Connect with us

Dvgsuddi Kannada | online news portal | Kannada news online

ಸಾಲಮನ್ನಾಕ್ಕೆ ಸೂಕ್ತ ದಾಖಲಾತಿ ಸಲ್ಲಿಸಲು ಮಾ.25 ಕೊನೆ ದಿನ

ಪ್ರಮುಖ ಸುದ್ದಿ

ಸಾಲಮನ್ನಾಕ್ಕೆ ಸೂಕ್ತ ದಾಖಲಾತಿ ಸಲ್ಲಿಸಲು ಮಾ.25 ಕೊನೆ ದಿನ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಸಾಲವಾಗಿ ಗರಿಷ್ಠ 1 ಲಕ್ಷದ ವರೆಗೆ ಸಾಲ ಪಡೆದವರು , ಸಾಲ ಮನ್ನಾಕ್ಕೆ ಸೂಕ್ತ ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನವಾಗಿದೆ.

ದಿನಾಂಕ: 10.07.2018 ರೊಳಗೆ ಗರಿಷ್ಟ ರೂ. 1.00 ಲಕ್ಷ ಸಾಲ ಮನ್ನಾ ಅರ್ಹ ಫಲಾನುಭವುಗಳು ಆಧಾರ, ಪಡಿತರ ಚೀಟಿ ಮತ್ತು ಭೂಮಿ ದಾಖಲಾತಿಗಳನ್ನು ಹಾಗೂ ಸ್ವಯಂ ದೃಡೀಕರಣ ಪತ್ರವನ್ನು ಇದುವರೆಗೆ ಸಲ್ಲಿಸದೇ ಇರುವಂತಹ ರೈತರು ಮಾರ್ಚ್ 25 ರೊಳಗಾಗಿ ದಾಖಲೆಗಳನ್ನು ಸಂಬಂಧಿಸಿದ ಸಂಘ, ಬ್ಯಾಂಕುಗಳಿಗೆ ಸಲ್ಲಿಸಲು ಅಂತಿಮ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲರಾದಲ್ಲಿ ಅಂತಹ ರೈತರು ಸಾಲಮನ್ನಾ ಸೌಲಭ್ಯ ಪಡೆಯಲು ಅನರ್ಹತೆ ಹೊಂದಿರುತ್ತಾರೆ.

ಪಡಿತರ ಚೀಟಿಯನ್ನು ರೈತರು ಹೊಂದಿಲ್ಲದೇ ಇದ್ದಲ್ಲಿ ಅಥವಾ ಹೊಂದಿದ್ದರೂ ಸಹ ಚಾಲನೆಯಲ್ಲಿ ಇಲ್ಲದೆ ಇದ್ದಲ್ಲಿ ಅಂತಹ ರೈತರು ಮಾ. 25 ರೊಳಗಾಗಿ ಹೊಸ ಪಡಿಡತರ ಚೀಟಿಗಳನ್ನು ಪಡೆದು ಸಲ್ಲಿಸಬೇಕು. ಇದು ಸಾಲ ಮನ್ನಾ ಪಡೆಯಲು ಅಂತಿಮ ಅವಕಾಶವೆಂದು ದಾವಣಗೆರೆ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top