ದಾವಣಗೆರೆ: ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ನಗರದ ಗಡಿಯಾರ ಕಂಬದ ಹತ್ತಿರ ನೆರವೇರಿಸಲಾಯಿತು. ವಿಮಲ ರೇಣುಕಾ ವೀರ ಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ , ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಷ.ಬ್ರ.ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಹಾಸಭಾ ರಾಷ್ಟ್ರೀಯ ಯುವ ಘಟಕ ಉಪಾಧ್ಯಕ್ಷ ಸಂದೀಪ್, ಮಹಾಸಭಾದ ಕಾರ್ಯಕಾರಣಿ ಮತ್ತಿ ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಉಮಾ ರಮೇಶ, ಪ್ರಧಾನ ಕಾರ್ಯದರ್ಶಿ ದ್ರಾಕ್ಷಿಯಣಿ , ನಗರ ಘಟಕದ ಅಧ್ಯಕ್ಷ ಶ್ರೀಮತಿ ಪುಷ್ಪ ವಾಲಿ, ನಗರ ಘಟಕದ ಪಧಾದಿಕಾರಿಗಳು ಪ್ರಧಾನ ಕಾರ್ಯದರ್ಶಿ ಮಂಗಳ, ಗಂಗಾ, ಸುಮಾ ಮಲ್ಲಿಕಾರ್ಜುನ, ಸುನೀತ,ಮಂಜುಳ,ಸುಜಾತ, ಅನ್ನಪೂರ್ಣ, ಮಂಜುಳ ಗದಗೇಶ, ಶಂಕುತಲಮ್ಮ ವೇಂಕಟೇಶ, ಮಂಜುಳ ಮಾಹೇತೇಶ, ರೂಪ ಮರೀಗೌಡರು,ಶಂಕುತಲ, ಆರತಿ ಸೋಗಿ, ಯುವ ಘಟಕದ ಅಧ್ಯಕ್ಷ ಶಂಭು ಉಕೊಂಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಕಾಂತ ನೀಲಗುಂದ ಮತ್ತು ಉಪಾಧ್ಯಕ್ಷ ಅಭಿಷೇಕ್ ಪಿ.ಎಳೆಹೊಳೆ,ಕೊಂಡಜ್ಜಿ ಶಿವಕುಮಾರ್, ಶಿವಾನಂದ ಬೆನ್ನುರ್,ಎಳನೀರು ಮುತ್ತಣ್ಣ, ಜಯಪ್ರಕಾಶ್ ಮಾಗಿ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು, ಭಕ್ತರು ಭಾಗಿಯಾಗಿದ್ದರು.



