Connect with us

Dvgsuddi Kannada | online news portal | Kannada news online

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್; ನೂತನ ಸಚಿವ ಸುಧಾಕರ್ ಗೆ ಮುಖಭಂಗ

ಪ್ರಮುಖ ಸುದ್ದಿ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್; ನೂತನ ಸಚಿವ ಸುಧಾಕರ್ ಗೆ ಮುಖಭಂಗ

 ಡಿವಿಜಿ ಸುದ್ದಿ, ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣಾ ಫಲಿತಾಂಶ  ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 31 ವಾರ್ಡುಗಳಲ್ಲಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಬಿಜೆಪಿ 09 ವಾರ್ಡುಗಳಲ್ಲಿ ಜಯ ದಾಖಲಿಸಿದ್ದು, 02 ವಾರ್ಡ್ ನಲ್ಲಿ  ಜೆಡಿಎಸ್ ಹಾಗೂ 04 ವಾರ್ಡ್ ನಲ್ಲಿ  ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

3 party logo

ಜಯ ಗಳಿಸಿದ ಅಭ್ಯಾರ್ಥಿಗಳು
ಕಾಂಗ್ರೆಸ್: ರತ್ನಮ್ಮ, ಶಕೀಲಾ ಭಾನು, ಸತೀಶ್, ನಿರ್ಮಲಾಪ್ರಭು, ದೀಪಕ್, ಅಂಬರೀಶ್, ರಫೀಕ್, ಅಂಬಿಕಾ, ನರಸಿಂಹಮೂರ್ತಿ, ಅಪ್ಜಲ್, ಸ್ವಾತಿ.ಎಂ, ನೇತ್ರಾವತಿ, ಚಂದ್ರಶೇಖರ್, ವೆಂಕಟೇಶ್, ಮೀನಾಕ್ಷಿ, ಜಯಲಕ್ಷ್ಮೀ.

ಬಿಜೆಪಿ: ಸುಮ ಶಶಿಶೇಖರ್, ಗಜೇಂದ್ರ, ನಾಗರಾಜ್, ದೀಪ.ಬಿ.ಕೆ, ಮಂಜುಳ.ಆರ್, ಯತೀಶ್, ಎ.ಬಿ.ಮಂಜುನಾಥ್, ಬಿ.ಎನ್.ರಾಜೇಶ್ವರಿ, ಭಾರತಿದೇವಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು.

ಜೆಡಿಎಸ್: ಮಠಮಪ್ಪ, ವೀಣಾರಾಮು

ಪಕ್ಷೇತರ:  ರುಕ್ಮಿಣಿ ಮುನಿರಾಜು, ಸುಬ್ರಮಣ್ಯಂ, ಮಹಮದ್ ಜಾಫರ್, ಡಿ.ಎಸ್.ಆನಂದ್ ರೆಡ್ಡಿ ಬಾಬು

 

ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಾಲಾಗಿದ್ದು, ನೂತನ ಸಚಿವ ಡಾ.ಕೆ ಸುಧಾಕರ್  ಉಸ್ತುವಾರಿಯಲ್ಲಿ ನಡೆದ ಚುನಾವಣೆಗಯಲ್ಲಿ ಮುಖಭಂಗವಾಗಿದೆ. ಪ್ರತಿ ವಾರ್ಡ್ ಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡಿದ್ದರು.20ರಿಂದ 22 ವಾರ್ಡುಗಳಲ್ಲಿ ಗೆಲುವಿನ ನೀರಿಕ್ಷೆಯಲ್ಲಿದ್ದ ಸಚಿವ ಸುಧಾಕರ್‍ಗೆ ನಗರಸಭೆ ಚುನಾವಣೆ ಫಲಿತಾಂಶ ತೀವ್ರ ನಿರಾಸೆ ತಂದಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top