Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಪ್ರಮುಖ ಸುದ್ದಿ

ರಾಶಿ ಭವಿಷ್ಯ

ಶುಭ ಬುಧವಾರ-ಸೆಪ್ಟೆಂಬರ್-02,2020 ರಾಶಿ ಭವಿಷ್ಯ

  • ಭಾದ್ರಪದ ಪೂರ್ಣಿಮಾ, ಪ್ರತಿಪಾದ ಶ್ರದ್ಧಾ
  • ಸೂರ್ಯೋದಯ: 06:12, ಸೂರ್ಯಸ್ತ: 18:26
  • ಶಾರ್ವರಿ ನಾಮ ಸಂವತ್ಸರ
  • ಭಾದ್ರಪದ ಮಾಸ ದಕ್ಷಿಣಾಯಣ
  • ತಿಥಿ: ಹುಣ್ಣಿಮೆ – 10:51 ವರೆಗೆ
  • ನಕ್ಷತ್ರ: ಶತಭಿಷ – 18:33 ವರೆಗೆ
  • ಯೋಗ: ಸುಕರ್ಮ – 13:04 ವರೆಗೆ
  • ಕರಣ: ಬವ – 10:51 ವರೆಗೆ ಬಾಲವ – 23:35 ವರೆಗೆ
  • ದುರ್ಮುಹೂರ್ತ: 11:54 – 12:43
  • ವರ್ಜ್ಯಂ: 25:34+ – 27:19+
  • ರಾಹು ಕಾಲ: 12:00 – 13:30
  • ಯಮಗಂಡ: 07:30 – 09:00
  • ಗುಳಿಕ ಕಾಲ: 10:30 – 12:00
  • ಅಮೃತಕಾಲ: 10:47 – 12:30
  • ಅಭಿಜಿತ್ ಮುಹುರ್ತ: ಇಲ್ಲ

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮದುವೆ ಅಥವಾ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು…….

ಮದುವೆ ನಿರ್ಧರಿಸುವಾಗ ಅವರಮುಂದೆ ಗಂಡು-ಹೆಣ್ಣು ಕೂಡಿಸಿ ಮನದಾಳದ ಅಭಿಪ್ರಾಯ ಖಚಿತಪಡಿಸಿಕೊಳ್ಳಬೇಕು ನಂತರ ವಧುವಿನ ಜಾತಕ ಪರೀಕ್ಷಿಸಬೇಕು.ಇಬ್ಬರ ಜಾತಕ ಪರೀಕ್ಷಿಸಬೇಕು. ನಂತರ ಜಾತಕ ಹೊಂದಾಣಿಕೆ ಆದಮೇಲೆ ಮದುವೆ ನಿರ್ಧಾರ ಆಗುತ್ತದೆ.

(1) ಜಾತಕ ತಾಳೆ ಅಂದರೆ ಹೊಂದಾಣಿಕೆ ಬಗ್ಗೆ ಮಾಹಿತಿ.
ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರಬೇಕು. ವಧು-ವರರ ಜಾತಕದಲ್ಲಿ ಗರಿಷ್ಠ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಶುಭ ಎಂದು ತಿಳಿಸಲಾಗುತ್ತದೆ. ಜಾತಕದಲ್ಲಿ ಗಣ,ಮೈತ್ರಿ ಮತ್ತು ನಾಡಿ ದೋಷ ಇರಬಾರದು. ವಧು-ವರರ ರಾಶಿ ಒಂದೇ ಇದ್ದರೆ, ಅವರ ದಾಂಪತ್ಯ ಜೀವನ ಮಧುರ ಜೇನುತುಪ್ಪ ಸೇವಿಸಿ ಹಾಗೆ ಇರುತ್ತದೆ. ಅಷ್ಟೇ ಅಲ್ಲ ಅವರ ರಾಶಿ ಒಂದೇ ಆಗಿದ್ದರೆ ಒಳ್ಳೆಯದು. ವಧು ವರರ ರಾಶಿ ಲಗ್ನ ಒಂದೇ ಆಗಿದ್ದರೆ ಒಳ್ಳೆಯದು. ರಾಶಿ ಒಂದೇ ಆಗಿದ್ದರೆ ನಕ್ಷತ್ರ ಬೇರೆ ಇರಬೇಕು. ಒಂದು ವೇಳೆ ನಕ್ಷತ್ರ ಒಂದೇ ಆದರೂ ಚರಣ ( ಪಾದ) ಬೇರೆ ಇರಬೇಕು.

