ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಜೀವನ ತುಂಬಾ ಕಷ್ಟಕರವಾಗಿದೆ. ಇದನ್ನು ಮನಗೊಂಡ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶಿವಗಂಗಾ ಶ್ರೀನಿವಾಸ್ ಅವರು ವೈಯಕ್ತಿಕವಾಗಿ 27ನೇ ವಾರ್ಡ್ ನ ಬಡಕುಟುಂಬಗಳಿಗೆ 1 ಸಾವಿರ ದಿನಬಳಕೆ ವಸ್ತುಗಳ ಆಹಾರ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ವಿತರಿಸಿದರು.
ಈ ಸಂದರ್ಭದಲ್ಲಿ ಜಯಪ್ರಕಾಶ ಗೌಡ, ರಂಗಸ್ವಾಮಿ, ನಾಗರಾಜ್ ಕಬ್ಬಡ್ಡಿ, ಶಿವಾನಂದ್ ಉಪಸ್ಥಿತರಿದ್ದರು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ ತಿಳಿಸಿದರು.



