Connect with us

Dvgsuddi Kannada | online news portal | Kannada news online

ಮೃತ ದೇಹ ಮಾರಿಕೊಂಡು ವಿದ್ಯುತ್ ಬಿಲ್ ಕಟ್ಟಿಕೊಳ್ಳಿ ಎಂದು ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ

ರಾಷ್ಟ್ರ ಸುದ್ದಿ

ಮೃತ ದೇಹ ಮಾರಿಕೊಂಡು ವಿದ್ಯುತ್ ಬಿಲ್ ಕಟ್ಟಿಕೊಳ್ಳಿ ಎಂದು ಪ್ರಧಾನಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ

ಭೋಪಾಲ್​: ಗಿರಣಿ ಕಾರ್ಖಾನೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್​ ಬಿಲ್​ ಕಟ್ಟಲು ಸಾಧ್ಯವಾಗದೇ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತರ್​ಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮೊದಲು  ಪ್ರಧಾನಿ ನರೇಂದ್ರ ಮೋದಿಯವರಿಗೆ ಏಳು ಪುಟಗಳ ಡೆತ್​ ನೋಟ್​ ಬರೆದಿಟ್ಟಿದ್ದಾನೆ.

ಮುನೇಂದ್ರ ರಾಜ್​ಪುತ್​ ಗಿರಣಿ ಕಾರ್ಖಾನೆಯನ್ನು ನಡೆಸುತ್ತಾನೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ನಷ್ಟದಲ್ಲಿತ್ತು. ಕಳೆದ ಕೆಲ ತಿಂಗಳಿನಿಂದ ವಿದ್ಯುತ್​ ಬಿಲ್ ಕಟ್ಟಲಾಗಲಿಲ್ಲ. 80 ಸಾವಿರ ರೂಪಾಯಿ ವಿದ್ಯುತ್​ ಬಿಲ್​ ಬಾಕಿಯಿದೆಯಂತೆ. ಅದೇ ಕಾರಣಕ್ಕೆ ವಿದ್ಯುತ್​ ನಿಗಮದ ಅಧಿಕಾರಿಗಳು ಕಾರ್ಖಾನೆಗೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ಮುನೇಂದ್ರಗೆ ಅವಮಾನಿಸಿದ್ದಾರಂತೆ. ಇದರಿಂದ ಮನನೊಂದ ಆತ ತನ್ನ ಕಾರ್ಖಾನೆಯ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಪ್ರಧಾನಿ ಮೋದಿಯವರೇ ನನಗೆ ನಿಮ್ಮ ಬಗ್ಗೆ ಗೌರವವಿದೆ. ನಿಮ್ಮ ಸರ್ಕಾರ ಅದ್ಭುತ ಕೆಲಸಗಳನ್ನು ಮಾಡಿದೆ. ಆದರೆ ಕೆಳ ಮಟ್ಟದಲ್ಲಿರುವ ಅಧಿಕಾರಿಗಳು ಬಡವರ ಬದುಕನ್ನು ಇನ್ನಷ್ಟು ಬರಡು ಮಾಡುತ್ತಿದ್ದಾರೆ. ವಿದ್ಯುತ್​ ನಿಗಮದ ಅಧಿಕಾರಿಗಳ ಟಾರ್ಚರ್​ನಿಂದಾಗೇ ನಾನಿಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.

ನನ್ನ ಮೃತ ದೇಹವನ್ನು ನಿಗಮದ ಅಧಿಕಾರಿಗಳಿಗೆ ಕೊಡಿ. ಬಳಕೆಗೆ ಬರುವ ಅಂಗಾಂಗಳನ್ನು ಮಾರಿಕೊಂಡು ಅವರು ವಿದ್ಯುತ್​ ಬಿಲ್​ ತುಂಬಿಸಿಕೊಳ್ಳಲಿ ಎಂದು ಹೇಳಿಕೊಂಡಿದ್ದಾನೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});