ಡಿವಿಜಿಸುದ್ದಿ.ಕಾಂ, ದಾವಣಗೆರೆ: ದೇಶದ ಹೊರೆಗೆ ಸೈನಿಕ ಗಡಿ ಕಾಯ್ದರೆ, ದೇಶದ ಒಳಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಈ ಮೂಲಕ ನಾವೆಲ್ಲ ನೆಮ್ಮದಿಯಾಗಿ ಬದುಕುತ್ತಿದ್ದೇವೆಂದರೆ ಸೈನಿಕರು ಮತ್ತು ಪೊಲೀಸರು ಕಾರಣವೆಂದು ವಿರಕ್ತ ಮಠದ ಬಸವ ಪ್ರಭುಸ್ವಾಮೀಜಿ ಹೇಳಿದರು.

ದಾವಣಗೆರೆ ಜಯದೇವ ವೃತ್ತದಲ್ಲಿ ಹುತಾತ್ಮ ಯೋಧ ಮತ್ತು ಪೊಲೀಸ್ ಕುಟುಂಬಗಳಿಗೆ ಸನ್ಮಾನ ಮತ್ತು ಹುತಾತ್ಮ ಪೊಲೀಸರ ಸ್ಮರಣೆ ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಮಾತನಾಡಿದ ಅವರು, ರಕ್ಷಣೆಯಲ್ಲಿ ಪೊಲೀಸರು ಸೈನಿಕರ ಸೇವೆ ಅತ್ಯಮೂಲ್ಯವಾದದು. ಅವರ ಬಲಿದಾನಕ್ಕೆ ಯಾವುದು ಸರಿಸಾಟಿಯಲ್ಲ. ನಾವೆಲ್ಲ ಸುಖ, ಶಾಂತಿ ಸಮೃದ್ಧಿಯಿಂದ ಇರಲು ಸೈನಿಕರೇ ಕಾರಣ. ದೇಶ ಸೇವೆಯೇ ಈಶ ಸೇವೆ ಎನ್ನುವ ತತ್ವನ್ನು ಸೈನಿಕರು ಅಕ್ಷರಶಃ ಪಾಲಿಸುತ್ತಿದ್ದಾರೆ ಎಂದರು.

ದೇಶಕ್ಕೋಸ್ಕರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಹುತಾತ್ಮರಾಗಿದ್ದಾರೆ. ಜೀವನದಲ್ಲಿ ಹುತಾತ್ಮರಾಗುವುದಕ್ಕೆ ಅವಕಾಶವಿರುವುದು ಸೈನ್ಯದಲ್ಲಿ ಮಾತ್ರ. ಇಂತಹ ಹುತಾತ್ಮ ಸೈನಿಕರನ್ನು ಎಷ್ಟು ಸ್ಮರಣೆ ಮಾಡಿದ್ರು ಸಾಲದು. ಯುವಕರು ಯುವತಿಯರು ಸೈನ್ಯ ಸೇರಲು ಮುಂದೆ ಬರಬೇಕು . ಉತ್ತರ ಪ್ರದೇಶ, ಬಿಹಾರ ಯೋಧರ ಸಂಖ್ಯೆ ದೊಡ್ಡದಿದೆ . ಕರ್ನಾಟಕದಿಂದಲು ಸಂಖ್ಯೆ ಹೆಚ್ಚಾಗಬೇಕು ಎಂದು ಬಸವ ಪ್ರಭುಸ್ವಾಮೀಜಿ ಕರೆ ನೀಡಿದರು.

ಈ ಸಂದರ್ಭದಲ್ಲಿ 7 ಹುತಾತ್ಮ ಪೊಲೀಸ್ ಮತ್ತು ಯೋಧ ಕುಟುಂಬಗಳನ್ನು ಸನ್ಮಾನಿಸಲಾಯಿತು. ಎಸ್ ಪಿ ಹನುಮಂತರಾಯ , ಸಿಆರ್ ಪಿ ಎಸ್ ಜಗದೀಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



