Connect with us

Dvgsuddi Kannada | online news portal | Kannada news online

ಮೌಢ್ಯಾಚರಣೆ ನಿವಾರಣೆಗೆ ಮುರುಘಾ ಶ್ರೀ ಮಾಡಿದ ಕಾರ್ಯ ಏನು ಗೊತ್ತಾ..?

ದಾವಣಗೆರೆ

ಮೌಢ್ಯಾಚರಣೆ ನಿವಾರಣೆಗೆ ಮುರುಘಾ ಶ್ರೀ ಮಾಡಿದ ಕಾರ್ಯ ಏನು ಗೊತ್ತಾ..?

ಡಿವಿಜಿ ಸುದ್ದಿ, ದಾವಣಗೆರೆ: ಸದಾ ವೈಚಾರಿಕತೆ, ಮೌಢ್ಯ ನಿವಾರಣೆಯಲ್ಲಿ ಸಕ್ರಿಯರಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ದೇವದಾಸಿ ಮಹಿಳೆಯರ ಜೊತೆ ಮೌಢ್ಯಾಚರಣೆ ನಿವಾರಣೆ ಕುರಿತು ಸಂವಾದ ನಡೆಸಿದರು.

ನಗರದಲ್ಲಿ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವದಾಸಿ ಮಹಿಳೆಯರಿಗೆ ಸಾಂಕೇತಿಕವಾಗಿ ಐದು ಮಹಿಳೆಯ ಜಡ್ಡುಗಟ್ಟಿದ ಜಡೆ ಕತ್ತರಿಸುವ ಮೂಲಕ ಅರಿವು ಮೂಡಿಸಿದರು.

ನಂತರ ಮಾತನಾಡಿದ ಶ್ರೀಗಳು ಧರ್ಮ, ದೇವರ ಹೆಸರಲ್ಲಿ ನಡೆಯುವ ಎಲ್ಲಾ ಅಮಾನವೀಯ ಆಚರಣೆಯಿಂದ ಹೊರ ಬರಬೇಕು. ಎಲ್ಲ ಸಮುದಾಯವನ್ನು ಒಳಗೊಂಡಾಗ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ. ಅದಕ್ಕಾಗಿಯೇ ಬಸವಣ್ಣ ಸೊಳೆ ಸಂಕವ್ವ, ಹೆಂಡದ ಮಾರಯ್ಯರನ್ನು ಶರಣ, ಶರಣೆಯರನ್ನಾಗಿ ಪರಿವರ್ತಿಸುದ ಎಂದರು.

ದಾಸಿ ಅಂದರೆ ಗುಲಾಮ ಎಂದರ್ಥ. ಅದನ್ನು ಬಿಟ್ಟು ಅಕ್ಷರದ ಸಂಸ್ಕೃತಿ ಕಡೆ ದೇವ ದಾಸಿಯರು ಬರಬೇಕು. ಯಾವ ಕಾಯಕವೂ ನಿಕೃಷ್ಟವಲ್ಲ. ನೀವು ಅನಿವಾರ್ಯವಾಗಿ ಈ ದಾರಿ ಹಿಡಿದಿದ್ದೀರಿ ಈ ಅಮಾನವೀಯ ವೃತ್ತಿಯಿಂದ ಹೊರಬರಬೇಕು. ಇದಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಕರೆ ನೀಡಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top