Connect with us

Dvgsuddi Kannada | online news portal | Kannada news online

ನಿರಾಶ್ರಿತರಿಗೆ  ವಸತಿ ನಿಲಯ ತೆರೆಯಲು ಡಿಸಿಎಂ ಗೋವಿಂದ ಕಾರಜೋಳ  ಆದೇಶ

ಪ್ರಮುಖ ಸುದ್ದಿ

ನಿರಾಶ್ರಿತರಿಗೆ  ವಸತಿ ನಿಲಯ ತೆರೆಯಲು ಡಿಸಿಎಂ ಗೋವಿಂದ ಕಾರಜೋಳ  ಆದೇಶ

ಡಿವಿಜಿ ಸುದ್ದಿ, ಕಲಬುರಗಿ: ರಾಜ್ಯದಲ್ಲಿರುವ ನಿರಾಶ್ರಿತರಿಗೆ ಸಮಾಜ ಕಲ್ಯಾಣ ‌ಇಲಾಖೆಯ ವಸತಿ ನಿಲಯಗಳನ್ನು ಇಂದಿನಿಂದಲೇ ತೆರೆಯಬೇಕು ಎಂದು ಇಲಾಖೆ ಸಚಿವ ಹಾಗೂ ಡಿಸಿಎಂ ಗೋವಿಂದ ‌ಕಾರಜೋಳ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾಧಿಕಾರಿ ‌ಕಚೇರಿ ಸಭಾಂಗಣದಲ್ಲಿ ಕೊರೊನಾ ಸೋಂಕು ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ‌ಮಾತನಾಡಿದ ಅವರು,  ರಾಜ್ಯದ ವಸತಿ ನಿಲಯಗಳಲ್ಲಿ 14,800 ಕ್ವಿಂಟಲ್ ಅಕ್ಕಿ, 4,800 ಕ್ವಿಂಟಲ್ ರವೆ, ಇಡ್ಲಿ ರವೆ, ಎಣ್ಣೆ ಇದೆ. ಅವರಿಗೆ ಬೆಡ್ ಶೀಟ್, ಟವೆಲ್ ಖರೀದಿಸಿ ಎಂದು ಸೂಚನೆ ನೀಡಿದರು.

ಯಾವುದೇ ಕಾರಣಕ್ಕೂ ನಿರಾಶ್ರಿತರು ಊಟ ಮಾಡಿ ಹೊರಗಡೆ ಹೋಗುವಂತಿಲ್ಲ. ಅವರು ವಸತಿ ನಿಲಯದಲ್ಲೇ ಇರುವಂತೆ ‌ನೋಡಿಕೊಳ್ಳಬೇಕು ಎಂದು ಇಲಾಖೆ ಜಂಟಿ ನಿರ್ದೇಶಕ ಅಲ್ಲಾಬಕ್ಷ್ ಅವರಿಗೆ ಸೂಚಿಸಿದರು. ಕ್ಷೌರಿಕರ‌ ಅಂಗಡಿಗಳು ಬಂದ್ ಆಗಿರುವುದರಿಂದ ಸವಿತಾ ‌ಸಮಾಜದವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, 1,200 ಮೊತ್ತದ ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗೆ ಸೂಚಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top