Connect with us

Dvgsuddi Kannada | online news portal | Kannada news online

ಹರಿಹರ: ನದಿಯ ಪ್ರವಾಹದಲ್ಲಿ ಸಿಲುಕಿದ ಕೋತಿಗಳ ರಕ್ಷಣೆಗೆ ಹರಸಾಹಸ

ಹರಿಹರ

ಹರಿಹರ: ನದಿಯ ಪ್ರವಾಹದಲ್ಲಿ ಸಿಲುಕಿದ ಕೋತಿಗಳ ರಕ್ಷಣೆಗೆ ಹರಸಾಹಸ

ಡಿವಿಜಿ ಸುದ್ದಿ, ಹರಿಹರ: ಭಾರೀ ಮಳೆಯಿಂದ ಒಮ್ಮೆಲೇ  ನದಿ ನೀರು ಏರಿಕೆಯಾದ ಪರಿಣಾಮ 45ಕ್ಕೂ  ಹೆಚ್ಚು ಕೋತಿಗಳು ತುಂಗಾಭದ್ರಾ ನದಿಯ ಪ್ರವಾಹದಲ್ಲಿ ಸಿಲುಕಿವೆ. ಕೋತಿಗಳ ರಕ್ಷಣೆಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡು ದಿನಗಳಿಂದ ಪ್ರಯತ್ನಿಸುತ್ತಿದ್ದು, ರಕ್ಷಣೆ ಕಾರ್ಯ ಇನ್ನು ಕೂಡ ಪೂರ್ಣವಾಗಿಲ್ಲ.

ಜಿಲ್ಲೆಯ ಹರಿಹರದ ರಾಜನಹಳ್ಳಿ ಬಳಿಯ ತುಂಗಾಭದ್ರಾ ನದಿ ದಂಡೆಯಲ್ಲಿ ಕೋತಿಗಳು ಪ್ರವಾಹದಲ್ಲಿ  ಸಿಲುಕಿವೆ.  ಇವುಗಳನ್ನು ಹೊರ ತರಲು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ನದಿ ನೀರು ಏಕಾಏಕಿ ಬಂದಿದ್ದರಿಂದ ಮರದಲ್ಲಿ ಕುಳಿತಿದ್ದ ಕೋತಿಗಳು ಅಲ್ಲೇ ಉಳಿದು ಬಿಟ್ಟಿವೆ.

monkey 2

ಇಂದು ಸಹ ಬೆಳಗ್ಗೆಯಿಂದಲೇ ಕೋತಿಗಳ ರಕ್ಷಣೆ ಕಾರ್ಯಾಚರಣೆ  ನಡೆಸುತ್ತಿದ್ದು, ಜನರು ಜಾಸ್ತಿ ಇರುವ ಕಾರಣ ಭಯಪಟ್ಟು ಕೋತಿಗಳು  ಮರದಿಂದ ಕೆಳಗೆ ಬರುತ್ತಿಲ್ಲ. ರಕ್ಷಣಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಬರುವ ಸಾಧ್ಯತೆ ಇದ್ದು, ಇದಕ್ಕಾಗಿ ಕಾಯುತ್ತಿದ್ದೇವೆ. ಕೋತಿಗಳು  ಕುಳಿತ ಮರದಿಂದ  ದಂಡೆವರೆಗೂ ಹಗ್ಗ ಕಟ್ಟಿದ್ದು, ಅವುಗಳಿಗೆ ಅಗತ್ಯವಾದ ಆಹಾರವನ್ನು ಸಹಾ ಇಡಲಾಗಿದೆ ಎಂದು ಅರಣ್ಯಾಧಿಕಾರಿ ಹಿದಾಯತ್ ತಿಳಿಸಿದರು.

ಕೋತಿಗಳ  ರಕ್ಷಣೆಗೆ  ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ, ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿ ಪ್ರಾಣಿಗಳ  ರಕ್ಷಿಸಲು ಶ್ರಮಿಸುತ್ತಿದ್ದಾರೆ.  ಈ ಕಾರ್ಯಾಚರಣೆಯಲ್ಲಿ ಭಾಗಿಯಾದ  ಎಲ್ಲಾ ಸಿಬ್ಬಂದಿಗಳಿಗೆ  ಧನ್ಯವಾದಗಳು ಎಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ತಿಳಿಸಿದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಿಹರ

ದಾವಣಗೆರೆ

Advertisement
Advertisement Enter ad code here

Title

To Top