Connect with us

Dvgsuddi Kannada | online news portal | Kannada news online

ಸಂತೋಷ ಆತ್ಮಹತ್ಯೆ ಯತ್ನದ ಕುರಿತು ಡಿಕೆಶಿ ಹೇಳಿಕೆ ಮೂರ್ಖತನದ್ದು: ಸಚಿವ ಕೆ.ಎಸ್. ಈಶ್ವರಪ್ಪ

ಜಿಲ್ಲಾ ಸುದ್ದಿ

ಸಂತೋಷ ಆತ್ಮಹತ್ಯೆ ಯತ್ನದ ಕುರಿತು ಡಿಕೆಶಿ ಹೇಳಿಕೆ ಮೂರ್ಖತನದ್ದು: ಸಚಿವ ಕೆ.ಎಸ್. ಈಶ್ವರಪ್ಪ

ಬೆಳಗಾವಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಕುರಿತು  ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮೂರ್ಖತನದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಆ ವಿಡಿಯೋ ಕಾರಣ: ಡಿಕೆಶಿ ಹೇಳಿಕೆ

ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಈ ರೀತಿ ಹೇಳಿಕೆ ಕೊಡಲು ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು. ಆ ವಿಡಿಯೋ ಲೀಕ್ ಆಗಿದೆ ಅಂದರೆ ಈ ವಿಡಿಯೋ ಡಿಕೆಶಿ ಹತ್ತಿರ ಇರಬೇಕು. ವಿಡಿಯೋ ಇದೆ ಅಂತಾ ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುವದು ಸರಿಯಲ್ಲ. ವಿಡಿಯೋ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.

ಕಾಂಗ್ರೆಸ್  ಈಗಾಗಲೇ ನೆಲ ಕಚ್ಚಿ ಹೋಗಿದ್ದು,  ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್‌ಎ ಯಾರು, ಎಂಎಲ್‌ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವದು ಖಂಡಿಸುತ್ತೇನೆ ಎಂದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜಿಲ್ಲಾ ಸುದ್ದಿ

To Top
(adsbygoogle = window.adsbygoogle || []).push({});