(2). ವಧು-ವರರ ಜಾತಕದಲ್ಲಿ ದೋಷದ ವಿಚಾರದ ಮಾಹಿತಿ.
ವಧು ವರರ ಜಾತಕ ಹೊಂದಾಣಿಕೆ ಆದಮೇಲೆ ಅದರಲ್ಲಿ ಲೋಪದೋಷದ ಬಗ್ಗೆ ಅರಿಯಬೇಕು. ಇದನ್ನೆಲ್ಲ ಪರಿಗಣಿಸಿ ಮದುವೆಗೆ ಸೂಕ್ತ.

ಮೇಷ
ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ಚಿಂತನೆ. ಆಸ್ತಿ ವಿಚಾರಕ್ಕಾಗಿ ಗೊಂದಲ.
ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾದಿತು. ಕುಟುಂಬದ ಸದಸ್ಯರು ಒಗ್ಗಟ್ಟು ಪ್ರದರ್ಶನ ಮಾಡಿದರೆ ಜಯ ನಿಮ್ಮದು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಆರೋಗ್ಯದ ಕಡೆ ಜಾಗೃತಿ ವಹಿಸಿ. ಕುಟುಂಬ ಸಮೇತ ದೇವದರ್ಶನ ಭಾಗ್ಯ. ಮಕ್ಕಳ ಮದುವೆ ಪ್ರಸ್ತಾಪ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ.
ಸೋಮಶೇಖರ್B.Sc
Mob.No. 93534 88403

ವೃಷಭ
ಪಾಲುದಾರಿಕೆ ವ್ಯವಹಾರ ಕಾರ್ಯ ಬೇಡ.
ಹೊಸ ಉದ್ಯಮದ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ನವದಂಪತಿಗಳಿಗೆ ಸಂತಾನದ ಭಾಗ್ಯ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿವೆ. ದಿನಸಿ ಅಂಗಡಿ ವ್ಯಾಪಾರಸ್ಥರಿಗೆ ಪ್ರಗತಿ ಕಾಣುವಿರಿ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭದ ಚಿಂತನೆ. ಹೈನುಗಾರಿಕೆ ಉದ್ಯಮ ದಾರರಿಗೆ ಒಳ್ಳೆಯ ಪ್ರಗತಿ ಕಾಣುವಿರಿ. ಹೊಸ ಮನೆ ಕಟ್ಟುವ ಚಿಂತನೆ. ಪ್ರೀತಿ-ಪ್ರೇಮ ಮದುವೆ ವಿಳಂಬ. ದುರ್ಗಾಪರಮೇಶ್ವರಿ ಪೂಜಿಸಿ.
ಸೋಮಶೇಖರ್B.Sc
Mob.No. 93534 88403

ಮಿಥುನ
ಕೃಷಿಕರಿಗೆ ಉತ್ತಮ ಲಾಭ.
ತರಕಾರಿ, ಹಣ್ಣುಗಳ ವ್ಯಾಪಾರಿಗಳಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಮಕ್ಕಳ ಮದುವೆ ಪ್ರಸ್ತಾಪ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಪ್ರೇಮಿಗಳ ಮದುವೆ ವಿರೋಧ. ಧಾನ್ಯ ವ್ಯಾಪಾರಿಗಳಿಗೆ ಲಾಭ. ಅಳಿಯನ ನಡುವಳಿಕೆಯಿಂದ ತುಂಬಾ ಬೇಸರ. ಮಗಳ ಭವಿಷ್ಯದ ಸಂಸಾರದ ಚಿಂತನೆ ಕಾಡಲಿದೆ. ಶಿವನ ಧ್ಯಾನ ಮಾಡಿರಿ.
ಸೋಮಶೇಖರ್B.Sc
Mob.No. 93534 88403

