ದಾವಣಗೆರೆ: ಜೇನುಹುಳುವನ್ನು ರಾಜ್ಯದ ಕೀಟ ಎಂದು ಘೋಷಿಸಲು ವನ್ಯಜೀವ ವೈವಿಧ್ಯ ಮಂಡಳಿ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸಲು ಕ್ರಮ ವಹಿಸಲಾಗುವುದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಜೇನು ಕೃಷಿಗೆ ಹೇರಳ ಅವಕಾಶಗಳಿದ್ದು, ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಯೋಜನೆಗಳಿವೆ. ಜೇನುತುಪ್ಪ ಉತ್ಪಾದನೆಯ ಜೊತೆಗೆ, ರೈತರಿಗೆ ಬೆಳೆಯಲ್ಲಿ ಇಳುವರಿ ಹೆಚ್ಚು ಪಡೆಯಲು ಜೇನು ಕೃಷಿ ನೆರವಾಗಲಿದೆ ಎಂದು ತಿಳಿಸಿದರು.