಗೆದ್ದು ಬಂದಿದ್ದು, ಶಿವಶಂಕರಪ್ಪನವರ ಮರಣದಿಂದ ಈಗ ಕ್ಷೇತ್ರದ ಉಪ ಚುನಾವಣೆ ಬರುತ್ತದೆ. ಹಾಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಅಹಿಂದ ವರ್ಗ ಇದ್ದು, ಶೇಕಡಾ 80ರಷ್ಟಿದೆ. ಈ ವರ್ಗಕ್ಕೆ ಅವಕಾಶ ಸಿಗಬೇಕು ಎಂದು ಆಗ್ರಹಿಸಿದರು.
ಶೇಕಡಾ 50ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಹಾಗಾಗಿ ದಾವಣಗೆರೆಯ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುತ್ತಾ ಬಂದಿದೆ. ಈಗ ಬರುವ ಉಪ ಚುನಾವಣೆಯೂ ಸಹ ಕಾಂಗ್ರೆಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಅಹಿಂದ ವರ್ಗದ ಮತಗಳು ಹೆಚ್ಚು ಇರುವ ಈ ಕ್ಷೇತ್ರಕೆ ಅಲ್ಪಸಂಖ್ಯಾತರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಸಾಮಾಜಿಕ ನ್ಯಾಯಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದರು.
ಅತಿ ಹೆಚ್ಚು ಅಹಿಂದ ವರ್ಗದ ಜನ ಪ್ರತಿನಿಧಿಸುವ ಈ ಕ್ಷೇತ್ರವನ್ನು ಈ ವರ್ಗಕ್ಕೆ ಕೊಡಬೇಕು. ಇದು ಜಿಲ್ಲಾ ನಾಯಕರೆಂದು ಪ್ರತಿಬಿಂಬಿಸಿಕೊಂಡವರ ಜವಾಬ್ದಾರಿಯೂ ಆಗಿದೆ. ಬೇರೆ ವರ್ಗದ ಸಮುದಾಯದವರು ಅಧಿಕಾರದಿಂದ
ವಂಚಿತವಾಗಿರುತ್ತದೆ. ಅಲ್ಪಸಂಖ್ಯಾತರಲ್ಲಿ ಯಾರಿಗಾದರೂ ಸ್ಪರ್ಧಿಸಲು ಅವಕಾಶ ಕೊಡಲೇ ಬೇಕು. ಕಾಂಗ್ರೆಸ್ ಸರ್ಕಾರದ ಸಾಧನೆ ಪ್ರಗತಿಪರ ಮತ್ತು ಜನಪರವಾಗಿರುತ್ತದೆ. ಹಾಗಾಗಿ ಚುನಾವಣೆ ಗೆಲುವು ನಮ್ಮದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ನ್ಯಾ.ಶಿವರಾಜ್ ಪಾಟೀಲ್ ಆಯ್ಕೆ ಮಾಡುವಂತೆ ರಂಭಾಪುರಿ ಶ್ರೀ ಒತ್ತಾಯ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗದ ಮತ್ತು ಹಿಂದುಳಿದ ಲಿಂಗಾಯತರ ಸಂಖ್ಯೆಯನ್ನು ಹೆಚ್ಚಾಗಿ ಒಳಗೊಂಡಿದೆ. ಈ ವರ್ಗದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸುತ್ತಿದ್ದೇವೆ ಎಂದರು.



