Connect with us

Dvgsuddi Kannada | online news portal | Kannada news online

ದಾವಣಗೆರೆ: ದಾವಣಗೆರೆ-ಹರಿಹರ ನಗರ ಅಭಿವೃದ್ಧಿಗೆ 1,226 ಕೋಟಿ ಅನುದಾನ ನೀಡಲು ಸಿಎಂಗೆ ಮನವಿ

ದಾವಣಗೆರೆ

ದಾವಣಗೆರೆ: ದಾವಣಗೆರೆ-ಹರಿಹರ ನಗರ ಅಭಿವೃದ್ಧಿಗೆ 1,226 ಕೋಟಿ ಅನುದಾನ ನೀಡಲು ಸಿಎಂಗೆ ಮನವಿ

ದಾವಣಗೆರೆ: ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರದಿಂದ (ದೂಡಾ) 1,226 ಕೋಟಿ ಅಂದಾಜು ವೆಚ್ಚದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯಗೆ ದೂಡಾ ಅಧ್ಯಕ್ಷ, ಸದಸ್ಯರು, ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌, ಸದಸ್ಯರ ನಿಯೋಗ ಬೆಂಗಳೂರಲ್ಲಿ ಮನವಿ ಸಲ್ಲಿಸಿದರು.

ಬೇತೂರು ಗ್ರಾಮದಿಂದ ಬಾಡಾ ಕ್ರಾಸ್‌ವರೆಗೆ 36 ಮೀಟರ್ ವರ್ತುಲ ರಸ್ತೆ ಅಭಿವೃದ್ಧಿಗೆ 300 ಕೋಟಿ, ದೊಡ್ಡ ಬೂದಿಹಾಳ್‌ನಿಂದ ಯರಗುಂಟೆ, ದೊಡ್ಡಬಾತಿ, ಕುಂದುವಾಡ ಗ್ರಾಮಗಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿವರೆಗೆ ವರ್ತುಲ ರಸ್ತೆಗೆ 200 ಕೋಟಿ, ದಾವಣಗೆರೆ ಅಶೋಕ ಟಾಕೀಸ್‌ನಿಂದ ಈರುಳ್ಳಿ ಮಾರುಕಟ್ಟೆವರೆಗೆ ರೈಲ್ವೆ ಹಳಿಗಳಿಗೆ ಸಮನಾಂತರ ಸೇವಾ ರಸ್ತೆಯ ನಿರ್ಮಾಣಕ್ಕೆ 35 ಕೋಟಿ, ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು 25 ಕೋಟಿ ಬಿಡುಗಡೆಗೆ ಆಗ್ರಹಿಸಲಾಯಿತು.

ನಗರದ ರೈಲ್ವೆ ಸ್ಟೇಷನ್, ಖಾಸಗಿ ಬಸ್‌ ನಿಲ್ದಾಣ, ಅಶೋಕ ಟಾಕೀಸ್ ಮುಂಭಾಗ ಸ್ಕೈ ವಾಕ್‌ ನಿರ್ಮಿಸಲು 3 ಕೋಟಿ, ದಾವಣಗೆರೆ, ಹರಿಹರದಲ್ಲಿ ಸರ್ಕಾರಿ ನೌಕರರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ 50 ಕೋಟಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸಭಾಂಗಣಕ್ಕೆ 15 ಕೋಟಿ, ಹರಿಹರದ ಕೇಶವ ನಗರ, ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಟ್ರಕ್ ಟರ್ಮಿನಲ್ ಅಭಿವೃದ್ಧಿಗೆ 25 ಕೋಟಿ, ಸುಸಜ್ಜಿತ ಒಂದು ಮ್ಯೂಜಿಯಂ ನಿರ್ಮಿಸಲು 10 ಕೋಟಿ, ನಗರ ವಾಹನ ದಟ್ಟಣೆ ಮುಕ್ತವಾಗಿಸಲು ಪಿ.ಬಿ. ರಸ್ತೆಯಿಂದ ಹದಡಿ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ಮೇಲ್ತೇತುವೆ ನಿರ್ಮಾಣಕ್ಕೆ 500 ಕೋಟಿ ನೀಡುವಂತೆ ಮನವಿ ಮಾಡಲಾಯಿತು.

ಟಿವಿ ಸ್ಟೇಷನ್ ಕೆರೆ ಪ್ರವಾಸಿಗರನ್ನು ಆಕರ್ಷಿಸಲು, ವಾಟರ್ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸಲು 5 ಕೋಟಿ, ದಾವಣಗೆರೆ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 20 ಕೋಟಿ, ಬಾತಿ ಗುಡ್ಡದಿಂದ ಕುಂದುವಾಡ ಕೆರೆವರೆಗೆ ರೋಪ್‌ವೇ, ಬಾತಿ ಗುಡ್ಡದಲ್ಲಿ 150 ಅಡಿ ಎತ್ತರದ ದಾವಣಗೆರೆಗೆ ಅಭಿಮುಖವಾಗಿ ಆಂಜನೇಯ ಮೂರ್ತಿ/ ಬಸವಣ್ಣನವರ ಮೂರ್ತಿ ನಿರ್ಮಾಣಕ್ಕೆ 2 ಕೋಟಿ, ಜವಾಹರ್‌ಲಾಲ್ ನೆಹರೂ ತಾರಾಲಯ ಮಾದರಿಯಲ್ಲಿ
ತಾರಾಲಯ ನಿರ್ಮಾಣಕ್ಕೆ 10 ಕೋಟಿ.

ದಾವಣಗೆರೆ- ಹರಿಹರದಲ್ಲಿ 70:30 ಅನುಪಾತದ ಜಂಟಿ ಉದ್ಯಮದಲ್ಲಿ 500 ಎಕರೆಯಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಕೋರಲಾಯಿತು.ದೂಡಾ ಸದಸ್ಯರಾದ ಎಂ.ಮಂಜುನಾಥ ತಕ್ಕಡಿ, ಎಂ.ಆರ್. ವಾಣಿ ಬಕ್ಕೇಶ, ಜಬ್ಬಾರ್ ಖಾನ್, ಆಯುಕ್ತ ಹುಲ್ಮನಿ ತಿಮ್ಮಣ್ಣ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ಲತೀಫ್‌, ಉದಯಕುಮಾರ, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ್, ಎ.ಬಿ.ರಹೀಂ ಸಾಬ್‌, ಬಿ.ಎಚ್.ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ, ಎಲ್.ಡಿ.ಗೋಣೆಪ್ಪ, ಎಲ್.ಎಂ.ಎಚ್. ಸಾಗರ್, ಸವಿತಾ ಗಣೇಶ ಹುಲ್ಮನಿ, ಕಾಂಗ್ರೆಸ್ ಮುಖಂಡರಾದ ನ್ಯಾಮತಿ ಬಕ್ಕೇಶ, ಗಣೇಶ ಹುಲ್ಮನಿ, ನರೇಂದ್ರ, ಗಾಂಧಿ ನಗರ ರಮೇಶ ಇತರರು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top