Connect with us

Dvgsuddi Kannada | online news portal | Kannada news online

ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ  ಲಾಕ್ ಡೌನ್ ಸಡಿಲಿಕೆ

ಪ್ರಮುಖ ಸುದ್ದಿ

ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ  ಲಾಕ್ ಡೌನ್ ಸಡಿಲಿಕೆ

ಡಿವಿಜಿ ಸುದ್ದಿ, ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್‍ನಿಂದಾಗಿ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್‍ಡೌನ್ ನಿಯಮವನ್ನು ಇಂದು ಮಧ್ಯರಾತ್ರಿಯಿಂದಲೇ ಸೇಫ್ ಝೋನ್‍ನಲ್ಲಿ ಸಡಿಲಗೊಳ್ಳಲಿದೆ. ಆದರೆ, ರೆಡ್ ಝೋನ್,  ಹಾಟ್ ಸ್ಪಾಟ್, ಕಟೈಂನ್ ಮೆಂಟ್ ವಲಯದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿದ್ದು,  ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸೂಚಿಸಿದೆ.

ಏನಿರುತ್ತೆ?:

  • ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ
  • ಅಗತ್ಯ ಸರ್ಕಾರಿ ಇಲಾಖೆ
  • ಕಟ್ಟಡ ನಿರ್ಮಾಣ,ರಸ್ತೆ ಕಾಮಗಾರಿಗೆ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರ
  •  ಸ್ವ ಉದ್ಯೋಗ ,ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್
  •  ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟ, ತುರ್ತು ಅಗತ್ಯ ಸೇವೆ
  • ಕಾರಿನಲ್ಲಿ  ಕೇವಲ ಇಬ್ಬರಿಗೆ ಅವಕಾಶ
  • ಆನ್‍ಲೈನ್‍ನಲ್ಲಿ ಸೇವೆ 

ಏನಿಲ್ಲ?:

  • ಮೆಟ್ರೋ, ರೈಲು, ಬೈಕ್ ಸಂಚಾರ
  •  ಐಟಿ-ಬಿಟಿ ಕಂಪನಿ
  •  ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಮೇ.3 ವರೆಗೆ ಇರಲ್ಲ
  • ಅಂತರ ಜಿಲ್ಲೆ ಸಂಚಾರ ಇರುವುದಿಲ್ಲ

ಮೇ. 3 ವರೆಗೆ ಮದ್ಯ ಸಿಗಲ್ಲ

ಇನ್ನು ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಮೇ 3ರವರೆಗೂ ಮದ್ಯ ಮಾರಾಟ  ಇರುವುದಿಲ್ಲ. ಹೋಟೆಲ್, ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ. ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top