Connect with us

Dvgsuddi Kannada | online news portal | Kannada news online

ಕರವೇ ನಾರಾಯಣಗೌಡ ಹುಟ್ಟುಹಬ್ಬ ಹಿನ್ನೆಲೆ ರಕ್ತದಾನ ಶಿಬಿರ

ದಾವಣಗೆರೆ

ಕರವೇ ನಾರಾಯಣಗೌಡ ಹುಟ್ಟುಹಬ್ಬ ಹಿನ್ನೆಲೆ ರಕ್ತದಾನ ಶಿಬಿರ

ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕ ರಕ್ಷಣಾ  ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ನಗರದ ದಾವಣಗೆರೆ ರಕ್ತ ಬಂಡಾರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.  ರಾಮೇಗೌಡ ರಕ್ತದಾನ ಮಾಡುವುದರ ಮುಖಾಂತರ ಚಾಲನೆ ನೀಡಿದರು.

ರಕ್ತದಾನಿಗಳಿಗೆ ಸಸಿಗಳನ್ನು ವಿತರಣೆ ಮಾಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ,   ರಕ್ತದಾನ ಮಾಡುವುದು ಬಹಳ ಶ್ರೇಷ್ಠ ದಾನ. ಅಂತ ಕಾರ್ಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕೊರೊನಾ  ಸಂದರ್ಭದಲ್ಲೂ ಸಹ ರಕ್ತದಾನ ಮಾಡಿ ಕೆಲವು ಜೀವಗಳಿಗೆ ಜೀವ ದಾನಮಾಡುವ ಮಾಡುವಂತ ಕೆಲಸ ಮಾಡುತ್ತಿರುವುದು  ಶ್ಲಾಘನೀಯ  ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ನಗರ ವೃತ್ತ ನಿರೀಕ್ಷಕ ತಮ್ಮಣ್ಣನವರ ದಾವಣಗೆರೆ ರಕ್ತ ಬಂಡಾರ ಮುಖ್ಯಸ್ಥ ಎಚ್ ಬಿ ಕುಮಾರ್ , ಗಿರೀಶ್ ಕುಮಾರ್ , ಕೆಜಿ ಬಸವರಾಜ್,  ಸಂತೋಷ್,  ಪ್ರದೀಪ್ , ವಿನಯ್,  ಸಿದ್ದೇಶ್ , ಮಂಜುನಾಥ್,  ಲೋಕೇಶ್, ಮಲ್ಲಿಕಾರ್ಜುನ್,  ಪರಮೇಶ್, ಸುರೇಶ್, ಕರಿ ಬಸವರಾಜ್, ರಾಘವೇಂದ್ರ , ಧೀರೇಂದ್ರ,  ರವಿಕುಮಾರ್ , ಗೋಪಾಲ್ ದೇವರಮನೆ ,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ , ಕಾರ್ಯದರ್ಶಿ ಮಂಜುಳಮ್ಮ,  ವೈದ್ಯಾಧಿಕಾರಿ ಡಾಕ್ಟರ್ ವಿಶ್ವನಾಥ್, ದಾವಣಗೆರೆ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ  ರೇವಣ ಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top