Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಮಂಗಳವಾರ-ಜೂನ್-02,202 ರಾಶಿ ಭವಿಷ್ಯ

ನಿರ್ಜಲಾ ಏಕಾದಶಿ
ಸೂರ್ಯೋದಯ: 05:56, ಸೂರ್ಯಸ್ತ: 18:39
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ

ತಿಥಿ: ಏಕಾದಶೀ – 12:04 ವರೆಗೆ
ನಕ್ಷತ್ರ: ಚೈತ್ರ – 22:54 ವರೆಗೆ
ಯೋಗ: ವ್ಯತೀಪಾತ – 09:52 ವರೆಗೆ
ಕರಣ: ವಿಷ್ಟಿ – 12:04 ವರೆಗೆ ಬವ – 22:34 ವರೆಗೆ

ದುರ್ಮುಹೂರ್ತ: 08:28 – 09:19ದುರ್ಮುಹೂರ್ತ : 23:10 – 23:55

ರಾಹು ಕಾಲ: 15:00 – 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 17:04 – 18:32
ಅಭಿಜಿತ್ ಮುಹುರ್ತ: 11:52 – 12:43

“ಬುಧಾದಿತ್ಯ ಯೋಗ ” ಬಗ್ಗೆ ಮಾಹಿತಿ…

ನಿಮ್ಮ ಜನ್ಮ ಕುಂಡಲಿಯಲ್ಲಿ ರವಿ ಬುಧ ಗ್ರಹಗಳು ಒಂದೇ ರಾಶಿ ಮನೆಯಲ್ಲಿದ್ದರೆ ಇದನ್ನು “ಬುಧಾದಿತ್ಯ ಯೋಗ” ಅಥವಾ “ನಿಪುಣ ಯೋಗ” ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಈ “ಬುಧಾದಿತ್ಯ ಯೋಗ” ಉಳ್ಳವರು ತುಂಬಾ ಜಾಣರು ಕಷ್ಟದಲ್ಲಿದ್ದಾಗ ಎದುರಿಸಿ ಚಾಣಕ್ಷತನದಿಂದ ಪಾರಾಗಿ ಬರುವರು. ಧೈರ್ಯದಿಂದ ಎದುರಿಸಿ ಹೋರಾಡುವರು. ಇವರು ತುಂಬಾ ಮಾತನಾಡುವ ವಾಕ್ಚಾತುರ್ಯ ಹೊಂದಿರುತ್ತಾರೆ.

ಲಗ್ನ ಒಂದನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ಪ್ರತಿಷ್ಠೆಯ ಕುಟುಂಬ ಅಥವಾ ಸಮಾಜದಲ್ಲಿ ಪ್ರತಿಷ್ಠೆ ವ್ಯಕ್ತಿಯಾಗುತ್ತಾನೆ.

ಲಗ್ನದಿಂದ ಎರಡನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ತುಂಬಾ ಬುದ್ಧಿವಂತನು, ಉತ್ತಮ ಮಾತುಗಾರನು ,ಬೋಧನಾ ಪ್ರಿಯರು, ಸಾಹಿತಿಗಳ ಆಗುವರು.

ಲಗ್ನದಿಂದ ಮೂರನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ ಮೇಲಾಧಿಕಾರಿ ಆಗುವರು.

ಲಗ್ನದಿಂದ 4,5 ಸ್ಥಾನದಲ್ಲಿ ರವಿ ಬುಧ ಇದ್ದರೆ _ಉನ್ನತ ಪದವಿ ಪಡೆಯುತ್ತಾರೆ.

ಲಗ್ನದಿಂದ 6,7,8 ಸ್ಥಾನದಲ್ಲಿ ಬುದ್ಧ ರವಿ ಇದ್ದರೆ_” ಅದಿ ಯೋಗ” ಪ್ರಾಪ್ತಿ.ರಾಜಕೀಯ ಪ್ರವೇಶ ಸೇರಿ ಮಂತ್ರಿಯಾಗುತ್ತಾರೆ. ಸಕ್ರಿಯವಾಗಿ ರಾಜಕೀಯ ಕ್ಷೇತ್ರದಲ್ಲಿ ಭಾಗಿಯಾಗುತ್ತಾರೆ.

ಲಗ್ನದಿಂದ 9 ,10ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ_ ನ್ಯಾಯ, ನೀತಿ ,ಧರ್ಮ ಪಾಲನೆ ಪಾಲಿಸುವವರು.

ಲಗ್ನದಿಂದ 11ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ_ ಅತ್ಯಂತ ಶ್ರಮದಿಂದ ಅಪಾರ ಹಣ ಸಂಪಾದನೆ ಮಾಡುವರು. ಆಸ್ತಿ ಪಾಸ್ತಿ ಹೊಂದುವರು.

ಲಗ್ನದಿಂದ 12ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ _ವಿದೇಶ ಪ್ರವಾಸ ,ತಂತ್ರಜ್ಞಾನ ಯೋಗ ಪ್ರಾಪ್ತಿ.

