Connect with us

Dvgsuddi Kannada | online news portal | Kannada news online

ಯತ್ನಾಳ್ ಕಾಂಗ್ರೆಸ್ ಬಿ ಟೀಂ ಮೆಂಬರ್:  ಸಿಎಂ ರಾಜಿನಾಮೆ ಕೇಳುವ ನೀನು ಮೊದಲು ರಾಜೀನಾಮೆ ನೀಡಿ ಗೆದ್ದು ಬಾ; ಏಕ ವಚನದಲ್ಲಿ ನಿರಾಣಿ ಕಿಡಿ

ಪ್ರಮುಖ ಸುದ್ದಿ

ಯತ್ನಾಳ್ ಕಾಂಗ್ರೆಸ್ ಬಿ ಟೀಂ ಮೆಂಬರ್:  ಸಿಎಂ ರಾಜಿನಾಮೆ ಕೇಳುವ ನೀನು ಮೊದಲು ರಾಜೀನಾಮೆ ನೀಡಿ ಗೆದ್ದು ಬಾ; ಏಕ ವಚನದಲ್ಲಿ ನಿರಾಣಿ ಕಿಡಿ

ಬೆಂಗಳೂರು: ಸಿಎಂ ಮತ್ತು ಸರ್ಕಾರದ ವಿರುದ್ಧ ಪದೇ ಪದೇ ಮಾತನಾಡುತ್ತಿದ್ದ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ  ಸಚಿವ ಮುರುಗೇಶ್ ನಿರಾಣಿ ಏಕ ವಚನದಲ್ಲಿ ಕಿಡಿಕಾರಿದರು.

ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧ ಮಾತನಾಡುವ ಯತ್ನಾಳ್, ಕಾಂಗ್ರೆಸ್ ಬಿ ಟೀಂ ಮೆಂಬರ್ ಆಗಿದ್ದಾರೆ. ನೀನು ಶಾಸಕರಾಗಿ ಗೆದ್ದು ಬರಲು ಸಿಎಂ ಯಡಿಯೂರಪ್ಪ, ಬಿಜೆಪಿ, ಸಂಘ ಪರಿವಾರ ಆರ್ಶೀವಾದ ಪಡೆದಿದ್ದೀಯಾ.  ಶಾಸಕರಾಗಿ ಗೆಲ್ಲುವಾಗ ಯಾರ ಕಾಲಿಗೆ ಬಿದಿದ್ದರೂ ಎಂಬುದು ಎಲ್ಲರಿಗೆ ಗೊತ್ತಿದೆ. ಪದೇ ಪದೇ ಸಿಎಂ ರಾಜೀನಾಮೆ ಕೇಳುವ ನೀನು ಮೊದಲು ರಾಜೀನಾಮೆ ನೀಡು. ಬಿಜೆಪಿ, ಸಂಘ ಪರಿಹಾವರ ಹೆಸರು ಹೇಳದೆ ಗೆದ್ದು ಬಂದು, ಆ ಮೇಲೆ ಪಕ್ಷ ಮತ್ತು ಸಿಎಂ ವಿರುದ್ಧ ಮಾತನಾಡುವಂತೆ ಸವಾಲು ಹಾಕಿದರು. ಯತ್ನಾಳ್ ಕಾಂಗ್ರೆಸ್ ಬಿ ಟೀಂ ರೀತಿ ಕೆಲಸ ಮಾಡಿದ್ಧಾರೆ ಆಕ್ರೋಶ ವ್ಯಕ್ತಪಡಿಸದರು.

ಯತ್ನಾಳ್ ನಾಯಕರ ವಿರುದ್ಧ ಮಾತನಾಡುವುದು ಇದೇ ಮೊದಲು ಅಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶೋಭಕರಂದ್ಲಾಜಿ ಸೇರಿದಂತೆ ಅನೇಕರ ವಿರುದ್ಧ ಮಾತನಾಡಿದ್ದಾರೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು.

ನಿನ್ನೆ ನಡೆದ ಪಂಚಮಸಾಲಿ ಸಮಾವೇಶದ ಉದ್ದೇಶ 2ಎ ಮೀಸಲಾತಿ ಕೇಳುವುದಾಗಿತ್ತು. ಆದರೆ, ಈ ಸಮಾವೇಶವನ್ನು ವಿಜಯಾನಂದ ಕಾಶಪ್ಪನವರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ವಿಜಯಾನಂದ ಕಾಶಪ್ಪನವರ ತಂದೆ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದರೂ, ಆಗ ನಿಮ್ಮ ತಾಯಿ ಕೂಡ ಶಾಸಕರಾಗಿದ್ದರೂ, ನಿಮ್ಮದೇ ಸರ್ಕಾರ ಕೂಡ ಇತ್ತು. ಆಗ ಎಲ್ಲಿ ಹೋಗಿತ್ತು ಈ ಹೋರಾಟ. ನಿಮ್ಮ ವಿರುದ್ಧ ಅನೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಇಂತಹವರನ್ನು ಪಂಚಮಸಾಲಿ ಸಮಾಜ ರಾಷ್ಟ್ರೀಯ ಅಧ್ಯಕ್ಷರಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಶ್ರೀಗಳು ಅವರ ಯಾರನ್ನು ಕೇಳದೇ ಘೋಷಿಸಿದ್ದು ಖಂಡನೀಯ ಎಂದರು.

ಯಾವುದೇ ಮೀಸಲಾತಿ ನೀಡಬೇಕಾದರೆ ಅದಕ್ಕೆ ನೀತಿ-ನಿಯಮ ಇರುತ್ತದೆ. ಹೀಗಾಗಿ ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರವಾಗಿಯೂ ಸರ್ಕಾರ ಅಧ್ಯಯನಕ್ಕಾಗಿ ಹಿಂದುಳಿದ ವರ್ಗದ ಆಯೋಗಕ್ಕೆ ಶಿಫಾರಸ್ಸು ಮಾಡಿದೆ. ಮುಂದಿನ ದಿನಗಳಲ್ಲಿ ಲಿಂಗಾಯ ಎಲ್ಲಾ ಸಮುದಾಯವನ್ನು ಒಳ್ಳೆಯದಾಗುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top