Connect with us

Dvgsuddi Kannada | online news portal | Kannada news online

ಈ ಬಾರಿ ಮೈಕೊರೆಯುವ ಚಳಿ ಇರಲ್ಲ; ಸಾಮಾನ್ಯ ಚಳಿ ಇರಲಿದೆ…! ; ಈ ಸಲ ಹಿಂಗಾರು ಮಳೆ ಸಹ ದುರ್ಬಲ…..!

rain22

ಪ್ರಮುಖ ಸುದ್ದಿ

ಈ ಬಾರಿ ಮೈಕೊರೆಯುವ ಚಳಿ ಇರಲ್ಲ; ಸಾಮಾನ್ಯ ಚಳಿ ಇರಲಿದೆ…! ; ಈ ಸಲ ಹಿಂಗಾರು ಮಳೆ ಸಹ ದುರ್ಬಲ…..!

ಬೆಂಗಳೂರು: ಈ ಬಾರಿ ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಈ ಬಾರಿಯ ಚಳಿಗಾಲವೂ ಮೈಕೊರೆಯುವ ಚಳಿಯಿಂದ ಕೂಡಿರುವುದಿಲ್ಲ. ಸಾಮಾನ್ಯ ಚಳಿ ಅಷ್ಟೇ ಇರಲಿದೆ. ಇಡೀ ದೇಶದಲ್ಲಿಯೇ ನೈರುತ್ಯ ಮುಂಗಾರು ಕೊನೆಗೊಂಡಿದೆ. ಹಿಂಗಾರು ಮಳೆ ಅವಧಿ ಆರಂಭವಾಗಿದೆ. ಈ ಬಾರಿ ಹಿಂಗಾರು ಸಹ ದುರ್ಬಲವಾಗಿರಲಿದೆ. ಹಿಂಗಾರು ಅವಧಿಯಲ್ಲಿ ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಮಳೆಯಾಗಬೇಕು. ಸದ್ಯ ಮಳೆಗೆ ಪೂರಕ ವಾತಾವರಣವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದ ರಾಜ್ಯದಲ್ಲಿ ಈ ವರ್ಷ ಚಳಿಗಾಲ ಆರಂಭ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಸಾಮಾನ್ಯ ಚಳಿ ಇರುವ ಸಾಧ್ಯತೆಯಿದೆ.ಎಲ್‌ ನಿನೊ ವಿದ್ಯಮಾನ ಮರುಕಳಿಸಿದ್ದರಿಂದ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಮಳೆಗಾಲದ ಬಹುತೇಕ ದಿನಗಳಲ್ಲಿ ಬಿಸಿಲ ವಾತಾವರಣ ಕಂಡುಬಂದಿತ್ತು. ಚಳಿಗಾಲದ ಮೇಲೂ ಅದರ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು ಚಳಿ ಕಡಿಮೆ ಇರದೆ.

ಎಲ್‌ ನಿನೊ ಫೆಬ್ರುವರಿ ಅಥವಾ ಮಾರ್ಚ್ 15ರವರೆಗೆ ಇರಲಿದ್ದು ಚಳಿಗಾಲದಲ್ಲಿ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿಯುವ ಸಾಧ್ಯತೆ ತೀರ ಕಡಿಮೆ. ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿಯುವುದಿಲ್ಲ. ಫೆಬ್ರುವರಿ 15ರ ನಂತರ ಉಷ್ಣಾಂಶದಲ್ಲಿ ಮತ್ತೆ ಏರಿಕೆ ಆಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top