ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಕರ್ನಾಟಕ ಸ್ಟೇಟ್ ಎಸ್ಸ್ಸಿ, ಎಸ್ಟಿ, ಒಬಿಸಿ ಡೆವಲಪ್ ಮೆಂಟ್ ಕಮಿಟಿ ತಾಲ್ಲೂಕು ಘಟಕ್ಕೆ ಮಾಜಿ ಸೈನಿಕ ಪ್ರಕಾಶ್ ನಾಯ್ಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜುನಾಯ್ಕ್, ಸಮಾಜದ ಎಲ್ಲಾ ವರ್ಗದ ಅಭಿವೃದ್ಧಿಗಾಗಿ ಹಾಗೂ ನೊಂದವರ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶದಿಂದ ಈ ಸಂಘಟನೆ ಪ್ರಾರಂಭಿಸಲಾಗಿದೆ. ಅಂಗವಿಕಲರು, ವೃದ್ಧರು,ವಿಧವೆಯರು ಹಾಗೂ ನೊಂದವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
18 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾಜಿ ಯೋಧ ಪ್ರಕಾಶ್ ನಾಯ್ಕ ಅವರನ್ನು ತಾಲ್ಲೂಕು ಘಟಕದಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಬಸವರಾಜ್ ಬಿ ಹೆಚ್, ಉಪಾಧ್ಯಕ್ಷ ಕೆಂಚ್ಚಪ್ಪ, ಮಂಜುನಾಥ್, ಸಿದ್ದೇಶ್ ಹಡಪದ, ನಿಂಗರಾಜು,ಹಾಲೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಖಜಾಂಚಿ ಕೋಟೇಶ್,ಕಾರ್ಯದರ್ಶಿ ಶಂಕರ್ ಹಾಗೂ ಸಂಘಟನಾ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು.