ಕಟಕ
ಸಿವಿಲ್ ಕಂಟ್ರಾಕ್ಟರ್ ಚೇತರಿಕೆ. ಸರ್ಕಾರಿ ಟೆಂಡರ್ ಭಾಗ್ಯ ಸಿಗಲಿವೆ.
ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತಸ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯ ವೃದ್ಧಿಯಾಗಲಿದೆ. ಆತ್ಮೀಯ ಸ್ನೇಹ ವರ್ಗದಿಂದ ಧನಸಹಾಯ. ಬಟ್ಟೆ ವ್ಯಾಪಾರಸ್ಥರಿಗೆ, ಜವಳಿ ಅಂಗಡಿಗಾರರಿಗೆ ವ್ಯಾಪಾರದ ಪ್ರಗತಿಯಾಗಲಿದೆ. ಮಕ್ಕಳ ಮದುವೆ ವಿನಾಕಾರಣ ವಿಳಂಬ. ವಿಷ್ಣು ಸಹಸ್ರನಾಮ ಪಠಿಸಿರಿ.
ಸೋಮಶೇಖರ್B.Sc
Mob.No. 93534 88403

ಸಿಂಹ
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ಮಾಡಿರಿ. ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಖಾತರಿ ಮಾಡಿಕೊಳ್ಳಿ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದಿತು. ದೂರದ ಪ್ರಯಾಣ ಮಾಡಬೇಕಾದೀತು. ಎದೆನೋವು ಉದರನೋವು ಕಾಣಿಸುವುದು ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ. ವಾಹನ ಜಾಗ್ರತೆಯಿಂದ ಚಲಾಯಿಸಿ. ದೂರದ ಪ್ರಯಾಣ ಬೇಡ. ದಂಪತಿಗಳಿಗೆ ಸಂತಾನದ ಚಿಂತನೆ ಕಾಡಲಿದೆ. ಗಣೇಶ ಸ್ತೋತ್ರ ಪಠಿಸಿರಿ.
ಸೋಮಶೇಖರ್B.Sc
Mob.No. 93534 88403

ಕನ್ಯಾ
ಆತ್ಮೀಯ ವರ್ಗದಿಂದ ಮಕ್ಕಳ ಮದುವೆ ಪ್ರಸ್ತಾಪ.
ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲ ನೀಡಲಿವೆ. ರಾಜಕಾರಣಿ, ಸಮಾಜಸೇವಕರಿಗೆ ಉತ್ತಮವಾಗಿದೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ. ನಿಮ್ಮ ಅನುಯಾಯಿಗಳ ಬಗ್ಗೆ ಎಚ್ಚರಿಕೆ ವಹಿಸಿ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ತೊಂದರೆ. ಸರ್ಕಾರಿ ನೌಕರಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ. ಉದ್ಯೋಗದಲ್ಲಿ ಸ್ಥಾನಪಲ್ಲಟ ಬೇಡ, ಅಲ್ಲಿಯೇ ಮುಂದುವರೆಯಿರಿ.
ಸೋಮಶೇಖರ್B.Sc
Mob.No. 93534 88403

ತುಲಾ
ಹೊಸ ನಿವೇಶನ ಖರೀದಿ ಅಥವಾ ಮನೆ ಕಟ್ಟುವ ವಿಚಾರ ಪ್ರಸ್ತಾಪ.
ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ ಮಾಡಬೇಕಾದೀತು. ಪತ್ನಿ ವರ್ಗದವರಿಂದ ಸಹಾಯ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳು ನಿವಾರಣೆಯಾಗಲಿವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ಸಹೋದರಿಯರಿಂದ ಪ್ರಸ್ತಾಪ. ರಾಜಿಯಾದ್ರೆ ಒಳಿತು. ಅಕ್ಕ ಪಕ್ಕದವರಿಂದ ಸದಾ ಕಿರಿಕಿರಿ ಅನುಭವಿಸುವಿರಿ. ಸ್ತ್ರೀಯರಿಗೆ ಪದೇಪದೇ ಸಂತಾನದ ಗರ್ಭ ನಷ್ಟ.
ಸೋಮಶೇಖರ್B.Sc
Mob.No. 93534 88403