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ – ಮನಸ್ಸಿನಲ್ಲಿ ಸದಾ ಜಿಗುಪ್ಸೆ .ಪ್ರೇತಬಾಧೆ. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಲು ಹೋಗಿ ಅಪಮಾನ ವಾಗುವ ಸಾಧ್ಯತೆ. ನಾರಾಯಣಬಲಿ ಮಾಡಿಕೊಳ್ಳಿ. ಆರೋಗ್ಯ ತೊಂದರೆ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ. ವಾಹನ ಸವಾರಿ ಜಾಗೃತಿಯಿಂದ ಚಲಾಯಿಸಿ. ನಿವೇಶನ ಕಟ್ಟುವ ಯೋಚನೆ. ನಾಗಶಾಂತಿ ಮಾಡಿಸಿ, ದೇವಿ ಆರಾಧನೆ ಮಾಡಿ.
ಸೋಮಶೇಖರ್B.Sc
Mob.93534 88403

ವೃಷಭ – ದೈವಾನುಕೂಲ. ನಿಮ್ಮ ನೇತೃತ್ವದಲ್ಲಿ ದೇವರ ಪ್ರತಿಷ್ಠಾಪನದ ಚಿಂತನೆ. ದೇವಸ್ಥಾನದ ಸಲಹಾ ಸಮಿತಿ ಸದಸ್ಯರಿಗೆ ಹಣಕಾಸಿನ ತೊಂದರೆ ಬರಲಿದೆ. ಹಣಕಾಸಿನಲ್ಲಿ ತೀವ್ರ ಸಂಕಟ. ಉದ್ಯೋಗದಲ್ಲಿ ತೊಂದರೆ. ಸಹೋದ್ಯೋಗಿಗಳಿಂದ ತೊಂದರೆ. ಲಾಭ ಶೂನ್ಯ. ಪ್ರೇಮಿಗಳ ವಿವಾಹದಲ್ಲಿ ದುರ್ಗಾರಾಧನೆ ಮಾಡಿ
ಸೋಮಶೇಖರ್B.Sc
Mob.93534 88403

ಮಿಥುನ– ಕಷ್ಟದ ದಿನ. ಹಣದ ದಾಹ ಹೆಚ್ಚಾಗುವುದು. ಆತ್ಮೀಯ ಸ್ನೇಹಿತನಿಂದ ಹಣದ ಸಹಾಯ ಸಿಗಲಿದೆ .ಮಾತಾ ಪಿತೃಕೋಪ.ದಾಂಪತ್ಯ ವಿರಸ. ಲೇವಾದೇವಿಯಿಂದ ತೊಂದರೆ. ಸಾಲಗಾರರಿಂದ ತುಂಬ ಕಿರುಕುಳ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಸೋಮಶೇಖರ್B.Sc
Mob.93534 88403

ಕರ್ಕಾಟಕ – ಶರೀರದಲ್ಲಿ ಉದರ ಎದೆ ಬಾಧೆ, ಚರ್ಮರೋಗ, ಕಷ್ಟದ ದಿನ ಅನುಭವಿಸುವಿರಿ, ತಮಗೆ ಸಹಾಯ ಯಾರಿಂದಲೂ ಸಿಗಲಾರದು. ಪ್ರೇಮಿಗಳ ಮಧ್ಯೆ ಮನಸ್ತಾಪ ಮೂಡುವುದು. ದೇವಿ ಆರಾಧನೆ ಮಾಡಿ
ಸೋಮಶೇಖರ್B.Sc
Mob.93534 88403

ಸಿಂಹ – ಸ್ನೇಹಿತರಿಂದ ತೊಂದರೆ. ಮಕ್ಕಳಿಂದ ಮನಸ್ತಾಪ ಜಗಳ. ಆಸ್ತಿ ವಿಚಾರದಲ್ಲಿ ಗಲಾಟೆ. ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವವರಿಗೆ ಮೇಲಿಂದ ಮೇಲೆ ವಾಹನ ರಿಪೇರಿಯಿಂದ ಧನವ್ಯಯ.ಶನಿ ಶಾಂತಿ ಮಾಡಿಸಿ
ಸೋಮಶೇಖರ್B.Sc
Mob.93534 88403

ಕನ್ಯಾ– ಆರೋಗ್ಯ ವೃದ್ಧಿ. ಯಾವುದೇ ಪ್ರಯತ್ನ ಮಾಡಿದರೂ ಸಫಲತೆ ಇಲ್ಲ. ಸಹೋದ್ಯೋಗಿಗಳಿಂದ ಕೆಲಸದಲ್ಲಿ ತೊಂದರೆ. ಉದ್ಯೋಗದ ನಿಮಿತ್ಯ ಬೇರೆ ಉದ್ಯೋಗದ ಸ್ಥಾನಪಲ್ಲಟ ಸದ್ಯಕ್ಕೆ ಬೇಡ. ವಿದೇಶ ಪ್ರವಾಸ ಅತಂತ್ರ. ಹಿತೈಷಿಗಳಿಂದ ಜಾಗ್ರತೆ ಇರಲಿ. ದುರ್ಗಾ ಉಪಾಸನೆ ಮಾಡಿ
ಸೋಮಶೇಖರ್B.Sc
Mob.93534 88403

