Connect with us

Dvgsuddi Kannada | online news portal | Kannada news online

ಕೇತುಗ್ರಸ್ತ ಕಂಕಣಾಕೃತಿ ಖಂಡಗ್ರಾಸ ಸೂರ್ಯಗ್ರಹಣ ಯಾರಿಗೆ ಶುಭ, ಅಶುಭ..?

ಪ್ರಮುಖ ಸುದ್ದಿ

ಕೇತುಗ್ರಸ್ತ ಕಂಕಣಾಕೃತಿ ಖಂಡಗ್ರಾಸ ಸೂರ್ಯಗ್ರಹಣ ಯಾರಿಗೆ ಶುಭ, ಅಶುಭ..?

  • ಸೋಮಶೇಖರ್ ಪಂಡಿತ್B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ ಮತ್ತು  ಸಂಖ್ಯಾಶಾಸ್ತ್ರಪ್ರವೀಣರು Mob.9353 488403

ವಿಕಾರಿನಾಮ ಸಂವತ್ಸರದ ಮಾರ್ಗಶಿರ ಮಾಸ ಕೃಷ್ಣಪಕ್ಷ ಅಮಾವಾಸ್ಯೆ ಗುರುವಾರ 26- 12 -2019 ರಂದು ಧನು ರಾಶಿ ಮೂಲಾ ನಕ್ಷತ್ರದಲ್ಲಿ ಕೇತುಗ್ರಹ ಗೋಚರಿಸುವುದು. ಹಿಂದಿನ ದಿನ ಅಂದರೆ ಇವತ್ತು ( ದಿನಾಂಕ 25-12- 2019)  ರಂದು ರಾತ್ರಿ 8 ಗಂಟೆ 4 ನಿಮಿಷದಿಂದ ವೇದಪ್ರಾರಂಭವಾಗುವುದು. ಆದುದರಿಂದ ಸೂರ್ಯಗ್ರಹಣ ಶಾಂತಿಹೋಮವನ್ನು ಮಾಡಿರಿ.

ಸ್ಪರ್ಶಕಾಲ 8 ಗಂಟೆ 4 ನಿಮಿಷ.

ಗ್ರಹಣದ ಮಧ್ಯಕಾಲ 9 ಗಂಟೆ 25 ನಿಮಿಷ.

ಗ್ರಹಣದ ಮೋಕ್ಷಕಾಲ 11 ಗಂಟೆ 3 ನಿಮಿಷ.

ಶುಭ ಫಲ ರಾಶಿಗಳು

ಕುಂಭ, ಮೀನ ಕರ್ಕಾಟಕ ,ತುಲಾ, ಮಿಶ್ರಫಲ ರಾಶಿಗಳು _ಮೇಷ, ಮಿಥುನ ,ಸಿಂಹ ,ವೃಶ್ಚಿಕ

 ಅಶುಭ ಫಲ ರಾಶಿಗಳು

ಧನಸು ,ಮಕರ ,ವೃಷಭ, ಕನ್ಯಾ.

ಪಾಲಿಸಬೇಕಾದ ನಿಯಮ

(1). ಹಿಂದಿನ ದಿನ ಅಂದರೆ 25_ 12 _2019 ರಂದು 8ಗಂಟೆ 03 ನಿಮಿಷದ ಒಳಗೆ ಭೋಜನ ಮಾಡಿರಿ.

(2). ಗ್ರಹಣ ದೋಷ ಹೊಂದಿದವರು ಸೂರ್ಯಬಿಂಬ ಮತ್ತು ಗೋಧಿಯನ್ನು ದಾನ ಮಾಡಿರಿ.

(3). ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು.

(4). ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ಥಾನಗಳ ಫಲವನ್ನು, ಮೋಕ್ಷದ ನಂತರ ಮಾಡುವ ಸ್ಥಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣದ ಮಧ್ಯದಲ್ಲಿ ಮಾಡುವ ಹೋಮಗಳು ಕೋಟಿ ಹೋಮಗಳ ಫಲವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc

Mob.9353 488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top