ವೃಶ್ಚಿಕ
ಲೇವಾದೇವಿಗಾರರಗೆ ಲಾಭ. ಸಾಲಗಾರರಿಂದ ಸದಾ ಕಿರಿಕಿರಿ. ಕುಟುಂಬದಲ್ಲಿ ನಿಮ್ಮಿಂದ ಕಲಹಗಳು ಸೃಷ್ಟಿಯಾಗುವುದು.
ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದಿತು. ಉತ್ತಮ ಆದಾಯವನ್ನು ಹೊಂದುವಿರಿ. ಶತ್ರುಗಳಿಂದ ಎಚ್ಚರಿಕೆ ಹೆಜ್ಜೆ ಇಡಿ. ಸರಕಾರಿ ಮತ್ತು ರಾಜಕೀಯ ಕೆಲಸಗಳಲ್ಲಿ ಯಶಸ್ಸು. ನ್ಯಾಯಾಲದಲ್ಲಿ ಜಯ. ನಾರಾಯಣ ಅಷ್ಟಾಕ್ಷರಿ ಮಂತ್ರ ಪಠಿಸಿರಿ.
ಸೋಮಶೇಖರ್B.Sc
Mob.No. 93534 88403

ಧನು
ದೇವದರ್ಶನ ಭಾಗ್ಯ. ಪತ್ನಿ ಕಡೆಯಿಂದ ಧನಸಹಾಯ. ಅರ್ಧಕ್ಕೆ ನಿಂತಿರುವ ಎಲ್ಲ ಚಟುವಟಿಕೆಗಳು ಪೂರ್ಣ.
ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಕೃಷಿಗೆ ಸಂಬಂಧಿಸಿದ ಹೊಸ ಆಧುನಿಕರಣ ಕೆಲಸಗಳು ಪ್ರಾರಂಭ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಸಹೋದರರಿಂದ ಅನಾವಶ್ಯಕ ಕಿರಿಕಿರಿ ಮುಂದುವರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ವ್ಯಾಪಾರ ಕುಂಠಿತ. ಸದ್ಯಕ್ಕೆ ಯಾವುದೇ ಉದ್ಯೋಗ ಪ್ರಾರಂಭ ಬೇಡ. ಶಿವಪಂಚಾಕ್ಷರಿ ಪಠಿಸಿರಿ.
ಸೋಮಶೇಖರ್B.Sc
Mob.No. 93534 88403

ಮಕರ
ಎಲ್ಲಾ ಮಿತ್ರವರ್ಗದಿಂದ ಸ್ನೇಹ.
ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ. ಸಂಬಳ ಹೆಚ್ಚಳದಲ್ಲಿ ಗೊಂದಲ. ಸ್ನೇಹಿತರ ಕಡೆಯಿಂದ ಕೆಲಸದ ಭಾಗ್ಯ. ಸರಕಾರಿ ನೌಕರಿ ಪ್ರಯತ್ನ ಮಾಡುವವರಿಗೆ ಶುಭ ಸಂದೇಶ. ಮಾತಾಪಿತೃ ಆರೋಗ್ಯದ ಕಡೆ ಜಾಗೃತಿ ವಹಿಸಿ. ಮೃಷ್ಟಾನ್ನ ಭೋಜನ ಸೇವಿಸುವಿರಿ. ಸಂಗಾತಿಯಿಂದ ಸಂತೋಷದ ಕ್ಷಣ. ಮದುವೆ ಪ್ರಸ್ತಾಪ ಚಿಂತನೆ. ಹಣಕಾಸಿನ ಅಡಚಣೆಯಿಂದ ಮನೆ ಕಟ್ಟುವ ವಿಚಾರ ನಿಲ್ಲುವುದು. ನವದಂಪತಿಗಳಿಗೆ ಸಂತಾನ ಚಿಂತನೆ. ವಾಹನದಿಂದ ತೊಂದರೆ. ಶ್ರೀ ಆಂಜನೇಯಸ್ವಾಮಿ ಪೂಜಿಸಿರಿ.
ಸೋಮಶೇಖರ್B.Sc
Mob.No. 93534 88403

