Connect with us

Dvgsuddi Kannada | online news portal | Kannada news online

ಹರಿಹರದಲ್ಲಿ ನಡೆಯುವ ಪಂಚಮಸಾಲಿ ಪಾದಯಾತ್ರೆಯ ಸಮಾವೇಶದಲ್ಲಿ ವಚನಾನಂದ ಶ್ರೀ ಭಾಗವಹಿಸಲ್ಲ

ಪ್ರಮುಖ ಸುದ್ದಿ

ಹರಿಹರದಲ್ಲಿ ನಡೆಯುವ ಪಂಚಮಸಾಲಿ ಪಾದಯಾತ್ರೆಯ ಸಮಾವೇಶದಲ್ಲಿ ವಚನಾನಂದ ಶ್ರೀ ಭಾಗವಹಿಸಲ್ಲ

ಹರಿಹರ: 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಂಚಲಕ್ಷ ಪಾದಯಾತ್ರೆ ಜ.28 ರಂದು ಹರಿಹರ ನಗರದ ಗಾಂಧಿ  ಮೈದಾನದಲ್ಲಿ ನಡೆಯುವ ಜನಜಾಗೃತಿಸ ಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಚನಾನಂದ ಶ್ರೀಗಳು ದೂರ ಉಳಿಯಲಿದ್ದಾರೆ ಎಂದು ಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಹರಿಹರ ಪೀಠದ ಹಾಗೂ ಸ್ವಾಮೀಜಿಯವರ ಸಂಪೂರ್ಣ ಬೆಂಬಲವಿದ್ದರೂ ಸ್ಥಳೀಯ ಸಮಾವೇಶದಲ್ಲಿ ಭಾಗವಹಿಸಲ್ಲ. ಹರಪನಹಳ್ಳಿಯಲ್ಲಿ ಕೂಡಲ ಸಂಗಮ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಜಾಗೃತಿ ಸಮಾವೇಶದಲ್ಲೂ ವಚನಾನಂದ ಶ್ರೀಗಳು ಭಾಗವಹಿಸುತ್ತಿದ್ದಾರೆ. ನಂತರ ಜ.28 ರಂದು ಹರಿಹರ ತಾಲೂಕಿನ ಗಡಿ ಭಾಗ ದುಗ್ಗಾವತ್ತಿ ಗ್ರಾಮದಿಂದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.

ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಅಂದು ನಗರದ ಗಾಂಧಿ  ಮೈದಾನದಲ್ಲಿ ಜನಜಾಗೃತಿ ಸಮಾವೇಶ ಮುಗಿಸಿಕೊಂಡು ಹರಿಹರದ ಪಂಚಮಸಾಲಿ ಪೀಠದಲ್ಲಿ ವಾಸ್ತವ್ಯ ಮಾಡಲಿದ್ದು, ಆ.29 ರಂದು ಬೆಳಗ್ಗೆ ನಗರದಿಂದ ಪಾದಯಾತ್ರೆಯು ದಾವಣಗೆರೆಗೆ ಮಾರ್ಗವಾಗಿ ಸಾಗಲಿದೆ ಎಂದರು.

ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ಗುಳದಳ್ಳಿ ಶೇಖಪ್ಪ, ಭಾನುವಳ್ಳಿ ಆರ್‌. ಸಿ. ಪಟೇಲ್‌, ಎಂ.ಜಿ.ಕೊಟ್ರಪ್ಪ, ತಾಪಂ ಮಾಜಿ ಸದಸ್ಯ ಹಾಲೇಶ್‌ ಗೌಡ, ದೇವರಬೆಳಕೆರೆ ಸದಾಶಿವಪ್ಪ, ಎಚ್‌.ಎಂ.ಪರಮೇಶ್ವರಪ್ಪ, ಕುಣೆಬೆಳಕೆರೆ ಡಿ.ಬವಸರಾಜಪ್ಪ, ಸಾಲಕಟ್ಟಿ ಮಂಜಣ್ಣ, ಸಂಕ್ಲೀಪುರ ಹಾಲನಗೌಡ, ಗುತ್ತೂರು ಕರಿಬಸಪ್ಪ ಇತರರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});