ತುಲಾ – ಶುಭದಿನ, ಕೋಟಿ ದೋಷ ನಿವಾರಣೆ, ಜ್ಞಾನಬಲ ದಿಂದ ಶುಭಕಾಲ. ಜಮೀನು ಖರೀದಿ ಚಿಂತನೆ. ಹೊಸ ಮನೆ ಕಟ್ಟುವ ಯೋಚನೆ. ವ್ಯಾಪಾರಸ್ಥರಿಗೆ, ಚಿತ್ರರಂಗದವರಿಗೆ ಶುಭ, ನಾಲ್ಕು ಚಕ್ರದ ವಾಹನ ಖರೀದಿಯ ಚಿಂತನೆ. ಮಕ್ಕಳ ಮದುವೆ ಕಾರ್ಯ ವಿಳಂಬ. ಅನ್ನಪೂರ್ಣೆ ದರ್ಶನ ಮಾಡಿ
ಸೋಮಶೇಖರ್B.Sc
Mob.93534 88403

ವೃಶ್ಚಿಕ – ರಾಜಕಾರಣಿಗಳಿಗೆ ಶುಭ. ನಿಮ್ಮ ಅನುಯಾಯಿಗಳಿಂದ ಎಚ್ಚರಿಕೆಯಿಂದ ಇರಿ. ದೈವಾನುಕೂಲ, ಹಣಕಾಸಿನಲ್ಲಿ ಆತ್ಮೀಯರಿಂದ ನಿವಾರಣೆ. ದಿನಸಿ ಅಂಗಡಿ, ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಶ್ರೀಸೂಕ್ತ ಪಠಿಸಿ
ಸೋಮಶೇಖರ್B.Sc
Mob.93534 88403

ಧನಸ್ಸು – ಸಾಕಷ್ಟು ತೊಂದರೆಯುಂಟಾಗಬಹುದು. ಸ್ತ್ರೀಯರಿಂದ ತೊಂದರೆ. ಜಾಮೀನ್ ದಿಂದ ತೊಂದರೆ ಸಂಭವ. ಸಮಾಜದಲ್ಲಿ ಅಪವಾದದ ದಿನವಾಗಿರಲಿದೆ. ಮನೆಯಲ್ಲಿ ಪದೇಪದೇ ಅನಾಹುತಗಳು ಜರುಗುವವು. ಚಂಡಿಕಾ ಆರಾಧನೆ ಮಾಡಿ
ಸೋಮಶೇಖರ್B.Sc
Mob.93534 88403

ಮಕರ – ಹಾರ್ಡ್ವೇರ್ ,ದ್ರವ್ಯ, ಲೋಹ ಉದ್ಯಮದಾರರಿಗೆ ಲಾಭ. ವಿದ್ಯಾ ಕಲಿಸಿದ ಗುರು ನೆನಪು ಬರಲಿದೆ. ಹಳೆಯ ಸ್ನೇಹಿತರ ಮಿಲನ . ಇಂದು ನಿಮಗೆ ಧನ ಸಹಾಯ ಕೇಳಲು ಬರುವರು. ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುವ ಅವಕಾಶ ಬಂದಿದೆ. ವಿರೋಧಿಗಳ ಶರಣು ಸಮಯ ಬರುವುದು. ಲಾಭದ ದಿನ. ನಷ್ಟ ಪರಿಹಾರ.ದತ್ತಾತ್ರೇಯ ದರ್ಶನ
ಸೋಮಶೇಖರ್B.Sc
Mob.93534 88403

ಕುಂಭ – ಶತ್ರುವಿನ ಕಾಟ ಹೆಚ್ಚಾಗುವುದು. ಸೋದರಿಯಿಂದ ಮನೆಯಲ್ಲಿ ಅಶಾಂತಿ . ನಿಮ್ಮ ಜೇನುಗೂಡಿನಂತ ಕುಟುಂಬದಲ್ಲಿ ಸ್ತ್ರೀ-ಪುರುಷ ದಿಂದ ತೊಂದರೆ. ಸ್ತ್ರೀಯರಿಂದ ಅಪವಾದ, ಕಷ್ಟ,ನೋವನ್ನು ಅನುಭಸುತ್ತೀರಿ.ದೇವಿ ಆರಾಧನೆ ಮಾಡಿ
ಸೋಮಶೇಖರ್B.Sc
Mob.93534 88403

ಮೀನ – ವಿದೇಶ ಪ್ರಯಾಣ ಅತಂತ್ರ. ವ್ಯವಹಾರದಲ್ಲಿ ಉತ್ತಮ ದಿನ. ಸ್ನೇಹಿತರ ವರ್ಗದವರಿಂದ ಬಂಧು ವರ್ಗದಿಂದ ಹಣದ ಸಹಾಯ ಸಿಗಲಿದೆ. ದುರ್ಗಾರಾಧನೆ ಮಾಡಿ
ಸೋಮಶೇಖರ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top