Connect with us

Dvgsuddi Kannada | online news portal | Kannada news online

KSRTC ಉದ್ಯೋಗಾಂಕ್ಷಿಗಳಿಗೆ  ಶಾಕ್: ಈ  ವರ್ಷ ಅನುಕಂಪದ  ಆಧಾರದ ಮೇಲಿನ ನೇಮಕಾತಿಗೆ ಬ್ರೇಕ್..!

ಪ್ರಮುಖ ಸುದ್ದಿ

KSRTC ಉದ್ಯೋಗಾಂಕ್ಷಿಗಳಿಗೆ  ಶಾಕ್: ಈ  ವರ್ಷ ಅನುಕಂಪದ  ಆಧಾರದ ಮೇಲಿನ ನೇಮಕಾತಿಗೆ ಬ್ರೇಕ್..!

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈ ವರ್ಷ ಯಾವುದೇ ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಕೆಎಸ್ ಆರ್ ಟಿಸಿಯ ನಿರ್ಧಾರ ಉದ್ಯೋಗಾಂಕ್ಷಿಗಳಿಗೆ ಶಾಕ್ ಆಗಿದ್ದು, ಅನುಕಂಪ ಆಧಾರದ ಮೇಲೆ  ಹುದ್ದೆಗೆ ಅರ್ಜಿ ಸಲ್ಲಿಸಿದವರ ಆಸೆಗೆ ಸರ್ಕಾರ ತಣ್ಣೀರೆರಿದಿದೆ.ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಕೆಎಸ್‌ಆರ್‌ಟಿಸಿ ಅನುಕಂಪ ಆಧಾರಿತ ನೇಮಕಾತಿಯನ್ನು ಈ ವರ್ಷ ಮಾತ್ರ ಕೈಬಿಡಲಾಗಿದೆ. ಅರ್ಜಿ ಸಲ್ಲಿಸುವವರು ಸಲ್ಲಿಸಬಹುದು. ಮುಂದೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಅರ್ಜಿಗಳನ್ನ ಪರಿಗಣಿಸಲಾಗುವುದು ಎಂದಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಆಕಾಲಿಕ ಮರಣ ಹೊಂದಿದರೆ,  ಅವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರಿತ ಮೇಲೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುತ್ತದೆ. ಕೊರೊನಾ ಕಾರಣಕ್ಕಾಗಿ ಈ ವರ್ಷ ನೇಮಕಾತಿ ಮುಂದೂಡಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top