Connect with us

Dvgsuddi Kannada | online news portal | Kannada news online

ರೆಡ್ ಝೋನ್ ಗೆ ಎಂಟ್ರಿ ಕೊಟ್ಟ ಬೆಣ್ಣೆ ನಗರಿ ದಾವಣಗೆರೆ

ಪ್ರಮುಖ ಸುದ್ದಿ

ರೆಡ್ ಝೋನ್ ಗೆ ಎಂಟ್ರಿ ಕೊಟ್ಟ ಬೆಣ್ಣೆ ನಗರಿ ದಾವಣಗೆರೆ

 ಡಿವಿಜಿ  ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ನಿನ್ನೆ ಒಂದೇ ದಿನ 21 ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಕಳೆದ ವಾರ ಗ್ರೀನ್ ಜೋನ್ ನಲ್ಲಿದ್ದ ದಾವಣಗೆರೆ ಇದೀಗ ರೆಡ್ ಜೋನ್ ಗೆ ಬಂದಿದೆ.

ಈ ಬಗ್ಗೆ ಸರ್ಕಾರ ಇಂದು ನೂತನ ಪಟ್ಟಿ ಪ್ರಕಟಿಸಿದ್ದು, ದಾವಣಗೆರೆ ಜಿಲ್ಲೆ ರೆಡ್ ಜೋನ್ ಗೆ ಬಂದಿದೆ. 28 ದಿನದಿಂದ ಯಾವುದೇ ಪ್ರಕರಣ ಪತ್ತೆಯಾದ ಹಿನ್ನೆಲೆ ಏ. 28 ರಂದು ದಾವಣಗೆರೆ ಗ್ರೀನ್ ಜೋನ್ ಗೆ ಬಂದಿತ್ತು. ಆದರೆ, ಗ್ರೀನ್ ಜೋನ್ ಗೆ ಬಂದ ಮರು ದಿನವೇ ಅಂದರೆ, ಏ.29 ರಂದು ನಗರ ಭಾಷಾನಗರ ಮತ್ತು ಜಾಲಿ ನಗರದಲ್ಲಿ ಎರಡು ಕೇಸ್ ಗಳು ಪತ್ತೆಯಾಗಿದ್ದವು. ಈ ಎರಡು ಪ್ರಕರಣ ನಂತರ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು.

ಇದಾದ ನಂತರ ಮೇ.1 ರಂದು ಜಾಲಿನಗರದ ವೃದ್ಧ ಸಾವನ್ನಪ್ಪಿದ್ದ, ವೃದ್ಧನ ಕುಟುಂಬಕ್ಕ ಸೇರಿದ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಲ್ಲದೆ ನರ್ಸ್ ಮಗನಿಗೂ  ಸೋಂಕು ತಗುಲಿತ್ತು.ಇದಾದ ಬಳಿಕ ನಿನ್ನೆ 21 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯಲ್ಲಿ ಭಾರೀ ಹೊಡೆತ ನೀಡಿತ್ತು. ಹೀಗಾಗಿ ಇಂದು ದಾವಣಗೆರೆ ರೆಡ್ ಜೋನ್ ಗೆ ಬಂದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top