ಸಚಿವನಾಗಬೇಕು ಅನ್ನೋ ಆಸೆ ಇದೆ, ಮಾಧ್ಯಮ ಮುಂದೆ ಹೇಳಿ ಗೊಂದಲವುಂಟು ಮಾಡಲ್ಲ: ರೇಣುಕಾಚಾರ್ಯ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಹೊನ್ನಾಳಿ : ಪ್ರತಿಯೊಬ್ಬ ಶಾಸಕನಿಗೂ ಸಚಿವನಾಗಬೇಕು ಅನ್ನೋ ಆಸೆ ಇರುತ್ತೆ.. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೊಂಡು ಗೊಂದಲವುಂಟು ಮಾಡಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ತಾಲ್ಲೂಕಿನ ಸೂರಕೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ರೇಣುಕಾಚಾರ್ಯ,  ಶಾಸಕರಾದ ನಾವೆಲ್ಲಾ ಯಡಿಯೂರಪ್ಪನವರ ಮಕ್ಕಳಿದ್ದಂತೆ.  ಯಡಿಯೂರಪ್ಪ ನಮಗೆ ತಂದೆಗೆ ಸಮಾನ. ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಕೇಳಿ ಗೊಂದಲವುಂಟು ಮಾಡಲ್ಲ.  ಸಚಿವರಾಗಬೇಕು ಎಂಬ ಮಹತ್ವಾಕಾಂಕ್ಷಿ ಇದೆ. ಅದನ್ನು ಮಾಧ್ಯಮ ಗಳ ಮುಂದೆ ಹೇಳಿಕೊಂಡರೆ ಈಡೇರಲ್ಲ.

ದಾವಣಗೆರೆ ಮಧ್ಯಕರ್ನಾಟಕದ ಜಿಲ್ಲೆ. ಒಂದು ರೀತಿಯ ಸಂಪರ್ಕ ಸೇತುವೆ.  ಸಚಿವ ಸ್ಥಾನ ಬೇಕಿತ್ತು. ಆದರೆ ಸಿಕ್ಕಿಲ್ಲ. ನಾನು ರಾಜಕೀಯ ವಾಗಿ ಇನ್ನು ಸಣ್ಣವನು. ಸಾಧಿಸುವುದು ಇನ್ನು ತುಂಬಾ ಇದೆ. ಮಾತನಾಡುವುದೇ ಸಾಧನೆ ಯಾಗಬಾರದು. ನಾನು ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಆಗಬೇಕು ಅಂತಾ ಹೇಳಿದ್ರೆ ಆಗುತ್ತಾ..?  ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿದರೆ, ನಮ್ಮ ಘನತೆ ಕಡಿಮೆಯಾಗುತ್ತದೆ ಎಂದರು.

 

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *