ನವದೆಹಲಿ: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ತಗಲಿರುವ 2 ಪ್ರಕರಣಗಳು ಪತ್ತೆಯಾಗಿದ್ದು, ರೋಗಿಗಳ ಸಂಖ್ಯೆ 10ಕ್ಕೇರಿದೆ. ದೇಶದಲ್ಲಿ ಪ್ರಕರಣ ಸಂಖ್ಯೆ 127 ಏರಿಕೆಯಾಗಿದೆ.
ಕೊರೊನಾ ವೈರಸ್ ನಿಂದ ಕಲಬುರ್ಗಿಯಲ್ಲಿ 76ರ ಹರೆಯ ವೃದ್ಧ ಸಾವಿಗೀಡಾಗಿದ್ದರು. ಆತನಿಗೆ ಚಿಕಿತ್ಸೆ ನೀಡಿದ 63ರ ಹರೆಯದ ವೈದ್ಯರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ವೈದ್ಯ ಮತ್ತು ಅವರ ಕುಟುಂಬವನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದ್ದು, ಐಸೋಲೇಷನ್ ವಾರ್ಡ್ಗೆ ಕಳುಹಿಸಲಾಗುವುದು ಎಂದು ಕಲಬುರ್ಗಿ ಉಪ ಆಯುಕ್ತ ಶರತ್.ಬಿ ಹೇಳಿದ್ದಾರೆ.
Sharat B, Deputy Commissioner, Kalaburagi: A 63-year-old doctor who treated the 76-yr-old man who died due to #Coronavirus, has tested positive. He along with his family has been kept in quarantine at his home. He will be sent to isolation ward today. #Karnataka
— ANI (@ANI) March 17, 2020