ಕುಂಭ
ಊರಿಗೆ ಉಪಕಾರ ಮಾಡಿ ಅಪಮಾನ ಸಾಧ್ಯತೆ. ನೆರೆಯವರೊಂದಿಗೆ ಸ್ನೇಹ–ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಪ್ರಯಾಣದಿಂದಾಗಿ ದೇಹಾಯಾಸ. ಕೆಲಸದಲ್ಲಿ ಅಪಮಾನ. ಆರೋಗ್ಯದಲ್ಲಿ ಮೂಲವ್ಯಾದಿ ,ಎದೆ ನೋವು, ಮಂಡಿ ನೋವು ಕಾಣಿಸುವುದು. ಮಕ್ಕಳು ಕೆಲಸದಲ್ಲಿ ನಿರಾಸಕ್ತಿ ತೋರಿಸುವರು. ಮನೆಯಲ್ಲಿ ಅಶಾಂತಿ ಕಾಣುವುದು. ವಾದ-ವಿವಾದದಲ್ಲಿ ಮುಖಭಂಗ. ಪ್ರೇಮಿಗಳ ಮಧ್ಯೆ ವೈಮನಸ್ಸು. ಶಿಕ್ಷಣ ಸಂಸ್ಥೆಯ ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟು. ಪತ್ನಿ ಆರೋಗ್ಯದಲ್ಲಿ ಕಿರಿಕಿರಿ. ಸಹೋದ್ಯೋಗಿಗಳಿಂದ ಚಾಡಿ ಮಾತಿನಿಂದ ನಿಮಗೆ ತೊಂದರೆ ಕಾಡಲಿದೆ. ನಾಗ ಪ್ರತಿಷ್ಠಾಪನೆ ಮಾಡಿರಿ.
ಸೋಮಶೇಖರ್B.Sc
Mob.No. 93534 88403

ಮೀನ
ಕುಟುಂಬ ಸಮೇತ
ಜಮೀನಿನ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಸುಗಮ. ಹಣಕಾಸು ಸಂಸ್ಥೆಗಳಿಂದ ಸಾಲ ಮಂಜೂರಾತಿ. ಮನೆ ಮಾರಾಟ. ಪಕ್ಕದವರಿಂದ ಅನಾವಶ್ಯಕ ಜಗಳ. ಉದ್ಯೋಗದಲ್ಲಿ ಅಧಿಕ ಒತ್ತಡ. ಗರ್ಭಿಣಿ ಸ್ತ್ರೀಯರು ಜಾಗ್ರತೆವಹಿಸಿ. ತಂತ್ರಜ್ಞಾನ ಉದ್ಯೋಗಿಗಳಿಗೆ ಶುಭ. ಉದ್ಯೋಗದ ಭಾಗ್ಯ. ಅಹಂಕಾರ ಬೇಡ. ವಾದವಿವಾದದಿಂದ ನಷ್ಟ. ವಿದ್ಯುತ್ ಉಪಕರಣದಿಂದ ತೊಂದರೆ. ಪ್ರೇಮಿಗಳ ಮದುವೆ ಪ್ರಸ್ತಾಪ. ಉದ್ಯೋಗದಲ್ಲಿ ಬಡ್ತಿ. ಅಳಿಯನ ನಡವಳಿಕೆ ಬೇಸರ ಮಗಳ ಸಂಸಾರದ ಭವಿಷ್ಯದ ಚಿಂತನೆ. ಶ್ರೀಮಹಾಗಣಪತಿ ಆರಾಧನೆ ಮಾಡಿರಿ.
ಸೋಮಶೇಖರ್B.Sc
Mob.No. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top