Connect with us

Dvgsuddi Kannada | online news portal | Kannada news online

ರಾಷ್ಟ್ರಕವಿ  ಕುವೆಂಪು ಕುರಿತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂವಾದ

ದಾವಣಗೆರೆ

ರಾಷ್ಟ್ರಕವಿ  ಕುವೆಂಪು ಕುರಿತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂವಾದ

ಡಿವಿಜಿ ಸುದ್ದಿ, ದಾವಣಗೆರೆ:  ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತು,  ಕಾಲೇಜು ಸಹಯೋಗದೊಂದಿಗೆ ರಾಷ್ಟ್ರ ಕವಿ ಕುವೆಂಪು ಅವರ  ವಿಶ್ವ ಮಾನವ ದಿನಾಚರಣೆ ನಿಮಿತ್ತ  ‘ನನ್ನ ಅರಿವಿನಲ್ಲಿ ಕುವೆಂಪು’ ಶೀರ್ಷಿಕೆ ಅಡಿಯಲ್ಲಿ ಜ. 8 ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ  ಪ್ರಾಂಶುಪಾಲರಾದ ಡಾ. ದಾದಾಪೀರ್ ನವಿಲೇಹಾಳ್  ನೆರವೇರಿಸಲಿದ್ದು, ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಬಿ. ವಾಮದೇವಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸೀತಮ್ಮ  ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ  ಅರುಣಕುಮಾರಿ ಬಿರಾದಾರ್ ಇವರ ನೇತೃತ್ವದಲ್ಲಿ  ಸಂವಾದ ನಡೆಯಲಿದೆ. ವಿದ್ಯಾರ್ಥಿನಿಯಾರದ   ಮಾಳವಿಕ ಎಂ.ಡಿ, ಕಿರಣ ಡಿ.ಬಿ,  ಪ್ರಕೃತಿ ಜಿ.ಎನ್,  ನಾಗವೇಣಿ ಎಂ.ಕೆ,  ಸಂಗೀತಾ  ಆರ್,  ಕವನ ಜಿ.ಎಸ್,  ಭೂಮಿಕ ಎಸ್.ಬಿ, ಛಾಯಾ ಎಂ, ಪ್ರೇಕ್ಷಿತಾ ಕೆ.ಓ,   ಕಾವ್ಯ ಎಸ್.ಎ ಭಾಗವಹಿಸಲಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜಿನ  ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯಶ್ರೀ ಜಿ. ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ದತ್ತಿ  ದಾನಿಗಳಾದ ವಿಶ್ರಾಂತ ಜಿಲ್ಲಾಧಿಕಾರಿ ಕೆ. ಅಮರನಾರಾಯಣ , ಸುಲೋಚನಮ್ಮ ಮಾಗನೂರು ರಾಜಶೇಖರಗೌಡ್ರು ಉಪಸ್ಥಿತರಿರುವರು.

ಕಾರ್ಯಕ್ರಮವನ್ನು  ಸಾಲಿಗ್ರಾಮ ಗಣೇಶ್ ಶೆಣೈ,  ಮಂಜುನಾಥ ಇ.ಎಂ., ಹೆಚ್.ಕೆ. ಪಾಲಾಕ್ಷಪ್ಪ ಗೋಪನಾಳ್, ಕೆ. ರಾಘವೇಂದ್ರನಾಯರಿ, ಶ್ರೀಮತಿ ಎಸ್.ಎಂ. ಮಲ್ಲಮ್ಮ,  ಬಿ.ಎಂ. ಮುರಿಗೆಯ್ಯ ಕುರ್ಕಿ, ಎಂ. ಷಡಾಕ್ಷರಪ್ಪ ಬೇತೂರು, ಬಿ.ಎಸ್. ಜಗದೀಶ್ ಸಂಯೋಜಿಸಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top