Connect with us

Dvgsuddi Kannada | online news portal | Kannada news online

ಬೇರೆ ಪಕ್ಷದ ಪ್ರಧಾನಿ ಆಗಿದ್ದರೆ, ಪೆಟ್ರೋಲ್ ಬೆಲೆ 30 ರೂಪಾಯಿ ಆಗ್ತಿತ್ತಾ ..?: ಸಚಿವ ಆನಂದ್ ಸಿಂಗ್

ಪ್ರಮುಖ ಸುದ್ದಿ

ಬೇರೆ ಪಕ್ಷದ ಪ್ರಧಾನಿ ಆಗಿದ್ದರೆ, ಪೆಟ್ರೋಲ್ ಬೆಲೆ 30 ರೂಪಾಯಿ ಆಗ್ತಿತ್ತಾ ..?: ಸಚಿವ ಆನಂದ್ ಸಿಂಗ್

ಹೊಸಪೇಟೆ: ದೇಶದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ತೈಲ ಬೆಲೆ ಹೆಚ್ಚಿರುತ್ತಿತ್ತು. ಬೇರೆ ಪಕ್ಷದ ಪ್ರಧಾನಿ ಆಗಿದ್ದರೆ,  ಪೆಟ್ರೋಲ್‌ ದರ 30 ಆಗುತ್ತಿರಲಿಲ್ಲ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದಲೇ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗಿದೆ ಎನ್ನುವುದು ವಾದ  ಸರಿಯಲ್ಲ. ಇಂಟರ್ ನ್ಯಾಷನಲ್  ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ದೇಶದಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಮೋದಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ ಎನ್ನುವ  ವಿರೋಧ ಪಕ್ಷಗಳ ಆರೋಪಿಸುತ್ತಿರುವುದು ಹುರುಳಿಲ್ಲ ಎಂದರು.

ರಾಜ್ಯ ಸರ್ಕಾರ ತೆರಿಗೆ ಕಡಿತಕ್ಕೆ ಮುಂದಾಗಬಹುದು ಎಂಬ ಚರ್ಚೆ ಇದೆ. ಬೆಲೆ ಏರಿಕೆಯಿಂದ ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ ಎಂಬುದು ಸುಳ್ಳು. ಸಿಂದಗಿಯಲ್ಲಿ ಬಿಜೆಪಿ ಗೆದ್ದಿಲ್ಲವೇ? ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸ್ಥಳೀಯ ವಿಷಯ ನೋಡಿಕೊಂಡು ಜನ ಮತ ಚಲಾಯಿಸುತ್ತಾರೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಗೆ ದಿಕ್ಸೂಚಿಯಲ್ಲ ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top