Connect with us

Dvgsuddi Kannada | online news portal | Kannada news online

ದೆಹಲಿ ಗಲಭೆಗೆ ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣ ಕಾರಣ: ಕುಮಾರಸ್ವಾಮಿ

ಪ್ರಮುಖ ಸುದ್ದಿ

ದೆಹಲಿ ಗಲಭೆಗೆ ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣ ಕಾರಣ: ಕುಮಾರಸ್ವಾಮಿ

ಡಿವಿಜಿ ಸುದ್ದಿ, ರಾಮನಗರ: ದೆಹಲಿಯಲ್ಲಿ ಸಿಎಎ ಪರ-ವಿರೋಧದ ಗಲಭೆಗೆ ಬಿಜೆಪಿ ನಾಯಕರ  ಪ್ರಚೋದನಕಾರಿ ಭಾಷಣ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿಯವರು ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಹೊರಟಿದ್ದಾರೆ.  ಭಾರತ ಹಿಂದೂ ರಾಷ್ಟ್ರ ವೇ, ಬಿಜೆಪಿಯವರು ಹೊಸದಾಗಿ ಏನು ಮಾಡಬೇಕಿಲ್ಲ. ಒಂದು ಕಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಕರೆ ತಂದು ಗುಜರಾತಿ‌ನಲ್ಲಿ ಮೆರವಣಿಗೆ ಮಾಡುತ್ತಾರೆ. ಇನ್ನೊಂದೆಡೆ ದೆಹಲಿಯಲ್ಲಿ ಗಲಭೆ ಸೃಷ್ಠಿಸುತ್ತಾರೆ. ಮುಂಬರುವ ದಿನಗಳಲ್ಲಿ ಜನರು ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ದೊರೆಸ್ವಾಮಿ ಹೋರಾಟ ಮಾಡಿದಾಗ ಯತ್ನಾಳ್  ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ.ಆರ್‌ಎಸ್‌ಎಸ್‌ ಫಲಕ, ತಿಲಕ ಇಟ್ಟುಕೊಂಡು ಬಂದು  ಆಟಾಡ್ತಾರೆ, ಆಡಲಿ.  ಮಹಾರಾಷ್ಟ್ರದ ತಾಕತ್ತು ದೊಡ್ಡದ, ಮಂಡ್ಯ ತಾಕತ್ತು ದೊಡ್ಡದ ಎಂದು ಮುಂದೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಸಚಿವ ನಾರಾಯಣ ಗೌಡ ತರಾಟೆಗೆ ತಗೆದುಕೊಂಡರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top