ಡಿವಿಜಿ ಸುದ್ದಿ, ದಾವಣಗೆರೆ: ಆಶಾ ಕಾರ್ಯಕರ್ತರು, ಆಯುಷ್ ವೈದ್ಯರ ಮುಷ್ಕರ ನಂತರ ಇದೀಗ ಕೊವಿಡ್ ಲ್ಯಾಬ್ ಗಳಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್ ಗಳು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಎನ್ ಆರ್ ಹೆಚ್ ಎಂ ಸೇರಿದಂತೆ ವಿವಿಧ ಸ್ಕೀಮ್ ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಒಂದು ಸಾವಿರಕ್ಕು ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಕೋವಿಡ್ ವಾರ್ಡ್ ಹಾಗು ಲ್ಯಾಬ್ ಗಳಲ್ಲಿ ಕೆಲಸ ಮಾಡುತ್ತಿದ್ದು, ಸ್ವಾಬ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷದಿಂದ ಕೆಲಸ ಮಾಡುತ್ತಿದ್ದು,12 ಸಾವಿರ ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ.
ಇದೀಗ ಹೊಸದಾಗಿ ಅಧಿಸೂಚನೆ ಮಾಡಿ ಹುದ್ದೆ ಭರ್ತಿಗೆ ಮುಂದಾಗಿರುವ ಇಲಾಖೆ, ಅವರಿಗೆ 20-25 ಸಾವಿರ ವೇತನ ನೀಡುತ್ತಿದೆ. ನಾವೆಲ್ಲಾ ಐದು ಆರು ವರ್ಷ ಅನುಭವ ಹೊಂದಿದ್ದರು ಕಡಿಮೆ ವೇತನಕ್ಕಾಗಿ ದುಡಿಯಬೇಕಾಗಿದೆ. ನಮಗೆ 4 ತಿಂಗಳಿನಿಂದ ಒಂದು ರಜೆಯನ್ನು ನೀಡಿಲ್ಲ. ಸೂಕ್ತ ಪರಿಕರಗಳಿಲ್ಲದೇ ಕೆಲಸ ಮಾಡುತ್ತಿದ್ದು ಕೂಡಲೇ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದ್ದಾರೆ.



