ಹರಿಹರದಲ್ಲಿ ನಡೆಯುವ ಪಂಚಮಸಾಲಿ ಪಾದಯಾತ್ರೆಯ ಸಮಾವೇಶದಲ್ಲಿ ವಚನಾನಂದ ಶ್ರೀ ಭಾಗವಹಿಸಲ್ಲ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಹರಿಹರ: 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಂಚಲಕ್ಷ ಪಾದಯಾತ್ರೆ ಜ.28 ರಂದು ಹರಿಹರ ನಗರದ ಗಾಂಧಿ  ಮೈದಾನದಲ್ಲಿ ನಡೆಯುವ ಜನಜಾಗೃತಿಸ ಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀಗಳು ದೂರ ಉಳಿಯಲಿದ್ದಾರೆ ಎಂದು ಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಹರಿಹರ ಪೀಠದ ಹಾಗೂ ಸ್ವಾಮೀಜಿಯವರ ಸಂಪೂರ್ಣ ಬೆಂಬಲವಿದ್ದರೂ ಸ್ಥಳೀಯ ಸಮಾವೇಶದಲ್ಲಿ ಭಾಗವಹಿಸಲ್ಲ. ಹರಪನಹಳ್ಳಿಯಲ್ಲಿ ಕೂಡಲ ಸಂಗಮ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಜಾಗೃತಿ ಸಮಾವೇಶದಲ್ಲೂ ವಚನಾನಂದ ಶ್ರೀಗಳು ಭಾಗವಹಿಸುತ್ತಿದ್ದಾರೆ. ನಂತರ ಜ.28 ರಂದು ಹರಿಹರ ತಾಲೂಕಿನ ಗಡಿ ಭಾಗ ದುಗ್ಗಾವತ್ತಿ ಗ್ರಾಮದಿಂದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.

ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಅಂದು ನಗರದ ಗಾಂಧಿ  ಮೈದಾನದಲ್ಲಿ ಜನಜಾಗೃತಿ ಸಮಾವೇಶ ಮುಗಿಸಿಕೊಂಡು ಹರಿಹರದ ಪಂಚಮಸಾಲಿ ಪೀಠದಲ್ಲಿ ವಾಸ್ತವ್ಯ ಮಾಡಲಿದ್ದು, ಆ.29 ರಂದು ಬೆಳಗ್ಗೆ ನಗರದಿಂದ ಪಾದಯಾತ್ರೆಯು ದಾವಣಗೆರೆಗೆ ಮಾರ್ಗವಾಗಿ ಸಾಗಲಿದೆ ಎಂದರು.

ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಗುಳದಳ್ಳಿ ಶೇಖಪ್ಪ, ಭಾನುವಳ್ಳಿ ಆರ್‌. ಸಿ. ಪಟೇಲ್‌, ಎಂ.ಜಿ.ಕೊಟ್ರಪ್ಪ, ತಾಪಂ ಮಾಜಿ ಸದಸ್ಯ ಹಾಲೇಶ್‌ ಗೌಡ, ದೇವರಬೆಳಕೆರೆ ಸದಾಶಿವಪ್ಪ, ಎಚ್‌.ಎಂ.ಪರಮೇಶ್ವರಪ್ಪ, ಕುಣೆಬೆಳಕೆರೆ ಡಿ.ಬವಸರಾಜಪ್ಪ, ಸಾಲಕಟ್ಟಿ ಮಂಜಣ್ಣ, ಸಂಕ್ಲೀಪುರ ಹಾಲನಗೌಡ, ಗುತ್ತೂರು ಕರಿಬಸಪ್ಪ ಇತರರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *