ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್ ಎಂಎಲ್ಸಿ ಬಿ. ಎಂ. ಫಾರೂಖ್ ಬೇಸರ ವ್ಯಕ್ತಪಡಿಸಿದ್ದು, ವಿಧಾನಪರಿಷತ್ ಗಲಾಟೆ ವೇಳೆ ಅವರನ್ನ ಬಲವಂತವಾಗಿ ಖುರ್ಚಿಯಿಂದ ಕೆಳಗಿಳಿಸಲಾಗಿತ್ತು. ಈ ಘಟನೆ ಬಳಿಕ ಅವರು ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಈ ಘಟನೆ ಬಳಿಕ ನಾನು ಧರ್ಮೇಗೌಡರನ್ನ ಭೇಟಿ ಮಾಡಿದ್ದೆ. ಅವರು ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಅವರು ಉಪಸಭಾಪತಿ ಸ್ಥಾನವನ್ನ ಬಯಸಿಯೇ ಇರಲಿಲ್ಲ. ಅವರ ಮುಖಭಾವ ನೋಡುತ್ತಿದ್ದರೆ, ಆ ಗಲಾಟೆ ನಡೆಯುವ ದಿನ ಯಾರದ್ದೋ ಮಾತಿಗೆ ಕಟ್ಟುಬಿದ್ದು ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರು ಎಂದೆನಿಸಿತ್ತು ಎಂದರು.
ಇಂದು ಬೆಳಗ್ಗೆ ಚಿಕ್ಕಮಗಳೂರು ರೈಲ್ವೆ ಹಳಿಯ ಬಳಿ ಧರ್ಮೇಗೌಡರ ಮೃತದೇಹ ಪತ್ತೆಯಾಗಿತ್ತು. ಮನನೊಂದಿದ್ದ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.



