ಥೈರಾಯಿಡ್ ಸಮಸ್ಯೆ ನಿವಾರಿಸಲು ಮತ್ಸ್ಯಾಸನ ಹೇಗೆ ಸಹಕಾರಿ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read
  • ಜಿ.ಎನ್ ಶಿವಕುಮಾರ್

ಕೊರೋನ ವೈರಸ್(coronavirus) ದಾಳಿ ತಡೆಗೆ ಯಾವೆಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ನೋಡುವುದಾದರೆ; ವೈರಸ್ ಮಾನವನ ದೇಹವನ್ನು ಪ್ರವೇಶಿಸುವ ಕಣ್ಣು, ಮೂಗು, ಬಾಯಿ, ಗಂಟಲುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗಂಟಲಿನ ದೋಷಗಳನ್ನು ನಿವಾರಿಸಿ, ವೈರಸ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಯೋಗ(yoga) ದಲ್ಲಿ ಸೂಚಿಸಿರುವ ಮತ್ಸ್ಯಾಸನ(matsyasana) ಅತ್ಯಂತ ಪ್ರಯೋಜನಕಾರಿಯಾದುದು.

ಜಾಲಗಾರರು ಹಳ್ಳ ಕೊಳ್ಳ, ಕೆರೆ ಕಟ್ಟೆ, ನದಿಯಲ್ಲಿ ಮೀನು ಹಿಡಿಯುತ್ತಾರೆ. ಅವರು ಬೀಸಿದ ಬಲೆ, ಗಾಳಕ್ಕೆ ದೊಡ್ಡ ದೊಡ್ಡ ಮೀನುಗಳು ಸಿಕ್ಕರೆ ಅವರ ಮನೆಯಲ್ಲಿ ಅಂದು ಹಬ್ಬದೂಟ. ಬರೀ ಮೀನು ತಿಂದು ಜೀವಿಸಕಾಗಲ್ಲ. ಇತರ ವಸ್ತು ಖರೀದಿಗೆ ಹಣ ಬೇಕಲ್ಲ. ಅದಕ್ಕೆ ಅವುಗಳನ್ನು ಮಾರಾಟ ಮಾಡಿ ಒಂದಷ್ಟು ಹಣವನ್ನೂ ಗಳಿಸುತ್ತಾರೆ. ಅಂದಹಾಗೆ, ಮೀನಿಗೆ ಮತ್ಸ್ಯ ಎಂಬ ಇನ್ನೊಂದು ಹೆಸರಿದೆ, ಈ ಹೆಸರಿನ ಮತ್ಸ್ಯಾಸನವೂ ರೂಢಿಯಲ್ಲಿದೆ. ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೆಯ ಮತ್ಸ್ಯಾವತಾರಕ್ಕೆ ಈ ಆಸನ ಮೀಸಲಾಗಿದೆ ಎಂದು ಯೋಗ ಶಾಸ್ತ್ರದಲ್ಲಿ ಹೇಳಲಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ನೀಳವಾಗಿ ಚಾಚಿ ಕುಳಿತು ಪದ್ಮಾಸನ ಹಾಕಿ. ಕೈಗಳ ಸಹಾಯದಿಂದ ಬೆನ್ನನ್ನು ನೆಲಕ್ಕೊರಗಿಸಿ. ಬಳಿಕ ಎರಡೂ ಅಂಗೈಗಳನ್ನು ತಲೆಯ ಪಕ್ಕ ಬೆರಳುಗಳು ಬೆನ್ನಿನ ಭಾಗಕ್ಕೆ ಮುಖಮಾಡಿರುವಂತೆ ಇರಿಸಿ. ಬೆನ್ನನ್ನು ಮೇಲಕ್ಕೆತ್ತುತ್ತಾ ಎದೆಯನ್ನು ಹಿಗ್ಗಿಸಿ. ಕೈಗಳ ಮೇಲೆ ಭಾರ ಹಾಕಿ ತಲೆಯನ್ನು ನೆಲದಿಂದ ಬಿಡಿಸಿ ನಡು ನೆತ್ತಿಯನ್ನು ನೆಲಕ್ಕೂರಿ. ಬಳಿಕ ಕೈಗಳನ್ನು ತಲೆಯ ಮೇಲೆ ನೀಳವಾಗಿ ಚಾಚಿ ನೇರವಾಗಿಸಿ ತಂದು ಎರಡೂ ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎದೆಯನ್ನು ಮತ್ತಷ್ಟು ಹಿಗ್ಗಿಸುತ್ತಾ ಕೈಗಳ ಹಿಡಿತವನ್ನು ಬಿಗಿಗೊಳಿಸಿ ಮೊಳಕೈಗಳನ್ನು ನೆಲಕ್ಕೆ ತಾಗಿಸಿ. ಉಸಿರಾಟ ವೇಗದಿಂದ ಕೂಡಿರುತ್ತದೆ. 15ರಿಂದ 20 ಸೆಕೆಂಡು ಅಂತಿಮ ಸ್ಥಿತಿಯಲ್ಲಿ ನೆಲೆಸಿ ವಿರಮಿಸಿ. ಬಳಿಕ ಪುನರಾವರ್ತನೆ ಅಭ್ಯಾಸ ನಡೆಸಬಹುದು.

