ಡಿವಿಜಿ ಸುದ್ದಿ, ದಾವಣಗೆರೆ: ಚುನಾವಣೆ ವೇಳೆ ಮುಸ್ಲಿಂ ಪ್ರದೇಶಕ್ಕೆ ಹೋಗಿ ಇದುವರೆಗೂ ವೋಟ್ ಕೇಳಿಲ್ಲ, ಕೈಮುಗಿದು ಮತಯಾಸಚಿಸಿಲ್ಲ. ಆದ್ರೂ ಕಳೆದ ಚುನಾವಣೆಯಲ್ಲಿ ನನಗೆ ಮುಸ್ಲಿಂ ಪ್ರದೇಶದಿಂದ ಮತಗಳು ಬಂದಿವೆ. ಇದೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ದಾವಣಗೆರೆ ನಗರದ ಶಾರದಾಂಭ ಸಭಾಂಗಣ ದಲ್ಲಿ ನಡೆದ ಪಾಲಿಕೆ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ ಈಶ್ವರಪ್ಪ, ಮುಸ್ಲಿಂ ಮಹಿಳೆಯರು ಬುರಕಾ ಹಾಕಿಕೊಂಡು ತನ್ನ ಕ್ಷೇತ್ರದಲ್ಲಿ ನಾನಾ ರೀತಿಯ ಸಹಾಯಕ್ಕಾಗಿ ಬರುತ್ತಾರೆ. ಅವರಿಗೆ ಸಹಾಯ ಮಾಡಿದ್ರೆ ಸಾಕು, ಇನ್ನೊಮ್ಮೆ ಬರುವಾಗ ಬುರಖಾ ಇಲ್ಲದೆ ಆತ್ಮೀಯವಾಗಿ ಸಂಬಂಧಕರ ರೀತಿ ಬರ್ತಾರೆ ಎಂದರು.
ಈ ಹಿಂದಿನ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಲ್ಲಿ ಮುಸ್ಲಿಂ ಪ್ರಭಾವ ಇರುವ 36 ಬೂತ್ ಗಳಲ್ಲಿ ನನಗೆ ಒಂದು ಮತ ಬರುತ್ತಿರಲಿಲ್ಲ. ಆದ್ರೆ ಕಳೆದ ಚುನಾವಣೆ ಯಲ್ಲಿ ಮುಸ್ಲಿಂ ಪ್ರದೇಶದಲ್ಲೂಮತಗಳು ನನಗೆ ಬಂದಿವೆ. ಆದ್ರೆ ನಾನು ಆ ಪ್ರದೇಶದಲ್ಲಿ ಮತಯಾಚನೆ ಮಾಡಿಲ್ಲ ಎಂದರು.



