Connect with us

Dvgsuddi Kannada | online news portal | Kannada news online

ಪಾದ ಪೂಜೆಗೆ ಬಂದ ಯುವತಿ ಜೊತೆ ಪರಾರಿಯಾಗಿದ್ದ ಸ್ವಾಮೀಜಿ ಪೊಲೀಸರ ಬಲೆಗೆ

ಪ್ರಮುಖ ಸುದ್ದಿ

ಪಾದ ಪೂಜೆಗೆ ಬಂದ ಯುವತಿ ಜೊತೆ ಪರಾರಿಯಾಗಿದ್ದ ಸ್ವಾಮೀಜಿ ಪೊಲೀಸರ ಬಲೆಗೆ

ಡಿವಿಜಿ ಸುದ್ದಿ, ಕೋಲಾರತಾಲ್ಲೂಕಿನ ಹೊಳಲಿ ಗ್ರಾಮದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಪೊಲೀಸರು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ತಾಲ್ಲೂಕಿನ ಹೊಳಲಿ ಗ್ರಾಮದ ಪಾದ ಪೂಜೆಗೆ ಬಂದಿದ್ದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ, ದತ್ತಾತ್ರೇಯ ಅವಧೂತ ಸ್ವಾಮೀಜಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಪತ್ತೆಯಾಗಿದ್ದೇನೆ. ಪೊಲೀಸರು ಬಂಧಿಸಿ ಗುರುವಾರ ಬೆಳಿಗ್ಗೆ ನಗರಕ್ಕೆ ಕರೆತಂದು ಯುವತಿ ಮತ್ತು ಸ್ವಾಮೀಜಿಯನ್ನು ಪ್ರತ್ಯೇಕ ಠಾಣೆಗಳಲ್ಲಿ ಇಡೀ ದಿನ ವಿಚಾರಣೆ ನಡೆಸಿದ್ದಾರೆ.

ಪಾದ ಪೂಜೆಗಾಗಿ ಭೀಮಲಿಂಗೇಶ್ವರ ದೇವಾಲಯದ ಮಠಕ್ಕೆ ಹೋಗುತ್ತಿದ್ದ ನನ್ನನ್ನು ಸ್ವಾಮೀಜಿಯು ಪ್ರೀತಿಸುವುದಾಗಿ ನಂಬಿಸಿ ಮೋಡಿಯ ಮಾತನಾಡಿ ಫೆ.27ರಂದು ಜತೆಯಲ್ಲಿ ಕರೆದೊಯ್ದರು. ಸ್ವಾಮೀಜಿ ನನ್ನನ್ನು ಮದುವೆಯಾಗಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಯುವತಿಯ ಮನವೊಲಿಸಿ ಪೋಷಕರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಮೂಲ ಹೆಸರು ರವೀಂದ್ರ. ಆತ ಬೆಂಗಳೂರಿನ ಕೆ.ಆರ್‌.ಪುರದಲ್ಲಿ ವಿಧವೆಯನ್ನು ಮದುವೆಯಾಗಿದ್ದಾನೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ  ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಮಹಾ ಶಿವರಾತ್ರಿ ಪ್ರಯುಕ್ತ ಹೊಳಲಿ ಗ್ರಾಮದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವ ಹಾಗೂ ಗಿರಿಜೋತ್ಸವಕ್ಕೆ ಸಂಗ್ರಹಿಸಿದ್ದ 32 ಲಕ್ಷ ದೇಣಿಗೆ ಹಣವನ್ನು ರವೀಂದ್ರ ದುರ್ಬಳಕೆ ಮಾಡಿಕೊಂಡ  ಆರೋಪ ಕೇಳಿ ಬಂದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top