ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಐಎಸ್ ಐ ಹೆಲ್ಮೆಟ್ ಹಾಕದವರಿಗೆ ದಂಡ ವಿಧಿಸದಂತೆ ಬಿಜೆಪಿ ಪಾಲಿಕೆ ಸದಸ್ಯರು ಎಸ್ ಪಿ ಹನುಮಂತರಾಯ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿ ಸ್ಪಷ್ಟನೆ ನೀಡಿದ ಎಸ್ ಪಿ ಹನುಮಂತರಾಯ, ಇಲಾಖೆ ವತಿಯಿಂದ ಯಾವುದೇ ರೀತಿಯಾದ ಐ ಎಸ್ ಐ ಗುರುತಿನ ಹೆಲ್ಮೆಟ್ ಕಕಡ್ಡಾಯಗೊಳಿಸಿಲ್ಲ. ಹಾಗೆಯೇ ಜಿಲ್ಲಾ ಪೊಲೀಸ್ ಯಾವುದೇ ದಂಡವನ್ನು ವಿಧಿಸಿರುವುದಿಲ್ಲ ಎಂದರು.

ಕೇಂದ್ರ ಸರ್ಕಾರದ ಅಧಿಸುಚನೆಯಂತೆ ಜನರ ಸುರಕ್ಷಿತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸ ಬೇಕು. ಅದು ಕೂಡ ಸೂಕ್ತ ರೀತಿಯಾಗಿ ಧರಿಸಬೇಕು. ಸಾರ್ವಜನಿಕ ಯಾವುದೇ ರೀತಿ ಆಂತಕಕ್ಕೆ ಒಳಗಾಗದೆ ಸುರಕ್ಷತಾ ಮಾರ್ಗಗಳನ್ನು ಅನುಸರಿಸಿ ವಾಹನಚಲಾಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿಉಪ ಮಹಾಪೌರರಾದ ,ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿಯ ಅದ್ಯಕ್ಷರಾದ ಪ್ರಸನ್ನ ಕುಮಾರ್, ಎಲ್.ಡಿ.ಗೋಣೇಪ್ಪ, ಸೋಗಿ ಶಾಂತಕುಮಾರ್, ರೇಣುಕಾ ಶ್ರೀನಿವಾಸ್, ವೀಣಾ ನಂಜಪ್ಪ,ರೇಖಾ ಸುರೇಶ್, ಗೀತಾ ದಿಳ್ಳೆಪ್ಪ, ಜಯಮ್ಮ ಎಚ್.ಸಿ.ಶಿವನಗೌಡ ಟಿ.ಪಾಟೀಲ, ತರಕಾರಿ ಶಿವು ,ಪಿ.ಎಸ್.ಬಸವರಾಜ್ ಉಪಸ್ಥಿತರಿದ್ದರು



