ಹೊನ್ನಾಳಿ: ಕಳೆದ 23 ವರ್ಷದ ಹಿಂದೆ ತಾವು ಕೂಡಿ ಕಲಿತ ಶಾಲೆಗೆ ಮತ್ತೆ ಬಂದ ಸಂಭ್ರಮ…. ಊರಲ್ಲಿ ಹಬ್ಬದ ವಾತಾವರಣ.. ಹಳೇಯ ವಿದ್ಯಾರ್ಥಿಗಳ ಮುಖದಲ್ಲಿ ಖುಷಿ… ಇದು ಹೊನ್ನಾಳಿ ತಾಲ್ಲೂಕಿನ ಕಂಬಳೂರಿನ ಶ್ರೀ ಆಂಜನೇಯಸ್ವಾಮಿ ಹಿರಿಯ ಪ್ರಾಥಮಿಕ ಮತ್ತು ಪೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಮತ್ತು ಪಾಠ ಹೇಳಿಕೊಟ್ಟ ಶಿಕ್ಷಕರು ಸಮಾಗಮವಾದ ಸಂತಸದ ಕ್ಷಣ…
ಸ್ನೇಹ ಸ್ಪಂದನ ಹಾಗೂ ಗುರು ನಮನ ಕಾರ್ಯಕ್ರಮ ಅಡಿಯಲ್ಲಿ 1998-99ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು-ಶಿಕ್ಷಕರು ಒಂದೆಡೆ ಸೇರಿ ಖುಷಿಪಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನೆಪು ಮೆಲುಕು ಹಾಕಿದರು. ಬಾಲ್ಯದಲ್ಲಿ ಮಾಡಿದ ತಮಾಷೆ, ಕಿಟಲೆ ಸುಖ-ಸುಖಃದ ಕ್ಷಣಗಳನ್ನು ಒಬ್ಬೊಬ್ಬರಾಗಿ ಹಂಚಿಕೊಂಡರು. ಇದಾದ ಬಳಿಕ 1998-99 ನೇ ಬ್ಯಾಚ್ ನ 65 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ಕೊಡಲಾಯಿತು.
ಇದೇ ವೇಳೆ ಹಳೇಯ ವಿದ್ಯಾರ್ಥಿಗಳು ಶಾಲೆಗೆ ಗೇಟ್ ಮತ್ತು ನಾಮ ಫಲಕದ ಬೋರ್ಡ್ ನ್ನು ನೆನಪಿ ಕಾಣಿಕೆಯಾಗಿ ಕೊಟ್ಟರು. ಕಾಶ್ಮೀರದಲ್ಲಿ ಕೇಂದ್ರಿಯ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿ.ಎಚ್ ರವಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಅನುಭವ ಹಂಚಿ ಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಖುಷಿ ನೀಡಿದೆ. ಈ ದಿನ ನಮ್ಮ ಬಾಲ್ಯವನ್ನು ಪುನಃ ನೆನಪಿಸಿತು ಎಂದರು.
ಹಳೇಯ ವಿದ್ಯಾರ್ಥಿಗಳಾದ ಜಮೀನ್ದಾರ್ ಎಂ ಜಿ. ಕಿರಣ್ ಗೌಡ, ಪ್ರಾಧ್ಯಾಪಕ ಕೆ . ಸುರೇಶ್, ಕೆನರಾ ಬ್ಯಾಂಕ್ ಮ್ಯಾನೇಜರ್ ಕೆ.ಎಚ್ ಅರುಣ್. ದುಬೈನಲ್ಲಿ ನೆಲೆಸಿರುವ ಇಂಜಿಯರ್ ಎನ್ ಆಂಜನೇಯ, ಜಮೀನ್ದಾರ್ ರವಿ ಪಟೇಲ್, ನಿವೃತ್ತ ಶಿಕ್ಷಕರಾದ ಬಿ. ದಿಳ್ಯಾಪ್ಪ, ಧನಂಜಯ್ಯಪ್ಪ, ಶೇಖ್ ಸನಾದಿ, ಭೀಮಾಚಾರ್, ವೀರಭದ್ರಪ್ಪ, ಕಿಟ್ಟಪ್ಪ, ಹನುಮಂತಾಚಾರ್ ಹರ್ಲಿಪುರ , ಪ್ರಕಾಶ್ ಎನ್.ಎಸ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆ ಅಧ್ಯಕ್ಷ ಇ. ಸುಧಾಕರ್, ನಿರ್ದೇಶಕ ಪಿ. ಎಸ್. ಬಸವರಾಜಪ್ಪ, ಕಾರ್ಯದರ್ಶಿ ಚನ್ನವೀರಪ್ಪ, ಸಂಸ್ಥೆಯ ಮಾಜಿ ಅಧ್ಯಕ್ಷರು ಎಸ್ ಬಿ. ಹನುಮಂತಪ್ಪ , ಶಾಲಾ ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.



