Connect with us

Dvgsuddi Kannada | online news portal | Kannada news online

ದಾವಣಗೆರೆ: ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ

ದಾವಣಗೆರೆ

ದಾವಣಗೆರೆ: ರೈಲಿನಲ್ಲಿ ಬಿಟ್ಟು ಹೋದ 7.31 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರಿಗೆ ತಲುಪಿಸಿದ ರೈಲ್ವೆ ರಕ್ಷಣೆ ಪಡೆ

ದಾವಣಗೆರೆ:  ರೈಲಿನಿಂದ ಇಳಿಯುವಾಗ  ರೈಲಿನಲ್ಲಿಯೇ ಬಿಟ್ಟು ಹೋಗಿದ್ದ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಸಾವಿರ ನಗದು ಹೊಂದಿದ್ದ ಬ್ಯಾಗ್ ಅನ್ನು ವಾರಸುದಾರರಿಗೆ ರೈಲ್ವೆ ರಕ್ಷಣೆ ತಲುಪಿಸಿದ್ಧಾರೆ.

ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್ ಕೆ.ಎಂ ಅವರು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಭಾನುವಾರ ಬೆಳಗ್ಗೆ ಬಂದು ಇಳಿದು ಹೋಗಿದ್ದರು.  ಈ ವೇಳೆ 7.31 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ  12 ಸಾವಿರವಿದ್ದ ಬ್ಯಾಗನ್ನು ರೈಲಿನಲ್ಲಿಯೇ ಬಿಟ್ಟು ಇಳಿದು ಹೋಗಿದ್ದರು.  ಈ ವಿಚಾರ ಗಮನಕ್ಕೆ ಬಂದ ತಕ್ಷಣ ಶ್ರೀನಿವಾಸ ರಾಜ್ ಅವರು ರೈಲ್ವೆ ದೂರು ಸಲ್ಲಿಸಿದರು.

ದೂರು ಸ್ವೀಕರಿಸಿದ ಮೈಸೈರಿನ ವಿಭಾಗಿಯ ಭದ್ರತಾ ನಿಂತ್ರಕರು,  ರೈಲ್ವೆ ರಕ್ಷಣೆ ಪಡೆಗೆ ನಿರ್ದೇಶಿಸಿದ್ದರು. ಆರ್ ಪಿಸ ಎಫ್  ಎಎಸ್ ಐ  ವೆಂಕಟೇಶ್ ಮೂರ್ತಿ, ಶಿವಾನಂ, ಎಂ.ಡಿ ಶಫಿವುಲ್ಲಾ ಅವರನ್ನೊಳಗೊಂಡ ತಂಡ ಬ್ಯಾಗ್ ಪತ್ತೆ ಹಚ್ಚಿದ್ಧಾರೆ. ಬಳಿಕೆ ವಾರಸುದಾರ ಶ್ರೀನಿವಾಸ ರಾಜ್ ಅವರನ್ನು ಕರೆಸಿ ಬ್ಯಾಗ್ ಹಿಂತಿರುಗಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top