Connect with us

Dvgsuddi Kannada | online news portal | Kannada news online

ದೇವರಿಂದ ಪಡೆದ ದಾನ, ಮಹಾ ದಾನವಲ್ಲ; ಅದು ದಾಸೋಹ : ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ

Home

ದೇವರಿಂದ ಪಡೆದ ದಾನ, ಮಹಾ ದಾನವಲ್ಲ; ಅದು ದಾಸೋಹ : ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ

ಡಿವಿಜಿ ಸುದ್ದಿ, ಚನ್ನಗಿರಿ: ಮಾನವ ಮಹಾ ದಾನಿಯಲ್ಲ, ಮಹಾ ದಾಸೋಹಿ. ಮಾನವ ದೇವರಿಂದ ಪಡೆದನ್ನು ದಾನ ಮಾಡುತ್ತಾನೆ. ಅದು ದಾನ ಆಗುವುದಿಲ್ಲ,  ದಾಸೋಹ ಆಗುತ್ತದೆ ಎಂದು ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬೆಳ್ಳಿಗನೂಡು ಗ್ರಾಮದಲ್ಲಿ ಭಕ್ತರೊಬ್ಬರ ಗೃಹ ಪ್ರವೇಶ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು,  ದಾನದಿಂದ ಕೊಡುವನು ಶ್ರೇಷ್ಟ ಆಗ್ತಾನೆ.  ಪಡೆಯುವನು ಕನಿಷ್ಟ ಆಗ್ತಾನೆ. ದಾಸೋಹದಲ್ಲಿ ಆ ಭಾವ ಇಲ್ಲ. ಹಾಗಾಗಿ ಶರಣರು ಒತ್ತಿ ಹೇಳಿದ್ದು ದಾಸೋಹ ತತ್ವವನ್ನು ಹೊರತಾಗಿ ದಾನ ತತ್ವವನ್ನಲ್ಲ. ದಾನ ಕೊಡುವ ಶಕ್ತಿ ಮನುಷ್ಯನಿಗಿಲ್ಲವೆಂದು ಒಂದು ಕಡೆ ವಚನಕಾರರು ಹೇಳಿದ್ದಾರೆ ಎಂದರು.

ಎಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗುಳುವ ಕುನ್ನಿಗಳನೆನ್ನಬೇಕು ರಾಮನಾಥ. ಈ ಭೂಮಿ, ನೀರು, ಮಳೆ, ಬೆಳೆ, ಬೆಳಕು ಕೊಡುವಂತಹ ಶಕ್ತಿ ಮಾನವನಿಗಿಲ್ಲ.  ಇದೆಲ್ಲಾ ದೇವರಿಂದ ಬಂದಂತಹ ಕೊಡುಗೆ.  ಆ ಕೊಡುಗೆಯನ್ನು ಪಡೆದ ನಾವು  ದುಡಿಮೆ ಮಾಡಿಕೊಂಡು ಬೇರೊಬ್ಬರಿಗೆ ಸಹಾಯ ಮಾಡುವುದನ್ನು ದಾಸೋಹ ಎಂದು ಕರೆಯುವರು ಆಶೀರ್ವಚನ ನೀಡಿದರು.

ಮಾನವನಿಗೆ ಶಬ್ದಗಳ ಕೊರತೆಯಿಂದಾಗಿ ದಾನಶೂರ ಕರ್ಣ ದಾನ ಚಿಂತಮಣಿ ಧರ್ಮ ಚಿಂತಮಣಿ ಸೇರಿದಂತೆ ಇನ್ನೂ ಅನೇಕ ಪದಗಳನ್ನು ಬಳಸುತ್ತಾರೆ.  ಅದರ ಬದಲಾಗಿ ಮಹಾ ದಾಸೋಹಿ ಎಂಬ ಪದವನ್ನು ಬಳಸಬೇಕೆಂಬುದು ಶರಣರ ಆಶಯವಾಗಿದೆ.

ಈ ಸಂದರ್ಭದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ , ಜಿಲ್ಲಾ ಪಂಚಾಯಿತಿ ಸದಸ್ಯ ವಾಗೀಶ್‌,  ತಿಪ್ಪೇಸ್ವಾಮಿ , ಉಮಾಪತಿ, ಮಾಜಿ ಶಾಸಕ ತಿಮ್ಮಪ್ಪ  ಹೊಳಲ್ಕೆರೆ,  ಜಗದೀಶ್‌ ಗೌಡ ಕೋಗಲೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

  • Home

    ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024

    By

    ಈ ರಾಶಿಯವರು ಸಿಹಿ ಸಂದೇಶಗಳ ಮೇಲೆ ಸಿಹಿ ಸಂದೇಶ ಪಡೆಯಲಿದ್ದೀರಿ, ಬುಧವಾರ- ರಾಶಿ ಭವಿಷ್ಯ ಮಾರ್ಚ್-13,2024 ಸೂರ್ಯೋದಯ: 06:29, ಸೂರ್ಯಾಸ್ತ :...

  • Home

    ಗುರುವಾರ- ರಾಶಿ ಭವಿಷ್ಯ ಜನವರಿ-4,2024

    By

    ಈ ರಾಶಿಗಳ ಕಿರುತೆರೆಯ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತಗಾರರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಗುರುವಾರ- ರಾಶಿ ಭವಿಷ್ಯ...

  • Home

    ಮರದ ಬಾಗಿಣ ವಿಶೇಷತೆ..!

    By

    ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.MOB.93534 88403 ೧....

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-29,2023

    By

    ಈ ರಾಶಿಯವರಿಗೆ ಬಂಧುಗಳ ಅವಹೇಳನ ಮಾತುಗಳಿಂದ ಪ್ರಗತಿಗೆ ದಾರಿದೀಪ, ಈ ರಾಶಿಯವರಿಗೆ ಒತ್ತಡದ ಮೇರೆಗೆ ಹಣ ಸ್ವೀಕಾರ, ಈ ರಾಶಿಯವರು ಚಿನ್ನಾಭರಣ...

  • Home

    ಬುಧವಾರ- ರಾಶಿ ಭವಿಷ್ಯ ನವೆಂಬರ್-22,2023

    By

    ಈ ಪಂಚ ರಾಶಿಗಳ ತುಳಸಿ ಪೂಜೆ ನಂತರ ವಿವಾಹ ಕಾರ್ಯ ನೆರವೇರುವುದು, ರಿಯಲ್ ಎಸ್ಟೇಟ್ ಉದ್ಯಮದಾರರು ಬಹು ಮುಖ್ಯವಾದ ಪ್ರಾಜೆಕ್ಟ್ ಗೆ...

To Top