ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗಣೇಶೋತ್ಸವದ ಅಂಗವಾಗಿ ರಾಜ್ಯಮಟ್ಟದ ಅಂಚೆ ಕಾರ್ಡ ನಲ್ಲಿ ಚಿತ್ರ ಬರೆಯುವ “ಅಂಚೆ-ಕುಂಚ” ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ನಾರಾಯಣ ಎಂ.ಪೈ, ಕಾಲೇಜು ವಿಭಾಗದಲ್ಲಿ ನವ್ಯ ಮನೋಹರ ಪೈ, ಮತ್ತು ಸಾರ್ವಜನಿಕ ವಿಭಾಗದಲ್ಲಿ ಬಿ.ಕೆ.ಮಾಧವರಾವ್, ದೀಪಾ ಎಂ. ಪೈ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
“ಅಂಚೆ-ಕುಂಚ” ಸ್ಪರ್ಧೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರದ ಆರುನೂರು ಮೂವತ್ತೇಳು ಅಂಚೆ ಕಾರ್ಡ್ ಬಂದಿದ್ದು ಬಹುಮಾನ ವಿಜೇತರಿಗೆ ಮುಂಬರುವ ಸಂಸ್ಥೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್ ತಿಳಿಸಿದ್ದಾರೆ.
ಕಿರಿಯರ ವಿಭಾಗ, ಪ್ರಥಮ: ನಾರಾಯಣ ಎಂ.ಪೈ, ಕುಮಟಾ
ದ್ವಿತೀಯ: ಬಹುಮಾನ ಅಬ್ದುಲ್ ರೆಹಮಾನ್, ಗೋಕಾಕ್
ತೃತೀಯ: ಶೀಲಾ ಪಾಟೀಲ ಕುಮಾರಪಟ್ಟಣಂ
ಕಾಲೇಜು ವಿಭಾಗ , ಪ್ರಥಮ: ನವ್ಯ ಮನೋಹರ ಪೈ, ಗೋಕರ್ಣ
ದ್ವಿತೀಯ: ರಾಜೇಶ್ ಹಿಂಗಳಗಿ, ತಡಸ
ತೃತೀಯ : ಜಲಜಾಕ್ಷಿ ವೀರಪ್ಪ ಗೌಡ, ಹಾಸನ
ಸಾರ್ವಜನಿಕ ವಿಭಾಗ, ಪ್ರಥಮ: ಬಿ.ಕೆ.ಮಾಧವರಾವ್, ಮಂಗಳೂರು
ದೀಪಾ ಎಂ.ಪೈ, ಸಾಗರ
ದ್ವಿತೀಯ: ಚನ್ನಬಸಯ್ಯ ಹಿರೇಮಠ, ಗದಗ
ತೃತೀಯ: ರುದ್ರಾಕ್ಷಿ ವೀರಸ್ವಾಮಿ ಬೆಂಗಳೂರು.
ಡಾ|| ದೀಪಶ್ರೀ ಪ್ರಮೋದ್ ದಾವಣಗೆರೆ



