ಡಿವಿಜಿಸುದ್ದಿ.ಕಾಂ. ದಾವಣಗೆರೆ: ರಾಮಾಯಣದ ಜೀವನ ಮೂಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಥಮಿಕ ಶಾಲಾ ವಿಭಾಗ ಮುಖ್ಯಸ್ಥ ಎಸ್.ಆರ್. ಶಿರಗಂಬಿ ಅಭಿಪ್ರಾಯಪಟ್ಟರು.

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದ ಮೌಲ್ಯದ ಬಗ್ಗೆ, ಋಷಿಮುನಿಗಳು ಹಾಕಿಕ್ಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕಿದೆ. ದುಷ್ಟ ಗುಣಗಳನ್ನು ಬಿಟ್ಟು ಶಿಷ್ಟ ಆಚರಣೆಗೆ ರಾಮಾಯಣದಂತಹ ಮಹಾ ಕಾವ್ಯವೇ ಪ್ರೇರಣೆ ಎಂದರು.

ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೇಮಾ ಪಿ.ಎಂ ಮಾತನಾಡಿ, ರಾಮಾಯಣದದಲ್ಲಿ ಬರುವ ಸಹೋದರತ್ವ, ಪ್ರತಿಷ್ಟೆ, ಸ್ರೀ ರಕ್ಷಣೆ, ಏಕಪತ್ನಿತ್ವ ಅಂಶಗಳ ಕುರಿತು ವಿವರಿಸಿದರು. ಪ್ರಶಿಕ್ಷಣ ವಿದ್ಯಾರ್ಥಿ ಚೈತ್ರ ಬಿ.ಎಸ್. ಪ್ರಾರ್ಥಿಸಿದರು. ರಾಕೇಶ್ ಬಿ.ಎಂ ಸ್ವಾಗತಿಸಿದ್ದು, ಸತ್ಯ ಸಾಗರ್ ಎಂ ವಂದನಾರ್ಪನೆ ನೆರವೇರಿಸಿದರು.



