ಬೆಂಗಳೂರು: ಸಿಎಂ ಮತ್ತು ಸರ್ಕಾರದ ವಿರುದ್ಧ ಪದೇ ಪದೇ ಮಾತನಾಡುತ್ತಿದ್ದ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಏಕ ವಚನದಲ್ಲಿ ಕಿಡಿಕಾರಿದರು.
ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧ ಮಾತನಾಡುವ ಯತ್ನಾಳ್, ಕಾಂಗ್ರೆಸ್ ಬಿ ಟೀಂ ಮೆಂಬರ್ ಆಗಿದ್ದಾರೆ. ನೀನು ಶಾಸಕರಾಗಿ ಗೆದ್ದು ಬರಲು ಸಿಎಂ ಯಡಿಯೂರಪ್ಪ, ಬಿಜೆಪಿ, ಸಂಘ ಪರಿವಾರ ಆರ್ಶೀವಾದ ಪಡೆದಿದ್ದೀಯಾ. ಶಾಸಕರಾಗಿ ಗೆಲ್ಲುವಾಗ ಯಾರ ಕಾಲಿಗೆ ಬಿದಿದ್ದರೂ ಎಂಬುದು ಎಲ್ಲರಿಗೆ ಗೊತ್ತಿದೆ. ಪದೇ ಪದೇ ಸಿಎಂ ರಾಜೀನಾಮೆ ಕೇಳುವ ನೀನು ಮೊದಲು ರಾಜೀನಾಮೆ ನೀಡು. ಬಿಜೆಪಿ, ಸಂಘ ಪರಿಹಾವರ ಹೆಸರು ಹೇಳದೆ ಗೆದ್ದು ಬಂದು, ಆ ಮೇಲೆ ಪಕ್ಷ ಮತ್ತು ಸಿಎಂ ವಿರುದ್ಧ ಮಾತನಾಡುವಂತೆ ಸವಾಲು ಹಾಕಿದರು. ಯತ್ನಾಳ್ ಕಾಂಗ್ರೆಸ್ ಬಿ ಟೀಂ ರೀತಿ ಕೆಲಸ ಮಾಡಿದ್ಧಾರೆ ಆಕ್ರೋಶ ವ್ಯಕ್ತಪಡಿಸದರು.
ಯತ್ನಾಳ್ ನಾಯಕರ ವಿರುದ್ಧ ಮಾತನಾಡುವುದು ಇದೇ ಮೊದಲು ಅಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶೋಭಕರಂದ್ಲಾಜಿ ಸೇರಿದಂತೆ ಅನೇಕರ ವಿರುದ್ಧ ಮಾತನಾಡಿದ್ದಾರೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು.
ನಿನ್ನೆ ನಡೆದ ಪಂಚಮಸಾಲಿ ಸಮಾವೇಶದ ಉದ್ದೇಶ 2ಎ ಮೀಸಲಾತಿ ಕೇಳುವುದಾಗಿತ್ತು. ಆದರೆ, ಈ ಸಮಾವೇಶವನ್ನು ವಿಜಯಾನಂದ ಕಾಶಪ್ಪನವರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ವಿಜಯಾನಂದ ಕಾಶಪ್ಪನವರ ತಂದೆ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದರೂ, ಆಗ ನಿಮ್ಮ ತಾಯಿ ಕೂಡ ಶಾಸಕರಾಗಿದ್ದರೂ, ನಿಮ್ಮದೇ ಸರ್ಕಾರ ಕೂಡ ಇತ್ತು. ಆಗ ಎಲ್ಲಿ ಹೋಗಿತ್ತು ಈ ಹೋರಾಟ. ನಿಮ್ಮ ವಿರುದ್ಧ ಅನೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಇಂತಹವರನ್ನು ಪಂಚಮಸಾಲಿ ಸಮಾಜ ರಾಷ್ಟ್ರೀಯ ಅಧ್ಯಕ್ಷರಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶ್ರೀಗಳು ಅವರ ಯಾರನ್ನು ಕೇಳದೇ ಘೋಷಿಸಿದ್ದು ಖಂಡನೀಯ ಎಂದರು.
ಯಾವುದೇ ಮೀಸಲಾತಿ ನೀಡಬೇಕಾದರೆ ಅದಕ್ಕೆ ನೀತಿ-ನಿಯಮ ಇರುತ್ತದೆ. ಹೀಗಾಗಿ ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರವಾಗಿಯೂ ಸರ್ಕಾರ ಅಧ್ಯಯನಕ್ಕಾಗಿ ಹಿಂದುಳಿದ ವರ್ಗದ ಆಯೋಗಕ್ಕೆ ಶಿಫಾರಸ್ಸು ಮಾಡಿದೆ. ಮುಂದಿನ ದಿನಗಳಲ್ಲಿ ಲಿಂಗಾಯ ಎಲ್ಲಾ ಸಮುದಾಯವನ್ನು ಒಳ್ಳೆಯದಾಗುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.