ಡಿವಿಜಿಸುದ್ದಿ.ಕಾಂ, ದಾವಣಗೆರೆ: ಸಾಮಾನ್ಯವಾಗಿ ಗಣೇಶ್ ವಿಸರ್ಜನೆ ವೇಳೆ ಯುವಕರು ಸಂಭ್ರಮದಿಂದ ಕುಣಿದು, ಕುಪ್ಪಳಿಸುವುದನ್ನು ನೋಡಿದ್ದೇವೆ. ಆದ್ರೆ, ಗಣೇಶ ಮೆರವಣಿಗೆ ವೇಳೆ ಪರಿಸರ ಜಾಗೃತಿ ಮೂಡಿಸುವ ಯುವಕರು ಸಿಗದೋ ಅಪರೂಪ. ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವರು ಹರಿಹರ ತಾಲ್ಲೂಕಿನ ಉತ್ಸಾಹಿ ಯುವಕರು.
ಹರಿಹರ ತಾಲ್ಲೂಕಿನ ಭಾನುವಳ್ಳಿಯ ಏಕಲವ್ಯ ಯುವಕರ ಸಂಘದಿಂದ ಈ ಬಾರಿಯ ಗಣೇಶ ಉತ್ಸವನ್ನು ವಿಶೇಷವಾಗಿ ಆಚಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಗಣೇಶ ವಿಸರ್ಜನೆ ವೇಳೆ ಉತ್ಸಾಹಿ ಯುವಕರು ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಿದಲ್ಲದೆ, ಸ್ವತಃ ಊರ ತುಂಬೆಲ್ಲಾ 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಕರೆ ನೀಡಿದ್ದಾರೆ.

ಜಾಗತಿಕ ತಾಪಮಾನ, ವರ್ಷದಿಂದ ವರ್ಷಕ್ಕೆಬದಲಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ಅರಣ್ಯ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಏಕಲವ್ಯ ಸಂಘಟನೆ ಕಾರ್ಯ ಎಲ್ಲರು ಮೆಚ್ಚುವಂಹದು. ಇಂತಹ ಕಾರ್ಯಗಳ ಮೂಲಕ ಸಾರ್ವಜನಿಕರಲ್ಲಿಯೂ ಪರಿಸರ ಜಾಗೃತಿ ಮೂಡಿಸಿದಂತಾಗುತ್ತದೆ ಜತೆಗೆ ಹಬ್ಬ-ಹರಿದಿನಕ್ಕೂ ಮಹತ್ವ ಬಂದತಾಗುತ್ತದೆ.
ಮರ ಬೆಳೆಸಿ ಪರಿಸರವನ್ನು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಭಾನುವಳ್ಳಿ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಸಸಿಗಳನ್ನು ತಂದು, ಸಣ್ಣ ಸಣ್ಣ ಬೀದಿ, ಮುಖ್ಯ ರಸ್ತೆ ಬದಿಯಲ್ಲಿ ನೆಟ್ಟಿದ್ದಾರೆ. ಈ ಕಾರ್ಯದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಎಎಸ್ಐ ಮಲ್ಲಿಕಾಜುನ್, ಭಾನುವಳ್ಳಿಯ ಪಿಡಿಒ ರೇಣುಕಾಬಾಯಿ, ಏಕಲವ್ಯ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಭಾನುವಳ್ಳಿಯ ಗ್ರಾಮಸ್ಥರ ಭಾಗಿಯಾಗಿದ್ದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ:9844460336, 7483892205




Dharvada jeela harihara thaluku Bhanuvalliyali garmadali gannesha visrajaneya noutana kaarya krama dj badalu parisara ulisi naadu belasi yamba
2000 savira sasi didagalannu bhanuvalliyali shale devastana raste galli netideve iadake poulice sibandi hagou midiya yalla janaru hekalve sangada yala sadaseru seri vinoutana karyakarmadavannu amidoundeve
Nice programme
Good job guys…👌