Connect with us

Dvgsuddi Kannada | online news portal | Kannada news online

ಯೋಗೇಶ್ವರ್  ಅವರಿಗೆ ಸಚಿವ ಸ್ಥಾನ ನೀಡಲು ನನ್ನ ಪ್ರತಿರೋಧವಿಲ್ಲ: ರಾಮನಗರ ಬಜಿಪಿ ಜಿಲ್ಲಾಧ್ಯಕ್ಷ ರುದ್ರೇಶ್

ಪ್ರಮುಖ ಸುದ್ದಿ

ಯೋಗೇಶ್ವರ್  ಅವರಿಗೆ ಸಚಿವ ಸ್ಥಾನ ನೀಡಲು ನನ್ನ ಪ್ರತಿರೋಧವಿಲ್ಲ: ರಾಮನಗರ ಬಜಿಪಿ ಜಿಲ್ಲಾಧ್ಯಕ್ಷ ರುದ್ರೇಶ್

ಡಿವಿಜಿ ಸುದ್ದಿ, ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವುದಕ್ಕೆ ನನ್ನ ಪ್ರತಿರೋಧವಿಲ್ಲ ಎಂದು ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ರುದ್ರೇಶ್ ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಮಾತಾಡಿದ ರುದ್ರೇಶ್, ನಿನ್ನೆ  ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರ  ಸಭೆಗೆ ಹೋಗಿದ್ದ ನಿಜ.  ಈ ಸಭೆಯಲ್ಲಿದ್ದ ಶಾಸಕರಿಗೆ ಯೋಗೇಶ್ವರ್ ಅರಿಗೆ ಸಚಿವ  ಸ್ಥಾನ ಕೊಡುವುದನ್ನು ವಿರೋಧಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಸೋತವರಿಗೆ ಮಂತ್ರಿ ಸ್ಥಾನ ಕೊಡೋದು ಗೆದ್ದಿರುವ ಅವರಿಗೆಲ್ಲ ಸಹಜವಾಗಿ ಬೇಸರವಾಗಿರಬಹುದು. ಆದರೆ ಹೈಕಮಾಂಡ್ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಅವರೂ ಒಪ್ಪಬಹುದು. ಆದರೆ, ನಾನು ಆಸಭೆಗೆ ಹೋಗಿದ್ದಕ್ಕೆ  ಬೇರೆ ಅರ್ಥ ಬೇಡ ಎಂದು ಸ್ಪಷ್ಟೀಕರಣ ನೀಡಿದರು.

ಯೋಗೇಶ್ವರ್ ಅವರು ನಮ್ಮ ಜಿಲ್ಲೆಯವರು. ನಾನೂ ರಾಮನಗರ ಜಿಲ್ಲೆಯವನಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲು ಖಂಡಿತ ವಿರೋಧಿಸಿಲ್ಲ.ನಮ್ಮ ಜಿಲ್ಲೆಯವರಾದ ಯೋಗೇಶ್ವರ್ ರಿಗೆ ಸಚಿವ ಸ್ಥಾನ ಸಿಕ್ಕಿದರೆ ಅದು ನಮಗೆಲ್ಲ ಸಂತೋಷವೇ. ಇದರಿಂದ ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top