gn shivakumar33

ಅವರೋಹಣ ಮಾಡುವಾಗ ಕೈಗಳ ಸಹಾಯದಿಂದ ಮೊದಲು ತಲೆಯನ್ನು ಬಿಡಿಸಿ ನಿಧಾನವಾಗಿ ಭುಜ ಮತ್ತು ತಲೆಯನ್ನು ನೆಲಕ್ಕೊರಗಿಸಿ. ಕನಿಷ್ಠ 30 ಸೆಕೆಂಡು ವಿಶ್ರಾಂತಿ ಪಡೆದ ಬಳಿಕ ಮೇಲೆದ್ದು ಕಾಲುಗಳನ್ನು ಬಿಸಿಡಿ.
ಸೂಚನೆ: ಅಭ್ಯಾಸ ವೇಳೆ ಉಸಿರನ್ನು ಬಿಗಿ ಹಿಡಿಯಬೇಡಿ. ಸರಾಗವಾದ ಉಸಿರಾಟ ನಡೆಯುತ್ತಿರಲಿ. ಅಂತಿಮ ಸ್ಥಿತಿಯಲ್ಲಿ ಕತ್ತನ್ನು ಅತ್ತಿತ್ತ ಹೊರಳಿಸಬಾರದು. ಕತ್ತು ಸೂಕ್ಷ್ಮವಾದ್ದರಿಂದ ತೊಂದರೆ ತಂದುಕೊಳ್ಳಬೇಡಿ.

ಮುನ್ನೆಚ್ಚರಿಕೆ: ತೀವ್ರತರವಾದ ಕುತ್ತಿಗೆ ಹಾಗೂ ಗಂಟಲು ನೋವು ಇದ್ದಾಗ ಮತ್ತು ಕುತ್ತಿಗೆ ಹಾಗೂ ತಲೆಯ ಶಸ್ತ್ರ ಚಿಕಿತ್ಸೆಗಳಾದಾಗ ಅಭ್ಯಾಸ ಮಾಡಕೂಡದು.

ಪ್ರಯೋಜನಗಳು:
*ಎದೆಯು ವಿಶಾಲವಾಗುವುದು. ಬೆನ್ನಿನ ಭಾಗ ಹಿಗ್ಗುವುದು.
*ಕುತ್ತಿಗೆಯು ಹಿಗ್ಗುವುದರಿಂದ ಗೋಮಾಳ ಭಾಗದ ಥೈರಾಯಿಡ್ ಉತ್ತಮ ಪ್ರಯೋಜನ ಹೊಂದುವುದರ ಜತೆಗೆ ಮಹಿಳೆಯರನ್ನು ಹೆಚ್ಚಾಗಿ ಕಾಡುವ ಥೈರಾಯಿಡ್ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.
*ತುಂಬಿದ ಉಸಿರಾಟ ನಡೆಯಲು ಸಹಕಾರಿ.
* ವಸ್ತಿಕುಹರ ಭಾಗದ ಕೀಲುಗಳು ಸ್ಥಿತಿಸ್ಥಾಪಕತ್ವ ಹೊಂದುತ್ತವೆ.
*ಭುಜ ತೋಳುಗಳಿಗೆ ಉತ್ತಮ ವ್ಯಾಯಾಮ ಲಭ್ಯವಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *