Connect with us

Dvgsuddi Kannada | online news portal | Kannada news online

ಕನ್ನಡ ಚಲನ್ ಮುದ್ರಿಸದ ಆಂಧ್ರ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ

ದಾವಣಗೆರೆ

ಕನ್ನಡ ಚಲನ್ ಮುದ್ರಿಸದ ಆಂಧ್ರ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಆಂಧ್ರ ಬ್ಯಾಂಕಿನಲ್ಲಿ ಕನ್ನಡ ಚಲನ್ ಮುದ್ರಿಸದ ಹಿನ್ನೆಲೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್. ರಾಮೇಗೌಡ ಬ್ಯಾಂಕ್ ಮ್ಯಾನೇಜರ್ ಗೆ ತರಾಟೆ ತಗೆದುಕೊಂಡರು.

ನಗರ ಮಂಡಿ‌ಪೇಟೆಯ ಆಂಧ್ರ ಬ್ಯಾಂಕ್ ನಲ್ಲಿ ಎಲ್ಲ ವ್ಯವಹಾರ ತೆಲುಗಿನಲ್ಲಿಯೇ ನಡೆಯುತ್ತಿದ್ದು, ಕನ್ನಡ ಭಾಷೆಗೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ. ತ್ರಿಭಾಷ ಸೂತ್ರದಡಿ ಪ್ರಾದೇಶಿಕ ಭಾಷೆ ಕನ್ನಡಕ್ಕೆ ಮಹತ್ವ ನೀಡಬೇಕು. ಆದರೆ, ಈ ಬ್ಯಾಂಕ್ ನಲ್ಲಿ ತೆಲುಗಿಗೆ ಮಹತ್ವ ನೀಡಲಾಗಿದ್ದರಿಂದ ಕರವೇ ದಾಳಿ ಮಾಡಿದೆ.

karave protest

ಕರವೇ ದಾಳಿ ಬಳಿಕ ಬ್ಯಾಂಕಿನ ವ್ಯವಸ್ಥಾಪಕ ಶ್ರೀಹರ್ಷ ಮಾತನಾಡಿ, ಒಂದು ತಿಂಗಳ ಒಳಗಾಗಿ ಕನ್ನಡ ಚಲನ್ ಮತ್ತು ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಿ ಗ್ರಾಹಕರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆಜಿ ಬಸವರಾಜ್. ಜಿಲ್ಲಾ ಪ್ರಧಾನ ಸಂಚಾಲಕ ಗೋಪಾಲ ದೇವರಮನಿ .ಯುವ ಘಟಕದ ಮುಖಂಡರಾದ ಪ್ರದೀಪ್. ವಿಜಯೇಂದ್ರ. ರಮೇಶ್ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎನ್. ಬಿ.ಎ. ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top