Connect with us

Dvgsuddi Kannada | online news portal | Kannada news online

ದೇವರ ಹೆಸರಲ್ಲಿ ಬಾರ್ ನಡೆಸೋರಿಗೆ ಶಾಕ್..!

Home

ದೇವರ ಹೆಸರಲ್ಲಿ ಬಾರ್ ನಡೆಸೋರಿಗೆ ಶಾಕ್..!

ಡಿವಿಜಿ ಸುದ್ದು, ಹೊಸಪೇಟೆ: ದೇವರ ಹೆಸರಲ್ಲಿ ಬಾರ್ ನಡೆಸೋ ಬಾರ್ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಹೌದು, ದೇವರ ಹೆಸರಲ್ಲಿ ಯಾವುದೇ ಕಾರ್ಯ ಮಾಡಿದ್ರೆ ಚನ್ನಾಗಿರುತ್ತೆ ಅನ್ನೋ ನಂಬಿಕೆಯಲ್ಲಿ ಜನರು  ದೇವರ ಹೆಸರಲ್ಲಿ ಬಾರ್ ತೆರೆದು  ಒಳ್ಳೆ ಗಿರಾಕಿ ಕುದುರಿಸಿಕೊಂಡಿದ್ದರು. ಇಂತಹ ಮಾಲೀಕರು ಇನ್ಮುಂದೆ ಹೆಸರು ಚೇಂಜ್ ಮಾಡಿಕೊಳ್ಳಬೇಕಿದೆ…

ಸರ್ಕಾರದ ಕಣ್ಣು ಇದೀಗ ದೇವರ ಹೆಸರಲ್ಲಿರೋ ಬಾರ್ ಮೇಲೆ ಬಿದಿದ್ದು, ಇನ್ಮುಂದೆ ದೇವರ ಹೆಸರು ಬಳಸಿಕೊಂಡು ಬಾರ್ ನಡೆಸಂಗಿಲ್ಲ ಅನ್ನೋ ರೂಲ್ಸ್ ಜಾರಿಗೆ ತರಲು ತಯಾರಿ ನಡೆಸಿದೆ.  ಈ ಬಗ್ಗೆ ಶೀಘ್ರವೇ  ಸುತ್ತೋಲೆ ಹೊರಡಿಸಲಾಗವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವೆಂಕಟೇಶ್ವರ ಬಾರ್, ಮಂಜನಾಥೇಶ್ವರ ಬಾರ್, ಗಣೇಶ್ ಬಾರ್ ..ಹೀಗೆ ವಿವಿಧ ದೇವರ ಹೆಸರಲ್ಲಿ ಬಾರ್ ನಡೆಸುತ್ತಿರುವ ಬಾರ್ ಗಳಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಈ ಹೆಸರುಗಳನ್ನು ಕೂಡಲೇ ತಗೆದು ಹಾಕುವಂತೆ  ಕೆಲವರು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಬಕಾರಿ ಹಾಗೂ ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಸುತ್ತೋಲೆ ಹೊರಡಿಸಲಾಗುವುದು .ನೀರಾ ಇಳಿಸಲು ಕೆಲವರು ಮನವಿ ಮಾಡಿಕೊಂಡಿದ್ದಾರೆ. ರೈತರಿಗೆ, ಬಡವರಿಗೆ ಅನುಕೂಲವಾಗುವಂತೆ ನೀರಾಕ್ಕೆ ಅನುಮತಿ ಕೊಡುವುದರ ಬಗ್ಗೆ ಪರಿಶೀಲಿಸಿ, ಸೂಕ್ತ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

ದಾವಣಗೆರೆ

Advertisement
Advertisement Enter ad code here

Title

To Top